ಬೈಕ್ ಸವಾರರಿಗೆ ಊಟ ಕೊಟ್ಟು ಬುದ್ಧಿವಾದ
Team Udayavani, May 13, 2021, 6:40 PM IST
ಮಧುಗಿರಿ: ಲಾಕ್ಡೌನ್ನಿಂದಾಗಿ ಬೈಕ್ಗಳಿಗೆ ಕಡಿವಾಣ ಹಾಕಲು ಪೊಲೀಸರು ಲಾಠಿ ಬೀಸುವುದು, ದಂಡ ವಿಧಿಸುವುದು ಸಾಮಾನ್ಯ. ಆದರೆ, ಮಧುಗಿರಿ ಡಿವೈಎಸ್ಪಿ ನಿಯಮ ಮೀರಿದ ಬೈಕ್ ಸವಾರರಿಗೆ ಊಟ ಕೊಟ್ಟು ಸತ್ಕರಿಸಿದ ಘಟನೆ ನಡೆದಿದೆ.
ಮಧುಗಿರಿಯ ಡಿವೈಎಸ್ಪಿ ಕೆ.ಜೆ.ರಾಮಕೃಷ್ಣಪ್ಪ ಅವರು ಮಧುಗಿರಿ ಉಪ ವಿಭಾಗದಲ್ಲಿ 66 ಬೈಕ್ಗಳನ್ನು ವಶಕ್ಕೆ ಪಡೆದಿದ್ದರು. ನಂತರ ವಾಹನ ಬಿಡಿಸಿಕೊಡುವಂತೆ ಪ್ರಭಾವಿಗಳಿಂದ ಒತ್ತಡ ಬರಲು ಆರಂಭವಾಗಿತ್ತು. ಆದರೆ, ಬುಧವಾರ ಕಠಿಣ ನೀತಿಗೆ ಕೊಂಚ ಸಡಿಲಿಕೆ ನೀಡಿದ್ದು, ಸಂಚಾರ ನಿಯಮ ಪಾಲಿಸದ ಬೈಕ್ ಸವಾರರನ್ನು ಠಾಣೆಗೆ ಕರೆತಂದು ಊಟ ನೀಡುತ್ತಿದ್ದಾರೆ.
ಈ ಕ್ರಮಕ್ಕೆ ಸಾರ್ವಜನಿಕರು ಸಂಕೋಚದಿಂದಲೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗ, ಬೈಕ್ ಸವಾರರನ್ನು ವಾಹನ ಸಮೇತ ವಶಕ್ಕೆ ಪಡೆದ ಡಿವೈಎಸ್ಪಿ ದಂಡ ಹಾಕದೆ ಠಾಣೆ ಆವರಣದಲ್ಲೇ ಕೂರಿಸಿದ್ದಾರೆ. ಮಧ್ಯಾಹ್ನದ ಊಟವನ್ನು ಅವರೇ ವ್ಯವಸ್ಥೆ ಮಾಡಿದ್ದು, ಸಂಜೆಯ ನಂತರ ಮನೆಗೆ ಕಳುಹಿಸಿಕೊಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ
ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ