ಸಾಗರ -ಬೆಂಗಳೂರು ರೈಲು: ನಿಲುಗಡೆ ಸಮಯ ವಿಸ್ತರಣೆ
Team Udayavani, Feb 9, 2022, 3:47 PM IST
ಸಾಗರ: ರೈಲ್ವೆ ಇಲಾಖೆಯು ತಾಳಗುಪ್ಪದಿಂದ ಬೆಂಗಳೂರಿಗೆ ಹೋಗುವ ಟ್ರೈನಿನ ನಿಲುಗಡೆ ಸಮಯವನ್ನು ಸಾಗರ ಸ್ಟೇಷನ್ನಿನಲ್ಲಿ ಈಗ ಇದ್ದ ಎರಡು ನಿಮಿಷದಿಂದ ಐದು ನಿಮಿಷಗಳಿಗೆ ಪ್ರಯೋಗಾತ್ಮಕವಾಗಿ 6 ತಿಂಗಳ ಕಾಲಕ್ಕೆ ಹೆಚ್ಚಿಸಿದೆ.
ಸಾಗರ ರೈಲ್ವೆ ಸ್ಟೇಷನ್ನಿನಲ್ಲಿ ಪಾರ್ಸಲ್ಗಳ ಬುಕಿಂಗ್ ಹೆಚ್ಚಿಸಲು ಈ ನಿರ್ಧಾರವನ್ನು ರೈಲ್ವೆ ಇಲಾಖೆ ತೆಗೆದುಕೊಂಡಿದೆ. ಸಾರ್ವಜನಿಕರಿಗೆ ಇದರಿಂದ ಅತ್ಯಂತ ಅನುಕೂಲವಾಗಲಿದ್ದು ಟ್ರೈನ್ ಹತ್ತಲು ಹಾಗೂ ಇಳಿಯಲು ಇರುವ ತೊಂದರೆ ದೂರವಾಗಲಿದ್ದು ಪಾರ್ಸೆಲ್ ಸರ್ವಿಸ್ಗೂ ಅನುಕೂಲವಾಗಲಿದೆ.
ಅತ್ಯಂತ ಕಡಿಮೆ ದರದ ಹಾಗೂ ಅನುಕೂಲಕರವಾದ ರೈಲ್ವೆ ಪಾರ್ಸೆಲ್ ಸರ್ವಿಸ್ ಅನ್ನು ಸಾರ್ವಜನಿಕರು ಬಳಸಿಕೊಳ್ಳಬೇಕೆಂದು ರೈಲ್ವೆ ಅಧಿಕಾರಿಗಳು ಸಹ ಮನವಿ ಮಾಡಿಕೊಂಡಿದ್ದಾರೆ. ಸಾಗರ ರೈಲ್ವೇ ಸ್ಟೇಷನ್ನಲ್ಲಿ ಈ ಸೇವೆಯ ಬಳಕೆ ಯಶಸ್ವಿಯಾದರೆ ಈ ನಿಲುಗಡೆಯ ಸಮಯ ಹೆಚ್ಚಿಸಿರುವ ನಿರ್ಧಾರ ಶಾಶ್ವತವಾಗಿ ಉಳಿಯುತ್ತದೆ ಎಂದು ಸಾಗರ ಬಿಜೆಪಿಯ ಸಾಮಾಜಿಕ ಜಾಲತಾಣದ ವಿನಾಯಕ್ ರೇವಣಕರ್ ಹಾಗೂ ರಾಧಿಕಾ ಆರ್. ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka CM ಸಿದ್ದುಗೆ ಮಿಷನ್ ಮೇಲೆ ನಂಬಿಕೆ ಇಲ್ಲ,ಬರೀ ಕಮಿಷನ್ ನಂಬಿಕೆ: ಜೆ.ಪಿ.ನಡ್ಡಾ
Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ
State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ
Modi ಒಬ್ಬ ಸುಳ್ಳುಗಾರ: ಸಚಿವ ಸಂತೋಷ್ ಲಾಡ್ ಆರೋಪ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !