ಬೇಳಂಜೆ: ಉಪಯೋಗಕ್ಕೆ ಬಾರದ ರಿಕ್ಷಾ ತಂಗುದಾಣ
Team Udayavani, May 17, 2019, 6:20 AM IST
ಹೆಬ್ರಿ: ಕುಚ್ಚಾರು ಗ್ರಾ.ಪಂ.ವ್ಯಾಪ್ತಿಯ ಬೇಳಂಜೆಯಲ್ಲಿ ತಾ.ಪಂ. ಅನುದಾನದಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ರಿಕ್ಷಾ ತಂಗುದಾಣ ಉಪಯೋಗವಿಲ್ಲದಂತಾಗಿದೆ.
ಬೇಳಂಜೆ ಬಸ್ಸು ನಿಲ್ದಾಣದ ಸಮೀಪ ರಿಕ್ಷಾ ಸ್ಟಾಂಡ್ ಬೇಕೆನ್ನುವುದು ಇಲ್ಲಿನ ರಿಕ್ಷಾ ಚಾಲಕರ ಬೇಡಿಕೆಯಾಗಿತ್ತು. ಆದರೆ ನಿರ್ಮಾಣವಾದ ಸ್ಟಾಂಡ್ ಬಸ್ಸು ನಿಲ್ದಾಣಕ್ಕಿಂತ ಸ್ವಲ್ಪದೂರದಲ್ಲಿದೆ. ಈ ಕಾರಣ ರಿಕ್ಷಾದವರು ಹೋಗುತ್ತಿಲ್ಲ ಎನ್ನಲಾಗಿದೆ.
ಆರೋಪ
ಕಳೆದ 2 ವರ್ಷದ ಹಿಂದೆ ರಿಕ್ಷಾ ಸ್ಟಾÂಂಡ್ನ ತಗಡಿನ ಮಾಡು ನಿರ್ಮಾಣ ಮಾಡಿದ್ದು ಕಳೆದ 3 ತಿಂಗಳ ಹಿಂದೆ ಇಂಟರ್ಲಾಕ್ ಅಳವಡಿಸಲಾಗಿದೆ.ಆದರೆ ಇನ್ನೂ ಕೂಡ ಇದರ ಉಪಯೋಗ ಮಾತ್ರ ಆಗಿಯೇ ಇಲ್ಲ. ಈ ಬಗ್ಗೆ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಪ್ರಶ್ನಿಸಿದ್ದು ರಿಕ್ಷಾ ಚಾಲಕರ ಸಭೆ ಕರೆದು ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇತ್ಯರ್ಥಪಡಿಸುತ್ತೇವೆ
ಈ ಬಗ್ಗೆ ಈಗಾಗಲೇ ಪಂಚಾಯತ್ನಲ್ಲಿ ಚರ್ಚೆ ನಡೆಸಿದ್ದು ಶೀಘ್ರ ರಿಕ್ಷಾ ಚಾಲಕರ ಸಭೆ ಕರೆದು ನಿರ್ಮಾಣವಾದ ರಿಕ್ಷಾ ಸ್ಟಾಡ್ನಲ್ಲಿ ರಿಕ್ಷಾ ನಿಲ್ಲಿಸುವಂತೆ ಸೂಚಿಸಲಾಗುವುದು.
-ಆನಂದ ಕುಮಾರ್ ಬಿ.ಕೆ., ಪಿ.ಡಿ.ಒ. ಕುಚ್ಚಾರು ಗ್ರಾ.ಪಂ.
ನಮಗೆ ಅನುಕೂಲವಿಲ್ಲ
ಈಗ ನಿರ್ಮಾಣವಾದ ರಿಕ್ಷಾ ಸ್ಟಾ¤ಂಡ್ ಬಸ್ಸು ತಂಗುದಾಣದಿಂದ ದೂರವಿದ್ದು ಅಲ್ಲಿ ರಿಕ್ಷಾ ನಿಲ್ಲಿಸಿದರೆ ಜನ ಬರುವುದಿಲ್ಲ.ಈ ಬಗ್ಗೆ ಮುಂಚೆಯೇ ಪಂಚಾಯತ್ ಗಮನಕ್ಕೆ ತಂದಿದ್ದು ಬಸ್ಸುತಂಗುದಾಣ ಸಮೀಪ ಜಾಗ ಸಮತಟ್ಟು ಮಾಡಿದ್ದಾರೆ.ಆದರೆ ಬಳಿಕ ಬೇರೆ ಜಾಗದಲ್ಲಿ ನಿಲ್ದಾಣ ಮಾಡಿದ್ದಾರೆ. ಇದರಿಂದ ಅನುಕೂಲವಿಲ್ಲ.
-ಬಸವರಾಜ್, ರಿಕ್ಷಾ ಚಾಲಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ