ಬೈಕಾಡಿ ಸಸ್ಯಕ್ಷೇತ್ರ: 50,000 ವಿಭಿನ್ನ ಜಾತಿ ಸಸಿ ಸಿದ್ಧ
Team Udayavani, May 24, 2018, 6:00 AM IST
ಬ್ರಹ್ಮಾವರ: ಅರಣ್ಯ ಇಲಾಖೆಯ ಬೈಕಾಡಿ ಸಸ್ಯಕ್ಷೇತ್ರದಲ್ಲಿ ಮಳೆಗಾಲದ ನಾಟಿಗೆ ಅನುಕೂಲ ವಾಗುವಂತೆ ವಿಭಿನ್ನ ಜಾತಿಯ 50,900 ಸಸಿಗಳನ್ನು ಸಿದ್ಧಗೊಳಿಸಲಾಗಿದೆ.
ಮುಖ್ಯವಾಗಿ ಮಹಾಘನಿ, ಬೇಂಗ, ಹಲಸು, ಹೆಬ್ಬಲಸು, ಮುರಿಯ, ಹೊಳೆದಾಸವಾಳ, ಕಕ್ಕೆ, ಬಿಲ್ವಪತ್ರೆ, ಬಿಲ್ವಾರ, ಸಾಗುವಾನಿ, ಶ್ರೀಗಂಧ, ಶಿವನೆ, ಕಹಿಬೇವು, ದೂಪ, ಮೇಫÉವರ್, ನೇರಳೆ, ಬಾದಾಮಿ, ಬೀಟೆ ಹೀಗೆ ಸುಮಾರು 30 ಬಗೆಯ ಗಿಡಗಳನ್ನು ತಯಾರುಗೊಳಿಸಲಾಗಿದೆ.
ಸಾರ್ವಜನಿಕರಿಗೆ ಲಭ್ಯ
ಬೈಕಾಡಿ ಸಸ್ಯಕ್ಷೇತ್ರದಲ್ಲಿ 17,500 ಸಸಿಗಳು ಸಾರ್ವ ಜನಿಕರಿಗೆ ದೊರೆಯಲಿದೆ. ಉಳಿದದ್ದು ನಡುತೋಪು, ಹಸಿರು ನಗರ ಅಭಿವೃದ್ದಿ, ಅರಣ್ಯ ಅಭಿವೃದ್ದಿಗೆ ಬಳಕೆಯಾಗುತ್ತದೆ.
ದರ ಎಷ್ಟು..?
ಚಿಕ್ಕ ಲಕೋಟೆಯ ಸಸಿ 1 ರೂ.ನಂತೆ, ದೊಡ್ಡದು 3 ರೂ. ನಂತೆ ದೊರೆಯಲಿದೆ. ಜೂನ್ ಪ್ರಥಮ ವಾರದಿಂದ ವಿತರಣೆ ಪ್ರಾರಂಭವಾಗಲಿದೆ.
ಪ್ರೋತ್ಸಾಹಧನ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಪ್ರೋತ್ಸಾಹ ಧನವೂ ದೊರೆಯಲಿದೆ. ಭೂಮಿಯ ಆರ್.ಟಿ.ಸಿ. ಜತೆಗೆ ಬ್ಯಾಂಕ್ ಪಾಸ್ಬುಕ್ ಪ್ರತಿ, ಭಾವಚಿತ್ರ, ಆಧಾರ್ಕಾರ್ಡ್ ನೀಡಬೇಕು. ಬದುಕುಳಿದ ಸಸಿಗಳಿಗೆ ಮುಂದಿನ ಮೇ ತಿಂಗಳಿನಲ್ಲಿ ತಲಾ ರೂ.30, ಮುಂದಿನ ವರ್ಷ ಮತ್ತೆ ರೂ. 30 ಹಾಗೂ 3ನೇ ವರ್ಷ ರೂ. 40 ಸಹಾಯಧನ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಒಂದು ಎಕ್ರೆ ಭೂಮಿ ಹೊಂದಿದವರು ವಿಭಿನ್ನ ತಳಿಯ 500 ಸಸಿ ಪಡೆಯಬಹುದು.
ಬೈಕಾಡಿ ಸಸ್ಯಕ್ಷೇತ್ರ ಎಲ್ಲಿದೆ ?
ಬ್ರಹ್ಮಾವರ ದೂಪದಕಟ್ಟೆಯಿಂದ ಹಾರಾಡಿ ಮಾರ್ಗ ದಲ್ಲಿ ಕೇವಲ 200 ಮೀ. ತೆರಳಿದರೆ ಬೈಕಾಡಿ ಸಸ್ಯಕ್ಷೇತ್ರ ಸಿಗುತ್ತದೆ. ರಾ.ಹೆ. 66ರ ಸಮೀಪದಲ್ಲಿರುವುದರಿಂದ ಗಿಡ ಗಳನ್ನು ಕೊಂಡುಹೋಗಲು ಸಾರ್ವಜನಿಕರಿಗೆ ಸಹಕಾರಿ ಆಗಿದೆ.
ಜಿಲ್ಲೆಯಲ್ಲಿ ಎಲ್ಲೆಲ್ಲಿ ಲಭ್ಯ ?
ಉಡುಪಿ ಜಿಲ್ಲೆಯಲ್ಲಿ ಬೈಂದೂರಿನ ಸರ್ಪನಕಟ್ಟೆ, ಕುಂದಾಪುರದ ಮಾವಿನಗುಳಿ ನೇರಳಕಟ್ಟೆ, ಶಂಕರ ನಾರಾಯಣ, ಹೆಬ್ರಿಯ ಮಡಾಮಕ್ಕಿ, ಕಾರ್ಕಳದ ಶಿರ್ಲಾಲಿನಲ್ಲಿ ಸಸ್ಯ ಕ್ಷೇತ್ರಗಳಿವೆ.
ಗುಣಮಟ್ಟದ ಸಸಿ
ಹೊಸ ಮಣ್ಣು ಹಾಗೂ ಗೊಬ್ಬರವನ್ನು ಮಿಶ್ರಣ ಮಾಡಲಾಗುತ್ತದೆ. ಪ್ಲಾಸ್ಟಿಕ್ ಲಕೋಟೆಯಲ್ಲಿ ಗಿಡ ಮಾಡಿ ಪ್ರತಿನಿತ್ಯ ನೀರುಣಿಸಿ ಜೋಪಾನ ಮಾಡಲಾಗುತ್ತದೆ. ಕೆಲವು ತಳಿಯ ಸಸಿಗಳಿಗೆ ಒಂದು ವರ್ಷದ ಮೊದಲೇ ಬೀಜ ಹಾಕಿ ಆರೈಕೆ ಪ್ರಾರಂಭಿಸಲಾಗುತ್ತದೆ. ಆಗಸ್ಟ್ ನಂತರ ನಿರಂತರ ಅಭಿವೃದ್ಧಿ ಪಡಿಸಿ ಜೂನ್ನಲ್ಲಿ ನಾಟಿಗೆ ಸಿದ್ಧಗೊಳ್ಳುತ್ತದೆ.
ಮುತುವರ್ಜಿ ವಹಿಸಿ
ಗಿಡ ಪಡೆದವರು ಮುತುವರ್ಜಿ ವಹಿಸಿ ಸಾಕಾಣಿಕೆ ಮಾಡಿದರೆ ಮಾತ್ರ ಕೆಲಸ ಸಾರ್ಥಕವಾಗುತ್ತದೆ. ಹಸಿರು ಹೊದಿಕೆ ರಚನೆಗೆ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿದಂತಾಗುತ್ತದೆ.
– ಜೀವನ್ದಾಸ್ ಶೆಟ್ಟಿ,
ಉಪವಲಯ ಅರಣ್ಯಾಧಿಕಾರಿ
– ಪ್ರವೀಣ್ ಮುದ್ದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್!: ಟಿಕೆಟ್ ವಂಚಿತ ರಘುಪತಿ ಭಟ್ ಬಿರುನುಡಿ
Varahi Project; ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿದರೂ ಉಡುಪಿಗೆ ನೀರು ಸದ್ಯಕ್ಕೆ ಹರಿಯದು
ಪ್ರಕೃತಿ ವಿಕೋಪ ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ: ಉಭಯ ಜಿಲ್ಲಾಧಿಕಾರಿಗಳ ಸೂಚನೆ
Malpe Beach: ಸೆ.15ರ ವರೆಗೆ ಪ್ರವಾಸೀ ಬೋಟ್ ಚಟುವಟಿಕೆ ಸ್ಥಗಿತ
ಪರಿಷತ್ ಚುನಾವಣೆ ಮೇಲೆ “ಪೆನ್ಡ್ರೈವ್’ ಪ್ರಭಾವ ಬೀರದು: ಭೋಜೇಗೌಡ
MUST WATCH
ಹೊಸ ಸೇರ್ಪಡೆ
Parkನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ; ಕೇಂದ್ರ ವಿ.ವಿ.ಯ ವಿವಾದಿತ ಅಧ್ಯಾಪಕನ ಸೆರೆ
Android ಮೊಬೈಲ್ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್!: ಟಿಕೆಟ್ ವಂಚಿತ ರಘುಪತಿ ಭಟ್ ಬಿರುನುಡಿ
ಅನಿರೀಕ್ಷಿತ ಧನಾ ಗಮ ಸಂಭವ, ಅವಿವಾಹಿತ ಹುಡುಗರಿಗೆ ಶೀಘ್ರ ವಿವಾಹ ಯೋಗ…
ಕರಾವಳಿ ಜಿಲ್ಲೆಗಳಲ್ಲಿ ಬಂದಿದೆ ಹಾಲಿಗೆ ಬರ! ಹೈನುಗಾರಿಕೆಗೆ ಮನಮಾಡದ ಯುವಜನ