ಶಾಂತಿಯುತ ಸಮಾಜದಲ್ಲಿ ಯಾರು ವಿಷ ಹಾಕುವ ಕೆಲಸ ಮಾಡಿದ್ದಾರೆ ಅವರ ಮೇಲೆ ಬಿಗಿ ಕ್ರಮ
Team Udayavani, Feb 7, 2024, 3:08 PM IST
ತೀರ್ಥಹಳ್ಳಿ: ಶಿಕಾರಿಪುರದಲ್ಲಿ ಮಂಗಳವಾರ ರಾತ್ರಿ ಅನ್ಯಕೋಮಿನ ಯುವಕರು ವೀಲಿಂಗ್ ಮಾಡುವಾಗ ಅದನ್ನು ಮಾಡಬಾರದು, ಮಹಿಳೆಯರು-ಮಕ್ಕಳು ಇರುತ್ತಾರೆ ಎಂದು ಕರೆದು ಬುದ್ದಿವಾದ ಹೇಳಿದ್ದಕ್ಕೆ ನಾಲ್ವರು ಬಂದು ಯುವಕನೋರ್ವನಿಗೆ ಚಾಕು ಹಾಕಿದ್ದಾರೆ.
ಆತ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಇದ್ದಾನೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ನಾನು ಕೂಡ ನಿನ್ನೆ ರಾತ್ರಿ ಹೋಗಿ ನೋಡಿ ಮಾತನಾಡಿಸಿ ಬಂದಿದ್ದೇನೆ. ಇದು ತುಂಬಾ ದುರಾದೃಷ್ಟಕರವಾದ ಸಂಗತಿ ಶಾಂತಿಯುತವಾದ ಇಂತಹ ಸಮಾಜದಲ್ಲಿ ಯಾರು ವಿಷ ಹಾಕುವ ಕೆಲಸ ಮಾಡಿದ್ದಾರೆ ಅವರ ಮೇಲೆ ಬಿಗಿ ಕ್ರಮ ಕೈಗೊಳ್ಳಬೇಕು. ಇದು ಮುಂದುವರಿಯದಂತೆ ನೋಡಿಕೊಳ್ಳಬೇಕು ಮತ್ತು ಅವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದರು.