ಪರ್ಯಾಯಕ್ಕೆ ಕುಳಿತರು, ಪರ್ಯಾಯ ಸಂಚಾರಕ್ಕೆ ಹೊರಟರು: ಡಾ. ಹೆಗ್ಗಡೆ
Team Udayavani, Jan 19, 2018, 10:15 AM IST
ಉಡುಪಿ: ಈಗ ಪಲಿಮಾರು ಶ್ರೀಪಾದರು ಪರ್ಯಾಯಕ್ಕೆ ಕುಳಿತರೆ ಪೇಜಾವರ ಶ್ರೀಗಳವರು ಪರ್ಯಾಯ ಸಂಚಾರಕ್ಕೆ ಹೊರಟರು. ಒಬ್ಬರು ಜನಾರ್ದನನ ಸೇವೆ ಮಾಡಿದರೆ, ಇನ್ನೊಬ್ಬರು ಜನತಾ ಜನಾರ್ದನರ ಸೇವೆ ಮಾಡುತ್ತಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಗುರುವಾರ ಪಲಿಮಾರು ಪರ್ಯಾಯ ದರ್ಬಾರ್ ಸಭೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನನಗೆ 20ನೇ ವರ್ಷದಲ್ಲಿ ಪಟ್ಟಾಭಿಷೇಕವಾದಾಗ ಪೇಜಾವರ ಶ್ರೀಗಳೇ ನನ್ನಲ್ಲಿ ಉತ್ಸಾಹ ತುಂಬಿ ಮಾರ್ಗದರ್ಶನ ಮಾಡಿದರು. ಹೀಗೆ ಮಾಡುವ ಮೂಲಕ ನನ್ನಿಂದ ಅನೇಕ ಸೇವೆ ಸಲ್ಲುವಂತಾಯಿತು ಎಂದರು.
ವಲ್ಲಭಭಾç ಪಟೇಲ್ ಅವರು ದೇಶವನ್ನು ಒಂದುಗೂಡಿಸಿದರೆ ಪೇಜಾವರ ಶ್ರೀಗಳು ಹಿಂದೂ ಧರ್ಮವನ್ನು ಒಂದುಗೂಡಿಸಲು ಪ್ರಯತ್ನ ಪಟ್ಟರು. ಹಿಂದೂಗಳಲ್ಲಿದ್ದ ಭಿನ್ನ ಅಭಿಪ್ರಾಯಗಳನ್ನು ತೊಡೆದು ಹಾಕಿ ಒಂದಾಗಿರಲು ವಿಶೇಷ ಪರಿಶ್ರಮ ಪಟ್ಟರು. ಅವರು ಆರೋಗ್ಯವಂತರಾಗಿ ಇನ್ನಷ್ಟು ಸೇವೆ ಸಲ್ಲುವಂತಾಗಲಿ ಎಂದು ಹಾರೈಸಿದರು.
ರಾಜಾಂಗಣದ ಮೇಲೆ ಇಷ್ಟೇ ದೊಡ್ಡ ಇನ್ನೊಂದು ಸಭಾಂಗಣವನ್ನು ಪೇಜಾವರ ಶ್ರೀಗಳು ನಿರ್ಮಿಸಿದ್ದಾರೆ. ಇದನ್ನು ನೋಡಿದರೆ ಅವರು “ಇನ್ ದಿ ಓಲ್ಡೆಸ್ಟ್ ಆ್ಯಂಡ್ ಲೇಟೆಸ್ಟ್, ಹಿ ಈಸ್ ದಿ ಗ್ರೇಟೆಸ್ಟ್’ ಎಂದು ಹೆಗ್ಗಡೆ ಬಣ್ಣಿಸಿದರು.
ಅರ್ಚನೆ ತುಳಸಿ ಔಷಧಕ್ಕೆ ಬಳಕೆ
ನಿತ್ಯವೂ ಪಲಿಮಾರು ಸ್ವಾಮೀಜಿಯವರು ಲಕ್ಷ ತುಳಸಿ ಯನ್ನು ಅರ್ಚಿಸುತ್ತಾರೆ. ನಮ್ಮ ಆಯುರ್ವೇದ ಆಸ್ಪತ್ರೆಯ ಔಷಧ ತಯಾರಿಕಾ ವಿಭಾಗವರಲ್ಲಿ ವಿಚಾ ರಿಸಿ ಇದನ್ನು ಬಳಸುವಂತೆ ತಿಳಿಸುವೆ ಎಂದು ಡಾ| ಹೆಗ್ಗಡೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ