ಬೆಳ್ಮಣ್: ಒಂದೇ ದಿನದಲ್ಲಿ ನಾಲ್ಕು ಎಕ್ರೆ ಗದ್ದೆ ನಾಟಿ
ಗಂಗಾವತಿಯ 22 ಗುತ್ತಿಗೆ ಮಹಿಳಾ ಕೃಷಿ ಕಾರ್ಮಿಕರಿಂದ ಶರವೇಗದ ಕೆಲಸ
Team Udayavani, Jun 20, 2019, 5:05 AM IST
ಬೆಳ್ಮಣ್: ಒಂದೇ ದಿನದಲ್ಲಿ 4 ಎಕರೆ ಕೃಷಿ ಭೂಮಿಯನ್ನು ನಾಟಿ ಮಾಡಿ ಗಂಗಾವತಿ ಮೂಲದ 22 ಕೃಷಿ ಮಹಿಳಾ ಕಾರ್ಮಿಕರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.
ಸಂಕಲಕರಿಯದ ಸುಧಾಕರ ಸಾಲ್ಯಾನ್ ಅವರ ಗದ್ದೆಯಲ್ಲಿ ಮಹಿಳೆಯರು 4 ಎಕರೆಗೆ ಬೇಕಾಗುವಷ್ಟು ನೇಜಿ ಕಿತ್ತು ಬಳಿಕ ಸಂಜೆಯೊಳಗೆ ನಾಟಿ ಮುಗಿಸಿದ್ದಾರೆ.
ಗಂಗಾವತಿ ಮೂಲದ 50 ಮಂದಿಯ ಕೃಷಿ ಕಾರ್ಮಿಕ ತಂಡವೊಂದನ್ನು ಶಿವಮೊಗ್ಗ ಮೂಲದ ಮಾಲತೇಶ್ ಎಂಬವರು ಗುತ್ತಿಗೆ ಆಧಾರದಲ್ಲಿ ಕೃಷಿ ಜಮೀನಿನಲ್ಲಿ ಕೆಲಸ ಮಾಡಿಕೊಡುತ್ತಾರೆ. ಇವರಿಗೆ ಎಕರೆಗೆ 4 ಸಾವಿರ ರೂ. ದರವಿದೆ. ಕೂಲಿ ಕಾರ್ಮಿಕರ ಕೊರತೆಯಿಂದ ನಲುಗಿ ಹೋಗಿದ್ದ ಈ ಭಾಗದ ಕೃಷಿ ಕೇತ್ರಕ್ಕೆ ಇವರಿಂದಾಗಿ ತುಸು ಚೇತರಿಕೆ ಬಂದಿದೆ.
ಊರಿನಲ್ಲಿ ನೀರಿಲ್ಲ, 120 ರೂ. ಸಂಬಳ
ಗಂಗಾವತಿಯಲ್ಲಿ ತುಂಗಭದ್ರಾ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಇದ್ದು, ಆದ್ದರಿಂದ ಕೆಲಸ ಹುಡುಕಿಕೊಂಡು ಅವರು ಕರಾವಳಿಗೆ ಬಂದಿದ್ದಾರೆ. ಊರಿನಲ್ಲಿ ಸಿಗುವ 120 ರೂ. ಸಂಬಳ ಏನೇನೂ ಸಾಲದು. ಆದ್ದರಿಂದ ಇಲ್ಲೇ ಕೆಲಸ ಕಂಡುಕೊಂಡಿದ್ದಾರೆ. ಇವರು ಬೆಳಗ್ಗೆ 8 ಗಂಟೆಗೆ ನಾಟಿ ಕೆಲಸ ಆರಂಭಿಸಿದರೆ, ಮುಗಿಯುವ ವರೆಗೂ ವಿರಮಿಸುವುದಿಲ್ಲ. ಆಹಾರದ ವ್ಯವಸ್ಥೆಯನ್ನು ಇವರೇ ನಿಭಾಯಿಸುತ್ತಾರೆ. ತಂಡದಲ್ಲಿ ಕೆಲ ಮಂದಿ ಪುರುಷರೂ ಇದ್ದು ಭಾರೀ ಚುರುಕಿನಲ್ಲಿ ದುಡಿಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ