ಕೊರಟಗೆರೆ : ಮಾಜಿ ಸೈನಿಕ ಗಿರಿಯಪ್ಪ ಅನಾರೋಗ್ಯದಿಂದ ನಿಧನ
ಸಕಲ ಸರ್ಕಾರಿ ಗೌರಗಳೊಂದಿಗೆ ಅಂತ್ಯ ಸಂಸ್ಕಾರ
Team Udayavani, Oct 2, 2022, 6:30 PM IST
ಕೊರಟಗೆರೆ : ತಾಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾಮದ ಮಾಜಿ ಸೈನಿಕ ಗಿರಿಯಪ್ಪ (75) ಭಾನುವಾರ ದೈವಾಧೀನರಾಗಿದ್ದಾರೆ.
ಸುಮಾರು 20ವರ್ಷಗಳ ಕಾಲ ದೇಶದ ನಾನಾ ಗಡಿಭಾಗಗಳಲ್ಲಿ ಸೇವೆಯನ್ನು ಸಲ್ಲಿಸಿ, ಸ್ವಗ್ರಾಮಕ್ಕೆ ಹಿಂತಿರುಗಿದ್ದರು ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ತಾಲೂಕು ದಂಡಾಧಿಕಾರಿಗಳಾದ ನಹೀದಾ ಜಮ್ ಜಮ್ ಸೇರಿದಂತೆ ಮಾಜಿ ಸೈನಿಕರು ಹಾಗೂ ಅಧಿಕಾರಿಗಳು,ಪೊಲೀಸ್ ಅಧಿಕಾರಿಗಳು,ಹಾಗೂ ಗ್ರಾಮಸ್ಥರು ಸೇರಿ ಸರ್ಕಾರದ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಮಾಜಿ ಸೈನಿಕರುಗಳು ದೇಶದ ಸೇವೆಯನ್ನು ಮಾಡಿದ ನಮ್ಮಗಳಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ನೀಡದೆ ಅವಮಾನಿಸುತ್ತಿರುವುದು ನಮಗೆ ಬೇಸರ ತಂದಿದೆ, ಆದ್ದರಿಂದ ಇನ್ನು ಮುಂದೆಯಾದರೂ ಸರ್ಕಾರ ನಮಗೆ ನೀಡಬೇಕಾದ ಗೌರವ ಮತ್ತು ಮೂಲಭೂತ ಸೌಕರ್ಯಗಳನ್ನ ನೀಡಬೇಕೆಂದು ಆಗ್ರಹಿಸಿದರು.