57 ಲಕ್ಷ ಬಿಪಿಎಲ್‌ ಪಡಿತರ ಚೀಟಿ ರದ್ದು


Team Udayavani, Jul 12, 2017, 4:00 AM IST

Ration-Card-600.jpg

ಶಿವಮೊಗ್ಗ: ‘ಸರ್ವಂ ಆಧಾರ ಮಯಂ’ ಎಂಬ ಮಂತ್ರ ಪಠಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆಯ ಪರಿಣಾಮ ಅನರ್ಹ ಪಡಿತರ ಚೀಟಿದಾರರ ಪತ್ತೆ ಹಚ್ಚುವ ಕೆಲಸ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಾಲಿಗೆ ವರದಾನವಾಗಿದೆ. ಆಧಾರ್‌ ಕಡ್ಡಾಯದ ಬಳಿಕ ಈ ತನಕ ಇಲಾಖೆ ರಾಜ್ಯಾದ್ಯಂತ ಬರೊಬ್ಬರಿ 57,88,296 ಅನರ್ಹ ಬಿಪಿಎಲ್‌ ಪಡಿತರ ಚೀಟಿಯನ್ನು ರದ್ದುಪಡಿಸಿದೆ.

ಬಿಪಿಎಲ್‌ ಪಡಿತರರನ್ನು ಬಡತನ ಮಟ್ಟದಿಂದ ಮೇಲೆತ್ತುವ ಉದ್ದೇಶದಿಂದ ಆ ವರ್ಗದ ಮಂದಿಗೆ ಸರಕಾರ ವಿವಿಧ ರೀತಿಯ ಸೌಲಭ್ಯ ನೀಡಿತ್ತು. ಆದರೆ ನಕಲಿ ಬಿಪಿಎಲ್‌ ಕಾರ್ಡುಗಳೇ ಹೆಚ್ಚಾಗಿ ಸರಕಾರದ ಆಶಯದ ಮೂಲಕ್ಕೇ ಕೊಡಲಿಯೇಟು ಬಿದ್ದಿತ್ತು. ಸರಕಾರದ ಹಣ ಅನವಶ್ಯಕವಾಗಿ ಹರಿದು ಹೋಗಿತ್ತು. ಈ ಹೊತ್ತಿನಲ್ಲಿ ನೆರವಿಗೆ ಬಂದ ‘ಆಧಾರ್‌’ ಈ ನಕಲಿ ಕಾರ್ಡುಗಳನ್ನು ದೊಡ್ಡ ಮಟ್ಟದಲ್ಲಿ ನಿರ್ಮೂಲನೆ ಮಾಡಿದೆ. ಒಂದು ಕಾಲಕ್ಕೆ ಐಚ್ಛಿಕ ಆಗಿದ್ದ ಆಧಾರ್‌ ಇಂದು ಪ್ರತಿಯೊಂದಕ್ಕೂ ಕಡ್ಡಾಯವಾಗತೊಡಗಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಧಾರ್‌ ಅನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳತೊಡಗಿದೆ.

ಲಿಂಕ್‌ ಇಲ್ಲದ ಕಾರ್ಡ್‌ ಅನರ್ಹ: ಪಡಿತರ ಚೀಟಿಗೆ ಆಧಾರ್‌ ಸಂಪರ್ಕಗೊಳಿಸುವುದನ್ನು ಕಡ್ಡಾಯಗೊಳಿಸಿತು. ಪಡಿತರ ಚೀಟಿಯೊಂದಿಗೆ ಆಧಾರ್‌ ಲಿಂಕ್‌ ಮಾಡಿಕೊಳ್ಳಲು ನೀಡಲಾಗಿದ್ದ ಮಾ.31ರ ಅವಧಿ ಮುಗಿದ ಅನಂತರ ಆಧಾರ್‌ ಲಿಂಕ್‌ ಇಲ್ಲದ ಪಡಿತರ ಚೀಟಿಯನ್ನು ಹಂತ ಹಂತವಾಗಿ ರದ್ದು ಮಾಡುತ್ತ ಬಂದಿರುವ ಇಲಾಖೆ ಈ ತನಕ 57ಲಕ್ಷ ಅನರ್ಹ ಪಡಿತರ ಚೀಟಿಯನ್ನು ರದ್ದು ಮಾಡಿರುವುದು ಗರಿಷ್ಠ ಸಾಧನೆಯಾಗಿದೆ. ಇದರ ಪರಿಣಾಮ ಒಂದು ಕಾರ್ಡ್‌ಗೆ ಒಂದು ತಿಂಗಳಿಗೆ 5ಕೆಜಿ ಅಕ್ಕಿ ಲೆಕ್ಕ ಹಿಡಿದರೂ ಒಂದು ತಿಂಗಳಿಗೆ 2,89,41,480 ಕೆಜಿ ಅಕ್ಕಿ ಉಳಿತಾಯವಾದಂತಾಗಿದೆ.

ರಾಜ್ಯದಲ್ಲಿ ಗರಿಷ್ಠ ಮಟ್ಟದಲ್ಲಿ ಬಿಪಿಎಲ್‌ ಕಾರ್ಡ್‌ ರದ್ದಾದ ಜಿಲ್ಲೆಗಳಲ್ಲಿ ಹೈದರಾಬಾದ್‌ ಕರ್ನಾಟಕ ಜಿಲ್ಲೆಗಳು ಮುಂಚೂಣಿಯಲ್ಲಿವೆ. ಈ ಪೈಕಿ ಕಲಬುರ್ಗಿ 4,20,037, ರಾಯಚೂರು 4,19,766, ವಿಜಯಪುರ 3,63,219, ಬೆಳಗಾವಿ 3,41,441 ಹಾಗೂ ಬಳ್ಳಾರಿ 2,66,080 ಕಾರ್ಡ್‌ಗಳು ಸೇರಿವೆ. ಪ್ರಸ್ತುತ ರಾಜ್ಯಾದ್ಯಂತ 3,54,59,461 ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ದಾರರು ಉಳಿದುಕೊಂಡಿದ್ದಾರೆ.

ಆಧಾರ್‌ ಕಡ್ಡಾಯ: ರಾಜ್ಯಾದ್ಯಂತ ಅನರ್ಹ ಹಾಗೂ ನಕಲಿ ಪಡಿತರ ಚೀಟಿಗಳು ಇವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಡಿತರ ಚೀಟಿಯೊಂದಿಗೆ ಪಡಿತರ ಕುಟುಂಬದ ಪ್ರತಿಯೊಬ್ಬರೂ ತಮ್ಮ ಆಧಾರ್‌ ಅನ್ನು ಪಡಿತರ ಚೀಟಿ ಸಂಖ್ಯೆಯೊಂದಿಗೆ ಕಡ್ಡಾಯವಾಗಿ ಲಿಂಕ್‌ ಮಾಡಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚನೆ ನೀಡಿತ್ತು. ಆರಂಭದಲ್ಲಿ ಇದನ್ನು ಪಡಿತರ ಚೀಟಿದಾರರು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾವಾಗ ಮಾ.31ರ ಅನಂತರವೂ ಬಹಳಷ್ಟು ಪಡಿತರ ಚೀಟಿದಾರರು ಆಧಾರ್‌ನ್ನು ಪಡಿತರ ಚೀಟಿಯೊಂದಿಗೆ ಲಿಂಕ್‌ ಮಾಡಿಕೊಳ್ಳಲಿಲ್ಲವೋ ಆಗ ಇಲಾಖೆ ಬಿಗಿ ಕ್ರಮಕ್ಕೆ ಮುಂದಾಯಿತು. ಇದರ ಪರಿಣಾಮ ಆಧಾರ್‌ನೊಂದಿಗೆ ಲಿಂಕ್‌ ಮಾಡಿ ಕೊಳ್ಳದ ಪಡಿತರ ಚೀಟಿಗೆ ಆಹಾರ ವಿತರಣೆಯನ್ನೇ ರದ್ದುಪಡಿಸಿತು. ಇದರಿಂದಾಗಿ ಲಕ್ಷಾಂತರ ಕ್ವಿಂಟಲ್‌ ಪಡಿತರ ಉಳಿತಾಯವಾಯಿತು. ಮಾತ್ರವಲ್ಲ ನಕಲಿ ಕಾರ್ಡುಗಳ ಲೆಕ್ಕ ಸಿಗತೊಡಗಿತು. ಬಹಳಷ್ಟು ಪ್ರಕರಣದಲ್ಲಿ ಪಡಿತರ ಚೀಟಿ ಯಲ್ಲಿರುವವರ ಪೈಕಿ ಒಬ್ಬರು ತಮ್ಮ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಿಕೊಂಡಿರುತ್ತಾರೆ. ಉಳಿದವರು ಮಾಡಿಕೊಂಡಿರುವುದಿಲ್ಲ. ಅಂತಹ ಸಂದರ್ಭದಲ್ಲೂ ಪಡಿತರ ಚೀಟಿ ರದ್ದಾಗುತ್ತದೆ.

ಇನ್ನಾದರೂ ಆಧಾರ್‌ ಲಿಂಕ್‌ ಮಾಡಿ
ಒಂದು ವೇಳೆ ಪಡಿತರ ಚೀಟಿಯಲ್ಲಿರುವವರ ಪೈಕಿ ಯಾರೊಬ್ಬರೂ ಆಧಾರ್‌ ಲಿಂಕ್‌ ಮಾಡಿಸಿಕೊಂಡಿರದಿದ್ದರೆ ಅಂತಹ ಪಡಿತರ ಚೀಟಿ ತಾನಾಗಿಯೇ ರದ್ದಾಗುತ್ತದೆ. ಆಗ ಸಕಾಲ ವ್ಯವಸ್ಥೆಯಡಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಜವಾಗಿಯೂ ಬಿಪಿಎಲ್‌ ಅರ್ಹತೆ ಇದ್ದೂ ಪಡಿತರ ಚೀಟಿಯಲ್ಲಿರುವವರ ಪೈಕಿ ಒಬ್ಬರು ಆಧಾರ್‌ ಲಿಂಕ್‌ ಮಾಡಿಕೊಂಡು ಉಳಿದವರು ಮಾಡಿಕೊಳ್ಳದಿದ್ದರೆ ತಕ್ಷಣವೇ ಸಮೀಪದ ಖಾಸಗಿ ಸೇವಾ ಕೇಂದ್ರ ಅಥವಾ ಇಲಾಖೆಯ ಕಚೇರಿಗೆ ತೆರಳಿ ಲಿಂಕ್‌ ಮಾಡಿಸಬಹುದು. ಹೊಸದಾಗಿ ರಾಜ್ಯಾದ್ಯಂತ ಬಿಪಿಎಲ್‌ ಪಡಿತರ ಚೀಟಿ ಕೋರಿ 1,40,2,056 ಅರ್ಜಿ ಸಲ್ಲಿಕೆಯಾಗಿದೆ. ಈ ಪೈಕಿ 16,81,079 ಅರ್ಜಿದಾರರು ಅಗತ್ಯ ದಾಖಲೆ ಹಾಗೂ ಪ್ರಕ್ರಿಯೆ ಪೂರೈಸಿದ್ದು, ಇದರಲ್ಲಿ 8,62,860 ಅರ್ಜಿ ಮೊದಲ ಹಂತದಲ್ಲಿ ವಿಲೇವಾರಿಗೆ ಸಿದ್ಧಗೊಂಡಿವೆ.

– ಗೋಪಾಲ್‌ ಯಡಗೆರೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.