Crime: ಪ್ರೀತಿಸಬೇಡ ಎಂದ ತಂದೆಯನ್ನೇ ಕೊಲ್ಲಿಸಿದಳು!


Team Udayavani, Feb 14, 2024, 12:57 PM IST

Crime: ಪ್ರೀತಿಸಬೇಡ ಎಂದ ತಂದೆಯನ್ನೇ ಕೊಲ್ಲಿಸಿದಳು!

ಕುಣಿಗಲ್‌: ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ತಂದೆಯನ್ನೇ ಮಗಳು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಕೃತ್ಯಕ್ಕೆ ತಾಯಿಯೂ ಬೆಂಬಲ ನೀಡಿದ್ದು ತಾಲೂಕಿನ ಜನ ಬೆಚ್ಚಿ ಬಿದ್ದಿದ್ದಾರೆ.

ಕಳೆದ 3 ದಿನಗಳ ಹಿಂದೆ ಕುಣಿಗಲ್‌ ತಾಲೂಕಿನ ಹೇರೂರು ಸಮೀಪದ ಕುಳ್ಳಿ ನಂಜಯ್ಯನಪಾಳ್ಯದ ಬಳಿ ಅತಿಥಿ ಶಿಕ್ಷಕ ಕೆ.ಜಿ.ಮರಿಯಪ್ಪ ಎಂಬವರನ್ನು ಮಾರಕಾಸ್ತ್ರ ಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ನಡೆದ ಮೂರೇ ದಿನದಲ್ಲಿ ಪೊಲೀಸರು ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನರ್ಸಿಂಗ್‌ ವಿದ್ಯಾರ್ಥಿನಿ: ಕೊಲೆಯಾದ ಮರಿಯಪ್ಪನ ಪುತ್ರಿ ನರ್ಸಿಂಗ್‌ ವಿದ್ಯಾರ್ಥಿನಿ ಕೆ.ಎಂ.ಹೇಮಲತಾ, ಪತ್ನಿ ಶೋಭಾ, ಪ್ರಿಯಕರ ಶಾಂತಕುಮಾರ್‌, ಹಾಗೂ ಜಮೀನು ವಿಚಾರದಲ್ಲಿ ಮರಿಯಪ್ಪ ಅವರೊಂದಿಗೆ ವಿವಾದ ಇಟ್ಟುಕೊಂಡಿದ್ದ ಸಂತೋಷ್‌, ಆತನ ಸ್ನೇಹಿತರಾದ ಹೇಮಂತ್‌ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಮೂರು ಮಂದಿ ಸೇರಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಗಳೇ ದೂರು ನೀಡಿದ್ದಳು:  ತಂದೆ ಕೊಲೆಯಾ ಗಿರುವುದು ಗೊತ್ತೇ ಇಲ್ಲ ಎಂಬಂತೆ ನಟಿಸಿದ್ದ ಮಗಳು ಹೇಮಲತಾ, ಕುಣಿಗಲ್‌ ಠಾಣೆಗೆ ಹೋಗಿ ದೂರು ನೀಡಿದ್ದಳು. ಗ್ರಾಮಸ್ಥರೊಬ್ಬರು ಮನೆ ಬಳಿ ಬಂದು ಊರಾಚೆಯ ಜಮೀನಿನಲ್ಲಿ ನಿಮ್ಮ ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು. ಈ ಸಂಬಂಧ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಳು.

ದಾರಿ ತಪ್ಪಿಸಿದಳು: ತನ್ನ ಬಗ್ಗೆ ಅನುಮಾನ ಬಾರದಂತೆ ಪ್ರಯತ್ನಿಸಿದ ಹೇಮಲತಾ ಗ್ರಾಮದ ಶಿವಕುಮಾರ್‌, ನನ್ನ ತಂದೆ ಮರಿಯಪ್ಪ ಅವರ ನಡುವೆ ವೈಮನ ಸ್ಸಿತ್ತು. ಅವರೇ ಕೊಲೆ ಮಾಡಿರಬಹು ದೆಂದು ಪೊಲೀಸರಿಗೆ ತಿಳಿಸಿ ದಾರಿ ತಪ್ಪಿಸಿ ದ್ದಳು. ಈ ಸಂಬಂಧ ಪೊಲೀಸರು ಶಿವ ಕುಮಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹೇಮಲತಾ ಹೇಳಿದ್ದು ಸುಳ್ಳಾಗಿತ್ತು.

ಕೊಲೆ ಜಾಡು: ಹೇಮಲತಾ ಪ್ರೇಮ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಗಳು ಸಿಕ್ಕಿ ಬಿದ್ದರು. ಕೊಲೆ ನಡೆದ ರಾತ್ರಿಯೇ ಶಾಂತಕುಮಾರ ಹಾಗೂ ಹೇಮಂತ್‌ ವಾಸವಿದ್ದ ಬೆಂಗಳೂರು ಮನೆಯನ್ನು ಶೋಧ ನಡೆಸಿ ಅವರ ಮೊಬೈಲ್‌ಗ‌ಳನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಗಳು ಹೇಮಲತಾ, ಹೆಂಡತಿ ಶೋಭಾ ಸೇರಿದಂತೆ 8 ಮಂದಿಯನ್ನು ಜೈಲಿಗಟ್ಟಿದ್ದಾರೆ.

ಬೆಂಗಳೂರಿನಲ್ಲಿ ವಾಸವಾಗಿದ್ದ  ಪ್ರಿಯಕರ :

ಮಗಳು ಹೇಮಲತಾ ಅದೇ ಗ್ರಾಮದ ಶಾಂತಕುಮಾರ್‌ ಎಂಬವನನ್ನು ಪ್ರೀತಿಸುತ್ತಿದ್ದು  ಮದುವೆಗೆ ತೀರ್ಮಾನ ಮಾಡಿದ್ದರು. ಕಳೆದ 6 ತಿಂಗಳ ಹಿಂದೆಯೇ ತಂದೆ ಮರಿಯಪ್ಪನಿಗೆ ಈ ವಿಚಾರ ತಿಳಿದು  ಶಾಂತಕುಮಾರನನ್ನು ಹಿಡಿದು ಥಳಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಮರಿಯಪ್ಪನ ಮೇಲೆ ದ್ವೇಷ ಹೆಚ್ಚಾಗಿತ್ತು. ಶಾಂತಕುಮಾರ್‌ ಹಾಲಿ ಬೆಂಗಳೂರಿನಲ್ಲಿ ವಾಸವಾಗಿದ್ದ ಕಾರಣ ತನ್ನ ಸ್ನೇಹಿತರೊಂದಿಗೆ ಚರ್ಚಿಸಿ ಕೊಲೆಗೆ ಸಂಚು ರೂಪಿಸಿದ್ದರು. ಇದಕ್ಕೆ ಮಗಳು ಹೇಮಲತಾ, ಪತ್ನಿ ಶೋಭಾ ಸಾಥ್‌ ನೀಡಿದ್ದರು. ಸುಪಾರಿ ನೀಡಿದ ಪತ್ನಿ, ಮಗಳು ಮರಿಯಪ್ಪನ ಚಲನ-ವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.

ಕಣ್ಣಿಗೆ ಪೆಪ್ಪರ್‌ ಸ್ಪ್ರೇ ಮಾಡಿದ್ದ ಆರೋಪಿಗಳು :

ಅಮಾವಾಸ್ಯೆ ದಿನ ಪೂಜೆ ಮುಗಿಸಿಕೊಂಡು ಊರಿಗೆ ಬರುತ್ತಿದ್ದ ಮರಿಯಪ್ಪನನ್ನು ಶಾಂತಕುಮಾರ್‌ ಮತ್ತು ಸ್ನೇಹಿತರು ಕುಳ್ಳಿ ನಂಜಯ್ಯನಪಾಳ್ಯ ಸಮೀಪ ಹೊಂಚು ಹಾಕಿ ಕಾದಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮರಿಯಪ್ಪನ ಕಣ್ಣಿಗೆ ಪೆಪ್ಪರ್‌ ಸ್ಪ್ರೇ ಮಾಡಿದ್ದಾರೆ. ಗಾಬರಿಯಿಂದ ಬೈಕ್‌ ಬೀಳಿಸಿ ರಸ್ತೆಪಕ್ಕದ ಜಮೀನಿಗೆ ಓಡಿ ಹೋದ ಮರಿಯಪ್ಪನನ್ನು ಅಟ್ಟಿಸಿಕೊಂಡು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

5 ಲಕ್ಷಕ್ಕೆ ಸುಪಾರಿ; 50 ಸಾವಿರ ಮುಂಗಡ ಪಾವತಿ :

ಮರಿಯಪ್ಪ ಕೊಲೆಗೆ 5 ಲಕ್ಷ ರೂ., ಸುಪಾರಿ ಮಾತನಾಡಿದ್ದು, ಈ ಪೈಕಿ ಮುಂಗಡವಾಗಿ 50 ಸಾವಿರ ರೂ,ಗಳನ್ನು ಹಂತಕರಿಗೆ ನೀಡಿದ್ದರು ಎನ್ನಲಾಗಿದೆ. ಉಳಿದ ಹಣವನ್ನು ಪತಿ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆ ಎಟಿಎಂ ಮೂಲಕ ತೆಗೆದುಕೊಡಲಾಗುವುದೆಂದು ಮರಿಯಪ್ಪ ಪತ್ನಿ ತಿಳಿಸಿದ್ದರು ಎನ್ನಲಾಗಿದೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.