ವಿಶ್ವಕ್ಕೆ ಮಾದರಿಯಾದ ದಲಿತ ಸೂರ್ಯ ಅಂಬೇಡ್ಕರ್‌


Team Udayavani, Apr 16, 2019, 5:08 PM IST

tmk-1
ತಿಪಟೂರು: ಸ್ವತಂತ್ರ ಭಾರತದಲ್ಲಿ ಸರ್ವ ಸಮಾನತೆಗಾಗಿ, ಮಾನವೀಯ ಮೌಲ್ಯಗಳ ಸಂವರ್ಧನೆಗಾಗಿ ಹಗಲಿ
ರುಳು ಹೋರಾಡಿ, ಪ್ರಜಾಪ್ರಭುತ್ವದ ವ್ಯವಸ್ಥಿತ ಆಡಳಿತದ ಸುಭದ್ರತೆಗಾಗಿ ಸಂವಿಧಾನ ರಚಿಸಿ ವಿಶ್ವಕ್ಕೆ ಮಾದರಿಯಾದ
ದಲಿತ ಸೂರ್ಯ ಡಾ.ಬಿ.ಆರ್‌. ಅಂಬೇಡ್ಕರ್‌ ಎಂದು ಎಸ್‌ವಿಪಿ ಕಾಲೇಜಿನ ಉಪನ್ಯಾಸಕ ಕೆ.ಎನ್‌. ರೇಣುಕಯ್ಯ ತಿಳಿಸಿದರು.
 ನಗರದ ಚರ್ಚ್‌ ರಸ್ತೆಯ ವೃತ್ತದಲ್ಲಿ ಜಯಕರ್ನಾಟಕ ತಾಲೂಕು ಸಂಘಟನೆ ಹಮ್ಮಿಕೊಂಡಿದ್ದ ಡಾ.ಬಿ.ಆರ್‌.
ಅಂಬೇಡ್ಕರ್‌ ಜಯಂತಿ ಕಾರ್ಯಕ್ರವ ದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್‌ ಮೂಲತಃ ಒಬ್ಬ ಮಹಾ ಮಾನವತಾವಾದಿ. ಅಸಮಾನತೆ ಮತ್ತು ಅಸಹಿಷ್ಣುತೆ ವಾತಾವರಣದಲ್ಲಿನ ಅಸಹ್ಯ ಕರವಾದ ನಡವಳಿಕೆಗಳಿಂದ ರೋಸಿ ಹೋಗಿದ್ದ ಅವರು, ಸಾಮಾಜಿಕ ನ್ಯಾಯಕ್ಕಾಗಿ ಪಣತೊಟ್ಟು ಅವಿರತವಾಗಿ ಹೋರಾಡಿ ಪುರುಷ ಸಿಂಹರೆನಿಸಿ ಕೊಂಡರು. ವಿಶೇಷ ಅಧಿನಿಯಮಗಳನ್ನು ಸಂವಿಧಾನದಲ್ಲಿ ಅಳವಡಿಸಿ ಅವರ ಹಕ್ಕು ಮತ್ತು ಕರ್ತವ್ಯಗಳ ಪ್ರಜ್ಞೆಯನ್ನು ಹೆಚ್ಚಿಸಿದ್ದರು. ಅಂಥ ಮಹಾಪುರುಷರ ಹೋರಾಟದ ಹಾದಿಯಲ್ಲಿ ಸಾಗುತ್ತ, ಜೀವನಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದರು.
ಆರಾಧ್ಯ ದೈವ: ನಿವೃತ್ತ ಶಿಕ್ಷಕ ಸೋಮ ಶೇಖರ್‌ ಮಾತನಾಡಿ, ಅಂಬೇಡ್ಕರ್‌ ನೊಂದವರ ಬಾಳಿನ ಬೆಳಕು, ದನಿ ಇಲ್ಲದವರ ಪಾಲಿನ ಆರಾಧ್ಯ ದೈವ. ಆತ್ಮವಿಶ್ವಾಸ, ಧೈರ್ಯವನ್ನು ಅಸ್ಪೃಶ್ಯರ ಹೃದಯ ಮನಸ್ಸುಗಳಲ್ಲಿ, ದಮನಿಗಳಲ್ಲಿ ತುಂಬಿದ ಹೃದಯವಂತ. ಅನ್ಯಾಯ, ಶೋಷಣೆಗಳನ್ನು ಹೇಗೆ ಎದುರಿಸಿ ಬಾಳನ್ನು ನಡೆಸಬೇಕೆಂಬ ಜ್ಞಾನ ನೀಡಿದ ಗುರು ಎಂದು ಬಣ್ಣಿಸಿದರು.
ಹೋರಾಟದ ಗುಣ: ಸಂಘಟನೆ ಅಧ್ಯಕ್ಷ ಬಿ.ಟಿ.ಕುಮಾರ್‌ ಮಾತನಾಡಿ, ದಲಿತರ ಆಶಾಜ್ಯೋತಿಯಾದ ಅಂಬೇಡ್ಕರ್‌
ಮಹಾನ್‌ ರಾಷ್ಟ್ರೀಯವಾದಿಯಾಗಿದ್ದರು. ಜಾತಿ, ಮತ, ಪಂಥಗಳ ವಿರುದ್ಧ ಚಿಕ್ಕ ವಯಸ್ಸಿನಲ್ಲಿಯೇ ಪ್ರತಿಭಟನೆ
ಮಾಡುತ್ತಾ ಹೋರಾಟದ ಗುಣ ಬೆಳೆಸಿ ಕೊಂಡಿದ್ದರು ಎಂದರು. ಕಾರ್ಯಕ್ರಮ ದಲ್ಲಿ ಕುಮಾರ್‌ ಆಸ್ಪತ್ರೆ ಡಾ. ಶ್ರೀಧರ್‌, ಮಕ್ಕಳ ಸಾಹಿತಿ ಕೆ. ನಾಗರಾಜಶೆಟ್ಟಿ, ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ್‌, ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ, ತಾ. ಅಧ್ಯಕ್ಷ ಶೆಟ್ಟಿಹಳ್ಳಿ ಕಲ್ಲೇಶ್‌, ಗುತ್ತಿಗೆದಾರ ಅಶೋಕ್‌, ವಿಜಯ ಕುಮಾರ್‌, ನಗರ ಸಭೆ ಮಾಜಿ ಸದಸ್ಯ ನಾಗರಾಜು, ಸಂಘ ಟನೆಯ ಪದಾಧಿಕಾರಿಗಳಾದ ಸಾರ್ಥ ವಳ್ಳಿ ಶಿವಕುಮಾರ್‌, ಖಲಂದರ್‌, ಪ್ರಶಾಂತ್‌, ರಾಜೇಶ್‌, ಮಂಜು, ರಾಕಿ, ದಲಿತ ಮುಖಂಡರಾದ ನಾಗತೀಹಳ್ಳಿ ಕೃಷ್ಣಮೂರ್ತಿ, ಮಹದೇವಯ್ಯ, ಶಂಕರಪ್ಪ, ಮುರುಳಿ, ರಮೇಶ್‌, ಉಮಾ ಮಹೇಶ್‌, ವಿರೂಪಾಕ್ಷ ಮತ್ತಿತರರಿದ್ದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

11-politics

Lok Sabha Election 2024: ಕಲ್ಪತರು ನಾಡಿನಲ್ಲಿ ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.