ಕೃಷ್ಣ ಮಠದ ರಾಜಾಂಗಣದಲ್ಲಿ 108 ವೀಣೆಗಳ ಝೇಂಕಾರ
Team Udayavani, Aug 6, 2019, 5:47 AM IST
ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಮಣಿಪಾಲದ ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ರವಿವಾರ ರಾತ್ರಿ ಆಯೋಜಿಸಿದ 108 ವೀಣಾ ಕಲಾವಿದರ ‘ವೀಣಾ ವಂದನ’ ಕಾರ್ಯಕ್ರಮವನ್ನು ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಟ್ರಸ್ಟ್ ಅಧ್ಯಕ್ಷೆ ದೇವಕಿ ಕೆ. ಭಟ್, ಕಾರ್ಯದರ್ಶಿ ಡಾ| ಅನಸೂಯಾ ದೇವಿ, ಕಾರ್ಯಕ್ರಮದ ಸಂಯೋಜಕಿ ಪವನಕುಮಾರಿ, ಡಾ| ಬಾಲಚಂದ್ರ ಆಚಾರ್ಯ ಉಪಸ್ಥಿತರಿದ್ದರು.
ಶ್ರೀಮಠದ ಶಿವರಾಜ್ ಅವರ ಮಂತ್ರಪುಷ್ಪ ಸೂಕ್ತ, ಅಲೆವೂರು ರಾಮ ದಾಸ ಆಚಾರ್ಯರ ಸಾಮವೇದ ಗಾನವನ್ನು ಪವನಕುಮಾರಿ ಮತ್ತು ಅರುಣಕುಮಾರಿಯವರು ವೀಣೆಯಲ್ಲಿ ನುಡಿಸಿದರು.
ಪುತ್ತೂರು, ಕಾಸರಗೋಡು, ಮಂಗಳೂರು, ಕಾರ್ಕಳ, ಚಿಕ್ಕಮಗಳೂರು, ಬೆಂಗಳೂರಿನಿಂದಲ್ಲದೆ ಇಲ್ಲಿ ಕಲಿತು ಲಂಡನ್, ಜರ್ಮನಿ, ಬ್ರುನೋಯಿ, ಅಮೆರಿಕಕ್ಕೆ ಹೋಗಿ ನೆಲೆಸಿದ ವೀಣಾಭ್ಯಾಸಿ ಗಳು ವೀಣಾವಾದನವನ್ನು ನಡೆಸಿಕೊಟ್ಟರು. ಪುರಂದರ-ಕನಕರೇ ಮೊದಲಾದ ದಾಸ ವರೇಣ್ಯರ ಹಾಡುಗಳನ್ನು ಸುಮಾರು ಒಂದೂವರೆ ಗಂಟೆ ಕಾಲ ಕಲಾವಿದರು ನುಡಿಸಿದಾಗ ಕಿಕ್ಕಿರಿದ ಜನಸಂದಣಿ ಅಪರೂಪದ ಈ ವೀಣಾ ಮೇಳವನ್ನು ನೋಡಿ ಆನಂದಿಸಿತು. ಹೋದ ವರ್ಷ 90 ವೀಣಾವಾದಕರನ್ನು ಕಲೆ ಹಾಕಿದ ಸಂಘಟಕರು ಈ ಬಾರಿ 108 ಕಲಾವಿದರನ್ನು ಕಲೆ ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ