ತಮಿಳು ಸಾರ್ ವಿಜಯ್ ದರ್ಶನಕ್ಕೆ ಅಭಿಮಾನಿಗಳ ನೂಕುನುಗಲು
Team Udayavani, Dec 13, 2019, 3:08 PM IST
ಶಿವಮೊಗ್ಗ: ತಮಿಳು ಸೂಪರ್ ಸ್ಟಾರ್ ವಿಜಯ ಅಭಿನಯದ ಮಹತ್ವಾಕಾಂಕ್ಷೆಯ ದಳಪತಿ ಸಿನಿಮಾ ಶೂಟಿಂಗ್ ಶಿವಮೊಗ್ಗದಲ್ಲಿ ನಡೆಯುತ್ತಿದ್ದು ವಿಜಯ್ ನೋಡಲು ಅಭಿಮಾನಿಗಳು ಲಕ್ಷ್ಮೀ ಟಾಕೀಸ್ ಬಳಿ ಪ್ರತಿದಿನ ಜಮಾಯಿಸುತ್ತಿದ್ದಾರೆ.
ಲಕ್ಷ್ಮೀ ಟಾಕೀಸ್ ಬಳಿ ಇರುವ ಹಳೆ ಜೈಲು ಆವರಣದಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು ಕಳೆದ ಮೂರು ದಿನದಿಂದ ನಿರಂತರ ಶೂಟಿಂಗ್ ನಡೆಯುತ್ತಿದೆ. ಚಿತ್ರದ ಪ್ರಮುಖ ಸೀಕ್ವೆನ್ಸ್ ಒಂದರ ಚಿತ್ರೀಕರಣವನ್ನು ಶಿವಮೊಗ್ಗದ ಹಳೆ ಜೈಲಿನಲ್ಲಿ ಮಾಡಲಾಗುತ್ತಿದೆ. ಇದಕ್ಕಾಗಿ ಜೈಲು ಕಟ್ಟಡದೊಳಗೆ ಸೆಟ್ ಕೂಡ ಹಾಕಲಾಗಿದೆ. ಇನ್ನು, ಜೈಲು ಆವರಣದ ಹೊರಗೆ ವಿಜಯ್ ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ಅಭಿಮಾನಿಗಳು ಆಗಮಿಸಿದ್ದಾರೆ.
ಒಂದು ಸಾರಿಯಾದರೂ ತಮ್ಮ ಹೀರೋನನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾತುರದಿಂದ ಜೈಲಿನ ಗೇಟ್ ಮುಂದೆ ಕಾದು ನಿಂತಿದ್ದಾರೆ. ಕೆಲವರು ಸಿನಿಮಾ ಟೀಂ ಮತ್ತು ಪೊಲೀಸರ ಜೊತೆಗೂ ವಾಗ್ವಾದ ನಡೆಸುತ್ತಿದ್ದಾರೆ. ನಟ ವಿಜಯ್ ಅವರು ಶಿವಮೊಗ್ಗದ ಬಿ.ಎಚ್.ರಸ್ತೆಯಲ್ಲಿರುವ ರಾಯಲ್ ಆರ್ಕೆಡ್ ಹೊಟೇಲ್ ನಲ್ಲಿ ಉಳಿದುಕೊಂಡಿದ್ದಾರೆ. ಬೆಳಗ್ಗೆ ಶೂಟಿಂಗ್ಗೆ ತೆರಳುವಾಗ ಮತ್ತು ಶೂಟಿಂಗ್ನಿಂದ ಮರಳುವಾಗ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಹೊಟೇಲ್ ಮುಂದೆ ಸೇರುತ್ತಿದ್ದಾರೆ. ವಿಜಯ್ ಕಾರು ಹೊಟೇಲ್ ಒಳಗೆ ಮತ್ತು ಹೊರಗೆ ಹೋಗಲು ಸಾದ್ಯವಾದಂತೆ ತಡೆಯುತ್ತಿದ್ದಾರೆ. ಈ ವೇಳೆ ಪೊಲೀಸರು ಮತ್ತು ವಿಜಯ್ ಬಾಡಿಗಾರ್ಡ್ಗಳು ಅಭಿಮಾನಿಗಳನ್ನು ದೂರಕ್ಕೆ ಸರಿಸಲು ಹರಸಾಸಹಸ ಪಡುತ್ತಿದ್ದಾರೆ.
ನಟ ವಿಜಯ್ ಅವರು ಒಮ್ಮೆಯಾದರೂ ಬಂದು ತಮ್ಮತ್ತ ಕೈ ತೋರಿಸಲಿ ಎಂದು ವಿಜಯ್ ಫ್ಯಾನ್ಸ್ ಮನವಿ ಮಾಡುತ್ತಿದ್ದಾರೆ. ಹಳೇ ಜೈಲು ಗೇಟ್ ಮುಂದೆ ಕಾದು ನಿಂತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ