ಗೋ ಜಾಗೃತಿಗೆ ಮುನ್ನುಡಿ ಬರೆದಿದ್ದು ಶ್ರೀಮಠ


Team Udayavani, Mar 12, 2022, 3:34 PM IST

Udayavani Kannada Newspaper

ಹೊಸನಗರ: ವಿಶಿಷ್ಟ ಕಾರ್ಯಕ್ರಮದ ಮೂಲಕ ಗೋಜಾಗೃತಿಗೆ ಮುನ್ನುಡಿ ಬರೆದಿದ್ದು ಹೊಸನಗರದ ಶ್ರೀ ರಾಮಚಂದ್ರಾಪುರ ಮಠ. ಇದೀಗ ವಿಶ್ವದ ಎಲ್ಲೆಡೆ ಗೋ ಮಂತ್ರ ಮೊಳಗುತ್ತಿದೆ ಎಂದು ಶ್ರೀ ರಾಘವೇಶ್ವರ ಸ್ವಾಮೀಜಿ ಹೇಳಿದರು.

ಶ್ರೀಮಠದ ಗೋವರ್ಧನ ಗಿರಿಧಾರಿ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 11 ದೇಶಗಳ ಜನರನ್ನು ಒಳಗೊಂಡಂತೆ ನಡೆದ ವಿಶ್ವ ಗೋಸಮ್ಮೇಳನ, ಒಂದೂವರೆ ಕೋಟಿ ಹಸ್ತಾಕ್ಷರಹೊಂದಿದ ವಿಶ್ವ ಮಂಡಲ ಗೋ ಗ್ರಾಮಯಾತ್ರೆ, ರತ್ನಾಕ್ಷರ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಶ್ರೀಮಠ ಸಾಕ್ಷಿಯಾಗಿದೆ.

ನಂತರ ಗೋಜಾಗೃತಿ ಕಾಡ್ಗಿಚ್ಚಿನಂತೆ ವಿಶ್ವದೆಲ್ಲಡೆ ಪಸರಿಸಿ ಎಲ್ಲೆಲ್ಲೋ ಗೋಸಂರಕ್ಷಣಾ ಮಂತ್ರ ಮೊಳಗುತ್ತಿದೆ. ಹೊಸ ಕಲ್ಪನೆಯೊಂದಿಗೆ ಗೋಸ್ವರ್ಗ ಚಾಲನೆಗೆ ತರಲಾಗಿದೆ. ಇದೀಗ ಗೋಸ್ವರ್ಗ ಮಾಡಲು ಸಾಕಷ್ಟು ಜನರು ಮುಂದೆ ಬರುತ್ತಿದ್ದಾರೆ ಎಂದರು.

ಕೃಷ್ಣರ್ಪಾಣಮ್‌ ವಿಶೇಷತೆ: ಶ್ರೀಮಠದಲ್ಲಿ ಗೋವರ್ಧನ ಗಿರಿದಾರಿ ದೇಗುಲ ನಿರ್ಮಾಣ ಮಾಡಿ ಕೃಷ್ಣನಿಗೆ ಅರ್ಪಿಸಿದ ದಿನವನ್ನು ವಿಶೇಷವಾಗಿ ಕೃಷ್ಣಾರ್ಪಣಮ್‌ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಹೊಸನಗರದ ಹಸುರಿನ ಪರಿಸರಕ್ಕೆ ಕಳಶಪ್ರಾಯವಾಗಿ ದೇಗುಲ ರೂಪುಗೊಳ್ಳುತ್ತಿದೆ. ರಾಜ್ಯ, ದೇಶ ಮಾತ್ರವಲ್ಲದೆ ವಿಶ್ವದ ಮೂಲೆ- ಮೂಲೆಯಿಂದ ಗೋ ಭಕ್ತರು ಇಲ್ಲಿಗೆ ಬರಬೇಕು ಎಂದರು.

ಇನ್ನು ಮೂಲ ಮಠ ಹೊಸನಗರದಲ್ಲಿದ್ದು ಶ್ರೀ ರಾಮಸತ್ರಾ, ವಿಶ್ವ ಗೋ ಸಮ್ಮೇಳನ ಸೇರಿದಂತೆ ಯಶಸ್ವಿ ಕಾರ್ಯಕ್ರಮ ಸಂಘಟಿಸಿದ ನಂತರ ಇಲ್ಲಿ ಕಾರ್ಯಕ್ರಮಗಳು ನಡೆಯುತ್ತಿಲ್ಲಎಂಬ ಕೊರಗು ಇಲ್ಲಿದೆ. ಆದರೆ ಕಾರ್ಯಕ್ರಮಗಳು ಕಡಿಮೆಯಾಗಿರಬಹುದು ಆದರೆ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಈಗಾಗಲೇ 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಚಂದ್ರಮೌಳೀಶ್ವರ ದೇಗುಲ ಮತ್ತು ವಿಶಿಷ್ಠ ವಿನ್ಯಾಸದಲ್ಲಿ ನಿರ್ಮಾಣಗೊಳ್ಳಲಿರುವ ಗೋಲೋಕ ಈ ಭಾಗವನ್ನು ಪ್ರವಾಸಿ ತಾಣವಾಗಿ ರೂಪಿಸಲಿದೆ. ಅಲ್ಲದೆ ಉತ್ತಮ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಮೂಲಮಠದಲ್ಲಿ ಸಂಘಟಿಸುವ ಚಿಂತನೆ ಇದೆ ಎಂದರು.

ಯೋಗಿ ಆದಿತ್ಯನಾಥ ಪಿಎಂಗೆ ಅರ್ಹ ವ್ಯಕ್ತಿ: ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಯಶಸ್ಸು ಕಂಡಿರುವ ಸಿಎಂ ಯೋಗಿ ಆದಿತ್ಯನಾಥ್‌ ಮುಂದೊಂದು ದಿನ ಈ ದೇಶವನ್ನು ಆಳುತ್ತಾರೆ. ನೂರಕ್ಕೆ ನೂರು ಸಿಎಂ ಆಗುವುದು ಖಚಿತ ಎಂದರು. ಅವರಲ್ಲಿ ಭವ್ಯ ಭಾರತವನ್ನು ಕಟ್ಟುವ ಕಾಳಜಿಯೂ ಇದೆ. ಶಕ್ತಿಯೂ ಇದೆ. ಅವರ ಆಡಳಿತ ಪಕ್ಷಾತೀತವಾಗಿ ಮೆಚ್ಚುಗೆ ಗಳಿಸಿದೆ. ಉತ್ತರ ಪ್ರದೇಶದ ಗತಿಯೇ ಬದಲಾಗಿದೆ. ಝಾನ್ಸಿ ಪ್ರದೇಶಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಎಲ್ಲಿ ನೋಡಿದರೂ ಬಂದೂಕು ಹಿಡಿದು ಸಾಗುವ ಜನರ ಸಾಲು ಕಂಡು ಬರುತ್ತಿತ್ತು. ಆದರೆ ಯೋಗಿ ಆದಿತ್ಯನಾಥ ರಾಜ್ಯದ ಚಿತ್ರಣವನ್ನೇ ಬದಲಿಸಿದ್ದಾರೆ. ಅವರು ಸನ್ಯಾಸಿ- ಸಂತ ಸಮುದಾಯಕ್ಕೆ ಭೂಷಣ ಎಂದು ಹೊಗಳಿದರು.

ರಾಜಕೀಯ ನನ್ನ ಕ್ಷೇತ್ರವಲ್ಲ: ಯೋಗಿ ಆದಿತ್ಯನಾಥರ ಯಶಸ್ಸು ನಿಮ್ಮನ್ನು ರಾಜಕೀಯಕ್ಕೆ ಸೆಳೆಯುತ್ತದಾ ಎಂಬ ಪ್ರಶ್ನೆಗೆ ನಗುತ್ತಾ ಉತ್ತರಿಸಿದ ರಾಘವೇಶ್ವರ ಸ್ವಾಮೀಜಿ, ಖಂಡಿತಾ ಇಲ್ಲ. ನಮ್ಮ ಗುರು ಪರಂಪರೆ, ಸಂಪ್ರದಾಯ ಮತ್ತು ನಿತ್ಯ ಪೂಜೆಯ ಕಾಯಕಗಳು ಬಹಳಷ್ಟಿದೆ. ಅದರಲ್ಲೂ ನಮ್ಮ ದಾರಿಯೇ ಬೇರೆ ಇದೆ ಎಂದರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.