Kundapura ಕೆಲಸಕ್ಕೆ ತೆರಳಿದ್ದ ಯುವತಿ ನಾಪತ್ತೆ
Team Udayavani, Feb 28, 2024, 9:52 PM IST
ಕುಂದಾಪುರ: ಕೋಟೇಶ್ವರದ ಅಂಗಡಿಯೊಂದರಲ್ಲಿ ಕೆಲಸಕ್ಕೆ ಇದ್ದ ಯುವತಿಯೊಬ್ಬಳು ಫೆ. 10ರಂದು ಬೆಳಗ್ಗೆ ಕೆಲಸಕ್ಕೆ ತೆರಳಿದ್ದು, ಆ ಬಳಿಕ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
ಕೋಟೇಶ್ವರ ಗ್ರಾಮದ ಕುಂಬ್ರಿ ನಿವಾಸಿ ರಾಮ ಮೊಗವೀರ ಅವರ ಪುತ್ರಿ ವೈಷ್ಣವಿ (19) ನಾಪತ್ತೆಯಾದ ಯುವತಿ.
ಈಕೆಯ ತಾಯಿ ಯಶೋದಾ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.