Population; ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಿರಿ: ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ

ಮಕ್ಕಳು ಭಾರ ಎಂತಾದರೆ ಹೆತ್ತು ಮಠಕ್ಕೆ ಕೊಡಿ....

Team Udayavani, Mar 22, 2024, 7:40 PM IST

1-sdsad

ಸಾಗರ: ನಮ್ಮನ್ನು ಯಾರು ಬೇಕಾದರೂ ಟೀಕಿಸಿದರೂ ಪರವಾಗಿಲ್ಲ. ನಾವು ಹೇಳುವುದು ಸಂತತಿ ಎಂಬುದು ಸಂಪತ್ತು. ಮಕ್ಕಳು ಭಾಗ್ಯ ಎಂಬುದು ಹೋಗಿ ಭಾರ ಎಂದಾಗಿದೆ. ನಾವು ಹೇಳುತ್ತಿದ್ದೇವೆ, ಭಾರ ಎಂತಾದರೆ ಹೆತ್ತು ಮಠಕ್ಕೆ ಕೊಡಿ. ನಾವು ತಾಯಿಯಂತೆ ಸಾಕಿ ಸಮಾಜಕ್ಕೆ ಒದಗಿಸುತ್ತೇವೆ. ಈ ಮನಸ್ಥಿತಿ ಬದಲಾಗದಿದ್ದರೆ ಕ್ಷೀಣಿಸುತ್ತಿರುವ ಯುವ ಜನಾಂಗದ ಸಮಸ್ಯೆಗೆ ಉತ್ತರವಿಲ್ಲ ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಮಂಕಳಲೆಯ ಶಂಭು ಲಿಂಗೇಶ್ವರ, ಮಹಾಕಾಳಿ ಹಾಗೂ ಪರಿವಾರ ದೇವರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮದ ಪುನರ್ನವ ವೇದಿಕೆಯಲ್ಲಿ ಶುಕ್ರವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಸಂಸ್ಕೃತಿಯ ಮೂಲಬೇರು ಉಳಿಯಬೇಕಿದ್ದರೆ ಮನೆಯಲ್ಲಿ ಸಂತತಿ ಸಮೃದ್ಧಿಯೂ ಇರಬೇಕು. ನಾವು ಕುರುಡಾಗಿ ಕುಟುಂಬ ಯೋಜನೆಯ ಮೊರೆ ಹೋಗಿದ್ದೇವೆ. ಈ ಮೂಲಕ ಪ್ರಕೃತಿಗೆ, ಪರಂಪರೆಗೆ ವಿರುದ್ಧವಾಗಿ ಹೋಗುತ್ತಿದ್ದೇವೆ. ಅದರಲ್ಲೂ ಒಳ್ಳೆಯ ಕುಟುಂಬಗಳಲ್ಲಿಯೇ ಸಂತತಿ ಕಡಿಮೆಯಾಗುತ್ತಿದೆ. ಇದು ಒಳ್ಳೆಯ ಮಾದರಿ ಅಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಜಗತ್ತಿನಲ್ಲಿ ಹೆಸರು ಮಾಡಿ ಪತನಗೊಂಡ ಅದೆಷ್ಟೋ ಸಾಮ್ರಾಜ್ಯಗಳು ಮತ್ತೆ ಎದ್ದು ಬಂದ ದಾಖಲೆಯೇ ಇಲ್ಲ. ಹೋಗಿದ್ದು ಹೋಗಿದ್ದೇ. ಸೂರ್ಯ ಮುಳುಗದ ಸಾಮ್ರಾಜ್ಯವಾಗಿದ್ದ ಆಂಗ್ಲರು ಮರೆಯಾದರು. ಮೊಘಲರು ಅಳಿದರು, ಇವ್ಯಾವುದೂ ಮತ್ತೆ ಚಿಗುರಿಲ್ಲ. ಪತನವಾಗಿರುವುದು ಪ್ರಶ್ನೆ ಅಲ್ಲ. ಆದರೆ ಮತ್ತೆ ಮತ್ತೆ ಎದ್ದು ನಿಲ್ಲಲು ಅಂತಃಶಕ್ತಿ ಬೇಕು. ಅಂತಹದನ್ನು ನಮ್ಮ ಸನಾತನ ಧರ್ಮದ ಆಧಾರವಾದ ದೇವಾಲಯಗಳು ತೋರಿವೆ. ಮಂಕಳಲೆಯ ಶಂಭುಲಿಂಗೇಶ್ವರ ಮಹಾಕಾಶಿ ದೇವಾಲಯಗಳ ಪುನರ್ನವ ಅದನ್ನು ಜಗತ್ತಿಗೆ ಸಾರಿ ಹೇಳಿದೆ ಎಂದರು.

ದೇವರಿಗೆ ಕೊಡುವುದು ಒಂದು ಯೋಗ, ಅವಕಾಶ. ದೇವಸ್ಥಾನದ ವಿಚಾರದಲ್ಲಿ ನಾವೆಲ್ಲರೂ ಒಂದಾಗಬೇಕು. ಸಣ್ಣಬುದ್ಧಿ, ಕೆಟ್ಟ ಮನಸ್ಸು ಮಾಡಬಾರದು. ನಿರ್ವಂಚನೆಯಿಂದ, ಸರ್ವರಿಗೂ ಒಳಿತಾಗಲಿ ಎನ್ನುವ ಮನೋಭಾವದಿಂದ ಕೈ ಎತ್ತಿ ಕೊಡಬೇಕು ಎಂದು ಹೇಳಿದರು.

ದೇವಸ್ಥಾನದ ಮಹಾದಾನಿ ದೇವಕಮ್ಮ, ನಾಗೇಂದ್ರ ಭಟ್ ಇಕ್ಕೇರಿ, ಸಿಗಂದೂರು ಪ್ರಧಾನ ಅರ್ಚಕ ಶೇಷಗಿರಿ ಭಟ್, ವಿದ್ವಾನ್ ವಿಷ್ಣುಪ್ರಸಾದ್ ಪುಚ್ಚುಕಾಡು, ಚಿಪ್ಳಿ ಸುಬ್ರಹ್ಮಣ್ಯ, ಗಣಪತಿ ಮತ್ತಿಕೊಪ್ಪ, ಮೊದಲಾದವರು ಹಾಜರಿದ್ದರು. ಎಚ್.ಕೆ. ಗಣಪತಿ ಹುಲಿಮನೆ ಸ್ವಾಗತಿಸಿದರು. ಸಮರ್ಥ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಿತಿ ಅಧ್ಯಕ್ಷ ಗಣಪತಿ ವರದಾಮೂಲ ವಂದಿಸಿದರು. ಹು. ಭಾ.ಅಶೋಕ, ಮಂಜಪ್ಪ ನಿರೂಪಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ದೇವರ ಪ್ರತಿಷ್ಠಾಪನೆ, ಕುಂಭಾಭಿಷೇಕ ಕಾರ‍್ಯಕ್ರಮಗಳು ಸಂಪನ್ನಗೊಂಡವು.

ಟಾಪ್ ನ್ಯೂಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Karnataka CM ಸಿದ್ದುಗೆ ಮಿಷನ್‌ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್‌ ನಂಬಿಕೆ: ಜೆ.ಪಿ.ನಡ್ಡಾ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.