Kunigal; ಕಾಣೆಯಾಗಿದ್ದ 22 ರ ಹರೆಯದ ವಿವಾಹಿತೆಯ ಅಸ್ಥಿಪಂಜರ ಪತ್ತೆ!
Team Udayavani, Dec 29, 2023, 10:46 PM IST
ಕುಣಿಗಲ್ : ಕಾಣೆಯಾಗಿದ್ದ ಗೃಹಿಣಿಯೋರ್ವಳ ಅಸ್ಥಿಪಂಜರವಾಗಿ ದೊರಕಿರುವ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿ ಕಿತ್ನಾಮಂಗಲ ಕೆರೆಯಲ್ಲಿ ಶುಕ್ರವಾರ ನಡೆದಿದೆ. ಕಸಬಾ ಹೋಬಳಿ ಕಲ್ಲಪಾಳ್ಯ ಗ್ರಾಮದ ರಂಜಿತ( 22) ಮೃತ ದುರ್ದೈವಿ.
ನಿಟ್ಟೂರು ಕೆಂಪನಹಳ್ಳಿ ಗ್ರಾಮದ ರಂಜಿತ ಕಲ್ಲಪಾಳ್ಯ ಗ್ರಾಮದ ಚಂದ್ರಯ್ಯ ಅವರೊಂದಿಗೆ 2020 ರಲ್ಲಿ ವಿವಾಹವಾಗಿದ್ದು, ಇವರಿಗೆ ಒಂದೂವರೆ ವರ್ಷದ ಹೆಣ್ಣು ಮಗು ಇದೆ ಎನ್ನಲಾಗಿದೆ. ಕಳೆದ ಹಲವು ತಿಂಗಳಿನಿಂದ ಕಾಣೆಯಾಗಿದ್ದ ರಂಜಿತ ಮನೆಗೆ ವಾಪಸಾಗಿರಲಿಲ್ಲ, ಆದರೆ ಇಂದು ಕಿತ್ನಾಮಂಗಲ ಕೆರೆಯಲ್ಲಿ ಅಸ್ಥಿ ಪತ್ತೆಯಾಗಿದೆ.
ಕಾಲಚೈನು, ಬಟ್ಟೆಯಿಂದ ಪತ್ತೆ
ಮೃತ ರಂಜಿತಾಳ ಶವವನ್ನು ಸಂಬಂಧಿಕರು ಕಾಲಚೈನು ಹಾಗೂ ಬಟ್ಟೆಯಿಂದ ಪತ್ತೆ ಹಚ್ಚಿದ್ದು ಎಪ್ ಎಸ್ ಎಲ್ ವರದಿಯಿಂದ ಮತಷ್ಟು ಮಾಹಿತಿ ಬಹಿರಂಗಗೊಳ್ಳಬೇಕಿದೆ. ಈ ಸಂಬಂಧ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ