ಪುರಾತನ ಬಾವಿಗಳಿಗೆ ಬೇಕಿದೆ ಪುನಶ್ಚೇತನ ಭಾಗ್ಯ!

ಕಾಯಕಲ್ಪಕ್ಕೆ ಕಾದಿವೆ ತೆರೆದ ಬಾವಿಗಳು, ದುರಸ್ತಿಗಿದು ಸಕಾಲ

Team Udayavani, Feb 6, 2020, 5:25 AM IST

0402UDBB2B

ಉಡುಪಿ: ದಶಕಗಳ ಹಿಂದೆ ಒಂದು ಹಳ್ಳಿಯಲ್ಲಿ ಕನಿಷ್ಠ ನಾಲ್ಕೈದು ತೆರೆದ ಬಾವಿಗಳು ಇರುತ್ತಿದ್ದವು. ಮಳೆಗಾಲದಲ್ಲಿ ತುಂಬಿರುತ್ತಿದ್ದ ಈ ಬಾವಿಗಳು ವರ್ಷವಿಡೀ ಜನರಿಗೆ ನೀರು ಕೊಡುತ್ತಿದ್ದವು. ಈಗ ಬಾವಿಗಳ ಜಾಗಕ್ಕೆ ಕೊಳವೆ ಬಾವಿಗಳು ಒಕ್ಕರಿಸಿಕೊಂಡಿವೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲೂ ಇಂತಹ ಅದೆಷ್ಟೋ ಸಾರ್ವಜನಿಕ ಬಾವಿಗಳಿವೆ. ಬಾವಿಗಳೆಷ್ಟಿವೆ ಎನ್ನುವ ಸ್ಪಷ್ಟ ಮಾಹಿತಿ ನಗರ ಸಭೆಯಲ್ಲಿಲ್ಲ. ಅಂಕಿ ಅಂಶದ ಬಗ್ಗೆಯೂ ಗೊಂದಲವಿದೆ.

ಕಸಕಡ್ಡಿಗಳನ್ನು ಬಾವಿಗೆ ಸುರಿಯುತ್ತಾರೆ…
ನಗರಸಭೆ ವ್ಯಾಪ್ತಿಯಲ್ಲಿ 35 ವಾರ್ಡುಗಳಿವೆ. ಪ್ರತೀ ವಾರ್ಡ್‌ನಲ್ಲಿಯೂ ಕನಿಷ್ಠ 5-6 ತೆರೆದ ಬಾವಿಗಳಿರಬಹುದೆಂದು ಊಹಿಸಲಾಗಿದೆ. ಇವುಗಳಲ್ಲಿ ಬಹುತೇಕ ಬಾವಿಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ. ಬಾವಿಗಳು ಕಸಕಡ್ಡಿಗಳನ್ನು ಸುರಿಯುವ ತೊಟ್ಟಿಗಳಾಗಿ ಅವನತಿಯ ಹಾದಿಯಲ್ಲಿವೆ. ಪ್ರತೀವರ್ಷ ಬೇಸಗೆಯಲ್ಲಿ ನಗರದಲ್ಲಿ ನೀರಿನ ಅಭಾವ ಎದುರಾಗುತ್ತದೆ. ನೀರು ಪೂರೈಸಲು ಜಿಲ್ಲಾಡಳಿತ ಅನೇಕ ರೀತಿಯಲ್ಲಿ ಯಾತನೆ ಪಡುತ್ತದೆ. ಇದರ ಅರಿವಿದ್ದರೂ ನಗರಾಡಳಿತ ಬಾವಿಗಳನ್ನು ದುರಸ್ತಿಗೊಳಿಸುವ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.

ಬಾವಿ ನಿರ್ವಹಣೆ ಕೊರತೆ
ಮಲ್ಪೆಯ ಲಕ್ಷ್ಮೀನಗರ, ಪೊಲೀಸ್‌ ಠಾಣೆ ಬಳಿ, ಪದ್ಮನಾಭ ನಗರ, ಬಡಗುಬೆಟ್ಟು, ರೈಲ್ವೇ ಬ್ರಿಡ್ಜ್ ಮೊದಲಾದ ಕಡೆಗಳಲ್ಲಿ ತೆರೆದ ಬಾವಿಗಳಿವೆ. ಕೆಲವು ಕಡೆಗಳಲ್ಲಿ ಬಳಕೆಗೆ ಯೋಗ್ಯ ಸ್ಥಿತಿಯಲ್ಲಿದ್ದರೆ, ಇನ್ನು ಕೆಲವೆಡೆಗಳಲ್ಲಿ ಬಳಕೆಗೆ ಯೋಗ್ಯವಾಗಿಲ್ಲ. ಪರ್ಕಳದ ನಗರಸಭೆ ಉಪ ಕಚೇರಿ ಆವರಣದಲ್ಲಿರುವ ಬಾವಿ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಬಾವಿಯಲ್ಲಿ ನೀರಿನ ಸೆಲೆ ಇದ್ದರೂ ಪಾಳು ಬಿದ್ದಿದೆೆ. ಬಾವಿಯೊಳಗೆ ಕಸದ ರಾಶಿಗಳು ತುಂಬಿವೆ. ಸುತ್ತಮುತ್ತ ಗಿಡಬಳ್ಳಿಗಳು ಬೆಳೆದು ಪೊದೆಗಳಿಂದ ಮುಚ್ಚಿದ ಸ್ಥಿತಿಯಲ್ಲಿದೆ.

ಪುನಶ್ಚೇತನಕ್ಕೆ ಕಾಲ ಸನ್ನಿಹಿತ
ಈ ಬಾವಿಗಳ ಹೂಳೆತ್ತಿ ನೀರನ್ನು ಸ್ವತ್ಛಗೊಳಿಸಿದರೆ ಬಳಸಲು ಅಡ್ಡಿಯಾಗದು. ಪಾಳುಬಿದ್ದ ಬಾವಿಗಳಿಗೆ ಕಾಯಕಲ್ಪ ನೀಡಿದಲ್ಲಿ ಕಡು ಬೇಸಗೆಯ ನೀರಿನ ತಾಪತ್ರಯಗಳ ಭಾರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು. ಪುರಾತನ ಬಾವಿಗಳ ಪುನಶ್ಚೇತನಕ್ಕೆ ಕಾಲ ಕೂಡ ಈಗ ಸನ್ನಿಹಿತಗೊಂಡಿದೆ. ತೆರೆದ ಬಾವಿಗಳನ್ನು ಗುರುತಿಸಿ ದುರಸ್ತಿ ನಡೆಸಿ ಬಳಕೆಗೆ ಯೋಗ್ಯವಾಗಿಸಿದಲ್ಲಿ ಕಡು ಬೇಸಗೆಯಲ್ಲಿ ತಲೆದೋರಬಹುದಾದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅನುದಾನಗಳು ಸದ್ಭಳಕೆಯಾಗಿ ಎಲ್ಲ ಬಾವಿಗಳು ಶುದ್ಧಗೊಂಡರೆ ನೀರಿನ ಕೊರತೆ ನೀಗುವ ವಿಶ್ವಾಸವನ್ನು ನಾಗರಿಕರು ಹೊಂದಿದ್ದಾರೆ.

ಪಾಳು ಬಿದ್ದ ಬಾವಿಗಳ ಪುನಶ್ಚೇತನ ಹಾಗೂ ಬಾವಿಗಳಿಗೆ ಮಳೆಗಾಲ ಜಲ ಮರು ಪೂರಣ ಮಾಡಿದರೆ ಬೇಸಗೆಯಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸಬಹುದು. ತೆರೆದ ಬಾವಿ ಸ್ವತ್ಛಗೊಳಿಸುವ ಕಾರ್ಯಕ್ಕೆ ಮುಂದಾದರೆ ಅಂತರ್ಜಲವೂ ಹೆಚ್ಚಾಗಿ ಕೊಳವೆ ಬಾವಿಗಳಾದರೂ ಜನರಿಗೆ ನೀರುಣಿಸಲಿವೆ. ಇಲ್ಲದಿದ್ದರೆ ಪ್ರತೀ ಬೇಸಗೆ ಬಂದಾಗ ನೀರಿನದ್ದೇ ಕಥೆ ಪುನರಾವರ್ತನೆ ಗೊಳ್ಳುವುದರಲ್ಲಿ ಸಂಶಯವಿಲ್ಲ.

ಬಜೆಟ್‌ ಸಿದ್ಧಪಡಿಸಿಲ್ಲ
ನಗರಸಭೆ ವ್ಯಾಪ್ತಿಯ ತೆರೆದ ಬಾವಿಗಳ ಪಟ್ಟಿ ಸಿದ್ಧಪಡಿಸುವಂತೆ ವಿಭಾಗದ ಎಂಜಿನಿಯರ್‌ಗೆ ಸೂಚಿಸಲಾಗುವುದು. ಬಜೆಟ್‌ ಸಿದ್ಧವಾದ ಬಳಿಕ ಬಾವಿಗಳನ್ನು ಪುನಶ್ಚೇತನಗೊಳಿಸುವತ್ತ ಗಮನ ಹರಿಸಲಾಗುವುದು.
-ಆನಂದ ಕಲ್ಲೋಳಿಕರ್‌,
ಪೌರಾಯುಕ್ತರು ನಗರಸಭೆ.

ನೀರು ಬಳಕೆಯಾಗುತ್ತಿಲ್ಲ
ತೆರೆದ ಬಾವಿಗಳಿಂದ ನೀರು ಸೇದುವವರು ಈಗ ಕಡಿಮೆ. ಪರ್ಕಳದಲ್ಲಿರುವ ಬಾವಿಯ ನೀರನ್ನು ಯಾರೂ ಕೂಡ ಬಳಸುತ್ತಿಲ್ಲ. ಬಳಸದೇ ಇದ್ದ ಕಾರಣ ಪಾಳು ಬಿದ್ದಿದೆ. ಅಲೆಮಾರಿಗಳು ಬಾವಿ ಬಳಿಯಲ್ಲಿ ಬಿಡಾರ ಹೂಡಿ ಕಸ, ಕಡ್ಡಿಗಳನ್ನು ಬಾವಿಗೆ ಹಾಕಿ ನೀರನ್ನು ಕಲುಷಿತಗೊಳಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರ ನಿರ್ವಹಣೆಯತ್ತ ಗಮನಹರಿಸಲಾಗುವುದು.
-ಸುಮಿತ್ರಾ ಆರ್‌. ನಾಯಕ್‌, ಪರ್ಕಳ ವಾರ್ಡ್‌ ಸದಸ್ಯೆ

-ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.