Yallapur: ಸಿದ್ದಿ ಯುವಕನ ಹತ್ಯೆಯ ಪ್ರಮುಖ ಆರೋಪಿ ಬಂಧನ
ಭುಗಿಲೆದ್ದಿದ್ದ ವಿವಿಧ ಸಂಘಟನೆಗಳ ಪ್ರತಿಭಟನೆ
Team Udayavani, Feb 28, 2024, 9:52 PM IST
ಯಲ್ಲಾಪುರ: ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಸಿದ್ದಿ ಯುವಕ ಪ್ರಜ್ವಲ ಕಕ್ಕೇರಿಕರ್ ನ ಕೊಲೆಯ ಎರಡನೇಯ ಪ್ರಮುಖ ಆರೋಪಿ ಅನಿಕೇತ ವಿಜಯ ಮಿರಾಶಿ ಕಿರವತ್ತಿ ಯನ್ನು ಪೋಲಿಸರು ಬುಧವಾರ ಬೆಳಗ್ಗೆ ಬಂಧಿಸಿರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬಂಧನಕ್ಕಾಗಿ ಪೋಲಿಸರನ್ನು ಮೂರು ತಂಡಗಳನ್ನಾಗಿ ರಚಿಸಿ ವಿವಿಧೆಡೆಗಳಲ್ಲಿ ಕಾರ್ಯಾಚರಣೆಗಿಳಿದಿದ್ದರು. ಈ ಪೈಕಿ ಇಲ್ಲಿಯ ಪಿಎಸ್ಐ ಸಿದ್ದಪ್ಪ ಗುಡಿ ನೇತೃತ್ವದ ತಂಡ ಬುಧವಾರ ಬಲೆ ಬೀಸಿ ಧಾರವಾಡ ತಾಲೂಕಿನ ಕಲಘಟಗಿ ಬಳಿ ಬಂಧಿಸಿದ್ದಾರೆ.ಈ ಕೊಲೆಯಲ್ಲಿ ಪ್ರಮುಖ ಆರೋಪಿಯಾದ ಅನಿಕೇತ ವಿಜಯ ಮಿರಾಶಿಯ ಬಂಧನಕ್ಕೆ ಆಗ್ರಹಿಸಿ ಭಾನುವಾರ ಮತ್ತು ಸೋಮವಾರ ಯಲ್ಲಾಪುರದಲ್ಲಿ ಸಿದ್ದಿ, ವಿವಿಧ ದಲಿತ ಸಂಘಟನೆಗಳ ಪ್ರತಿಭಟನೆ ಭುಗಿಲೆದ್ದಿತ್ತು.
ಸೋಮವಾರ ನಡೆದ ಸಂಧಾನದ ಬಳಿಕ ಶವವನ್ನು ಕುಟುಂಬದವರು ಪಡೆದು ಸಂಸ್ಕಾರ ಮಾಡಿದ್ದರು.ಈ ಮೊದಲು ಆರೋಪಿ ಬಂಧನದವರೆಗೂ ಶವ ಒಯ್ಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.ಶವ ಸಂಸ್ಕಾರದ ಹಿನ್ನೆಲೆಯಲ್ಲಿ ಮಂಗಳವಾರ ಪ್ರತಿಭಟನೆ ಯಿಂದ ಹಿಂದೆ ಸರಿದಿದ್ದರು. ಬುಧವಾರ ಮತ್ತೆ ಪ್ರತಿಭಟನೆಯತ್ತ ಹೊರಟಿದ್ದರು.ಆದರೆ ಪ್ರಮುಖ ಆರೋಪಿಯನ್ನು ಬಂಧಿಸಲಾಗುತ್ತಿದೆ ಎಂಬ ಮಾಹಿತಿ ಬರುತ್ತಿದ್ದಂತೆ ಪ್ರತಿಭಟನೆ ಕೈ ಬಿಟ್ಟು ಚದುರಿದ್ದರು.ಆರೋಪಿ ಬಂಧಿಸಿದ ಬಗ್ಗೆ ಪೋಲಿಸರನ್ನು ಅಭಿನಂದಿಸುತ್ತೇವೆ ಆದರೆ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ದಲಿತ ಸಂಘರ್ಷ ಸಮಿತಿಯವರು ಮನವಿ ಮಾಡಿದ್ದಾರೆ.
ಸಾರ್ವಜನಿಕರ ಪ್ರಶಂಸೆ
ಅನಿಕೇತ ಮಿರಾಶಿ ಬಂಧನದ ಸುದ್ದಿ ತಿಳಿಯುತ್ತಲೇ ಸಾರ್ವಜನಿಕರು, ಸಿದ್ದಿ ಸಂಘದವರು ಪೋಲಿಸರ ಕಾರ್ಯವನ್ನು ಶ್ಲಾಘಿಸಿದರು.ಅನಿಕೇತ ಮಿರಾಶಿ ಈತ ಪ್ರಮುಖ ರಾಜಕಾರಣಿ,ಬೇರೆ ಬೇರೆಯವರ ಕೃಪಾಕಟಾಕ್ಷ,ಉದ್ಯಮಿಯಾಗಿದ್ದ ಜತೆಗೆ ಜಿ.ಪಂ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಮಾಜಿ ಸದಸ್ಯರಾಗಿದ್ದ ವಿಜಯ ಮಿರಾಶಿಯವರ ಮಗನಾದ್ದರಿಂದ ಬಂಧನವಾಗದಿರಬಹುದೆಂಬ ಸಂಶಯ ಸಾರ್ವಜನಿಕವಲಯದಲ್ಲಿತ್ತು.ಆದರೆ ಪೋಲಿಸರು ಒತ್ತಡದ ಮಧ್ಯೆಯೂ ಅಗತ್ಯ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ನ್ಯಾಯಾಲಯಕ್ಕೆ ಬುಧವಾರ ಮದ್ಯಾಹ್ನ ಹಾಜರು ಪಡಿಸುವ ಮೂಲಕ ಕರ್ತವ್ಯಪ್ರಜ್ಞೆ ತೋರಿದ್ದಾರೆಂಬ ಪ್ರಶಂಸೆಗೊಳಗಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ