Karnataka Govt; ತೀರ್ಥಹಳ್ಳಿಗೆ ನೂತನ ತಹಶೀಲ್ದಾರ್ ಆಗಿ ಜಕ್ಕಣ್ಣ ಗೌಡರ್ ನೇಮಕ!
ಇನ್ನಾದರೂ ಸರಿ ಆಗುತ್ತಾ ತಾಲೂಕು ಆಡಳಿತ!?
Team Udayavani, Oct 31, 2023, 5:21 PM IST
ತೀರ್ಥಹಳ್ಳಿ: ತೀರ್ಥಹಳ್ಳಿ ನೂತನ ತಹಶೀಲ್ದಾರ್ ಆಗಿ ಜಕ್ಕಣ್ಣ ಗೌಡರ್ ಅವರನ್ನು ಸರ್ಕಾರ ನಿಯೋಜನೆ ಮಾಡಿ ಆದೇಶವನ್ನು ಹೊರಡಿಸಿದೆ.
ತೀರ್ಥಹಳ್ಳಿಯಲ್ಲಿ ಹಂಗಾಮಿ ತಹಶೀಲ್ದಾರರಾಗಿ ಇದುವರೆಗೆ ಲಿಂಗರಾಜು ಅವರು ಕೆಲಸ ಮಾಡುತ್ತಿದ್ದರು. ಈಗ ಜಕ್ಕಣ್ಣಗೌಡರ್ ನೇಮಕದಿಂದಾಗಿ ತಾಲೂಕು ಆಡಳಿತಕ್ಕೆ ಚುರುಕು ಸಿಗಬಹುದೇ ಎಂಬ ನಿರೀಕ್ಷೆ ಮೂಡಿದೆ.
ತೀರ್ಥಹಳ್ಳಿ ತಹಶೀಲ್ದಾರರಾಗಿ ಇತ್ತೀಚಿಗೆ ಅಮೃತ್ ಅತ್ರೆಶ್ ಅವರು ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ಬಳಿಕ ಈ ಸ್ಥಾನ ಖಾಲಿ ಇದ್ದು ಹಂಗಾಮಿ ತಹಶೀಲ್ದಾರರಾಗಿಲಿಂಗರಾಜು ಅವರು ಕೆಲಸ ಮಾಡುತ್ತಾ ಇದ್ದರು.ಇದೀಗ ಜಕಣ್ಣಗೌಡರ್ ಅವರನ್ನ ಸರ್ಕಾರ ನೇಮಕ ಮಾಡಿ ಆದೇಶವನ್ನು ಹೊರಡಿಸಿದೆ.
ತಾಲೂಕು ಕಚೇರಿಯಲ್ಲಿ ಲಂಚ ಹಾಗೂ ಇತರೆ ಸೇರಿದಂತೆ ದಾಖಲೆಗಳ ಸಮಸ್ಯೆ ಇದೆ. ರೈತರು ಮತ್ತು ಜನರ ದಾಖಲೆಗಳು ಬೇಗ ಸಿಗಬೇಕು, ಜನರ ಕೆಲಸ ಪೂರ್ಣಗೊಳಿಸುತ್ತಿಲ್ಲ ಎನ್ನುವ ದೂರುಗಳು ಇವೆ. ಈ ಹಿನ್ನಲೆಯಲ್ಲಿ ಜಕ್ಕಣ್ಣ ಗೌಡರ್ ಅವರ ಆಗಮನ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್ ತೀರ್ಪು
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ