Fraud Case ಅಜೆಕಾರು: ಹಣ ಪಾವತಿಸದೆ ವಂಚನೆ
Team Udayavani, Feb 28, 2024, 9:53 PM IST
ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳ್ಳಾರೆ ಗ್ರಾಮದ ಡಾ. ರಾಮಕೃಷ್ಣ ಎಂಬವರ 7 ಲಕ್ಷ ರೂ ಮೌಲ್ಯದ 15 ಕ್ವಿಂಟಾಲ್ ಅಡಿಕೆಯನ್ನು ಫೆ.3 ರಂದು ಬೆಳ್ತಂಗಡಿಯ ಅಡಿಕೆ ವ್ಯಾಪಾರಿ ಮೊಹಮ್ಮದ್ ಶರೀಫ್ ಎಂಬಾತ ಖರೀದಿಸಿದ್ದ.
ತಾನು ಖರೀದಿ ಮಾಡಿದ್ದ ಅಡಿಕೆಯ ಮೊತ್ತ 7 ಲಕ್ಷ ಹಣವನ್ನು ಡಾ.ರಾಮಕೃಷ್ಣ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ದ.
ಆದರೆ ಮೊಹಮ್ಮದ್ ಶರೀಫ್ ಅಡಿಕೆ ಖರೀದಿಸಿದ ಬಳಿಕ ಹಣ ಹಾಕದೇ ವಂಚಿಸಿದ್ದು ಅಡಿಕೆಯ ಹಣವನ್ನು ಪಾವತಿಸುವಂತೆ ಶರೀಫ್ ಮೊಬೈಲಿಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸದೇ ವಂಚಿಸಿದ್ದಾನೆ ಎಂದು ಡಾ| ರಾಮಕೃಷ್ಣ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ