ವರ್ಷದಲ್ಲಿ ಒಂದಕ್ಕೆರಡು ವಾಹನಗಳ ಏರಿಕೆ; ಕರೂರಿನಲ್ಲಿ ವಾಹನಗಳ ಪೂಜೆ
Team Udayavani, Nov 4, 2021, 5:19 PM IST
ಸಾಗರ: ತಾಲೂಕಿನ ಕರೂರಿನ ದುರ್ಗಾಂಬಾ ಹಾಗೂ ಮಹಾಗಣಪತಿ ದೇವಸ್ಥಾನದಲ್ಲಿ ದೀಪಾವಳಿಯ ಅಮಾವಾಸ್ಯೆ ಹಾಗೂ ಪಾಡ್ಯದ ದಿನ ಪೂಜೆ ಹೊಂದುವ ವಾಹನಗಳ ಮಾಲಿಕರಿಗೆ ಶ್ರೇಯಸ್ಸಾಗುತ್ತದೆ ಎಂಬ ಪ್ರತೀತಿಯ ಹಿನ್ನೆಲೆಯಲ್ಲಿ ಗುರುವಾರ ನೂರಾರು ವಾಹನಗಳ ಪೂಜೆ ನಡೆಯಿತು. ಹೂವಿನ ದಂಡೆಗಳಿಂದ ಅಲಂಕೃತವಾದ ಕ್ಯಾಂಟರ್, ವ್ಯಾನ್, ಬೈಕ್, ಕಾರುಗಳ ಪೂಜೆ ನೆರವೇರಿತು.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ತುಮರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಕರೂರು ಮಾತನಾಡಿ, ಐದು ದಶಕಗಳ ಹಿಂದಿನಿಂದಲೂ ಈ ಪ್ರವೃತ್ತಿ ಕಂಡುಬಂದಿದೆ. ಇಲ್ಲಿನ ದೇವಸ್ಥಾನಗಳಲ್ಲಿ ನಡೆದ ವಾಣಿಜ್ಯ ವಾಹನಗಳ ಪೂಜೆಯ ನಂತರ ಮುಂದಿನ ವರ್ಷಗಳಲ್ಲಿ ಒಂದಕ್ಕೆರಡು ವಾಹನಗಳಾಗುತ್ತವೆ. ಆಕಸ್ಮಿಕಗಳು, ಅವಘಡಗಳು ಆಗುವುದಿಲ್ಲ. ವಾಹನ ಮಾಲೀಕರಿಗೆ ಶ್ರೇಯಸ್ಸಾಗುತ್ತದೆ ಎಂಬ ನಂಬಿಕೆಯಿದೆ. ಅದು ನಿಜವಾಗುತ್ತಿರುವುದರಿಂದಲೇ ಈ ಸಮಯದ ಪೂಜೆಗೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಇದನ್ನೂ ಓದಿ:- ಕಾನೂನು ಸಮ ಸಮಾಜದ ಶಕ್ತಿ: ಬಸವಪ್ರಭು ಶ್ರೀ
ಈ ಹಿಂದೆ ಇದೇ ದೇವಸ್ಥಾನಗಳಲ್ಲಿ ಅವತ್ತಿನ ಎತ್ತಿನ ಗಾಡಿಗಳ ಪೂಜೆ ನಡೆಯುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಬೈಕ್ ಹಾಗೂ ಕಾರು, ಟ್ರಕ್, ಜೀಪ್ ಮೊದಲಾದವುಗಳ ಪೂಜೆ ನಡೆಯುತ್ತಿದೆ. ಇಲ್ಲಿನ ದೇವಸ್ಥಾನಗಳನ್ನು ಮೂರು ಸುತ್ತು ಸುತ್ತಿ, ಗ್ರಾಮಸ್ಥರಿಗೆಲ್ಲ ಸಿಹಿ ಹಂಚಿ ಪೂಜೆ ಸಲ್ಲಿಸಲಾಗುತ್ತದೆ. ದೊಡ್ಡಬ್ಬದ ಸಂದರ್ಭದ ಎರಡು ದಿನ ಈ ಪೂಜೆ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !