ಜೆಡಿಎಸ್ ಗೆಲ್ಲಿಸುವುದೇ ಗುರಿ: ಗೀತಾ
Team Udayavani, May 5, 2018, 5:51 PM IST
ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಮತದಾರರಿಗೂ ಬಂಗಾರಪ್ಪನವರಿಗೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಮತದಾರರು ಬಂಗಾರಪ್ಪನವರನ್ನು ಎಂದೂ ಮರೆತಿಲ್ಲ. ಈ ಬಾರಿ ಬಂಗಾರಪ್ಪನವರ ಆಶೀರ್ವಾದ ಮತ್ತು ನೆರಳಿನಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಗಿರುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ಜೆಡಿಎಸ್ ನಾಯಕಿ ಗೀತಾ ಶಿವರಾಜ್ ಕುಮಾರ್ ಹೇಳಿದರು.
ತಾಲೂಕಿನ ದೆಮ್ಲಾಪುರ, ಕೋಣಂದೂರು, ದೇವಂಗಿ, ಕಟ್ಟೆಹಕ್ಕಲು, ಮುಂತಾದ ಕಡೆ ಜೆಡಿಎಸ್ ಅಭ್ಯರ್ಥಿ ಆರ್.ಎಂ.ಮಂಜುನಾಥ ಗೌಡರ ಪರವಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿ ಜೆಡಿಎಸ್ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಲು ಮಲೆನಾಡಿನ ಮತದಾರರು ಸ್ಪಂದಿಸಬೇಕಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಕನಸಿನಂತೆ ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ತಂದೆ ಬಂಗಾರಪ್ಪನವರು ಮಲೆನಾಡಿನ ಮತದಾರರ ಮೇಲೆ ಅಪಾರ ಗೌರವ ಹೊಂದಿದ್ದರು.
ಬಂಗಾರಪ್ಪನವರ ಕೊನೆಯ ಆಸೆ ಮಲೆನಾಡು ಭಾಗದಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಟವಾಗಿ ಕಟ್ಟುವಂತೆ ಮಾಡಬೇಕೆಂದಿದ್ದರು. ಆ ಕೆಲಸವನ್ನು ಮಧು ಬಂಗಾರಪ್ಪ ಮುಂದುವರಿಸಿಕೊಂಡು ಬಂದಿದ್ದಾರೆ. ಆರ್.ಎಂ. ಮಂಜುನಾಥ ಗೌಡರ ಸಹಕಾರಿ ಕ್ಷೇತ್ರದ ಸಾಧನೆ ಈ ಬಾರಿ ಜೆಡಿಎಸ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಜೆಡಿಎಸ್ ಅಭ್ಯರ್ಥಿ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಕ್ಷೇತ್ರದಲ್ಲಿ ಹತ್ತು ಹಲವು ಸಮಸ್ಯೆಗಳಿವೆ. ಹಿಂದೆ ಶಾಸಕರಾದವರು ಕೇವಲ ಪ್ರಾಮಾಣಿಕರೆಂದು ಹೇಳಿಕೊಂಡು ಕಾಲಹರಣ ಮಡಿದ್ದಾರೆ. ಮಲೆನಾಡಿನ ಅಡಕೆ ಬೆಳೆಗಾರರಲ್ಲಿ ಧೈರ್ಯ ತುಂಬುವ ಕೆಲಸ ಆಗಬೇಕಾಗಿದೆ ಎಂದರು. ತಾಲೂಕು ಜೆಡಿಎಸ್ ಅಧ್ಯಕ್ಷ ಆರ್. ಮದನ್, ಮಹಿಳಾ ಅಧ್ಯಕ್ಷೆ ವಿನಂತಿ ಕರ್ಕಿ, ಪ್ರಚಾರ ಸಮಿತಿಯ ಡಾ| ಸುಂದರೇಶ್, ಎಂ. ರಾಮಚಂದ್ರ, ಕಟ್ಟೆಹಕ್ಲು ಕಿರಣ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು
BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ