ಫಲಾನುಭವಿಗಳಿಗೆ ಕೈ ಸೇರದ ಮಾಸಾಶನ
ತಾಂತ್ರಿಕ ದೋಷ ಕಾರಣ; ಐದಾರು ತಿಂಗಳುಗಳಿಂದ ಬಾಕಿ
Team Udayavani, Feb 1, 2020, 6:44 AM IST
ಉಡುಪಿ: ತಾಂತ್ರಿಕ ಅಡಚಣೆ ಮತ್ತು ರಾಜ್ಯ ಸರಕಾರದ ಆರ್ಥಿಕ ಸಂಕಷ್ಟದಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ತಿಂಗಳುಗಳಿಂದ 2.76 ಲಕ್ಷ ಫಲಾನುಭವಿಗಳು ಮಾಸಾಶನಕ್ಕಾಗಿ ಅಂಚೆ ಕಚೇರಿ, ಬ್ಯಾಂಕ್ಗಳಿಗೆ ಅಲೆದಾಡು ವಂತಾಗಿದೆ.
ಉಭಯ ಜಿಲ್ಲೆಗಳಲ್ಲಿ 2,76,209 ಮಂದಿ ಫಲಾನುಭವಿಗಳು ಈ ಸಮಸ್ಯೆಯಿಂದ ಬಾಧಿತರಾಗಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆ ಅನ್ವಯ ವೃದ್ಧಾಪ್ಯ, ವಿಧವಾ, ವಿಶೇಷಚೇತನ, ಸಂಧ್ಯಾ ಸುರಕ್ಷಾ, ತೃತೀಯ ಲಿಂಗಿಗಳು, ಆ್ಯಸಿಡ್ ದಾಳಿಗೆ ಒಳಗಾದವರಿಗೆ ಪಿಂಚಣಿ ನೀಡಲಾಗುತ್ತಿದೆ. ಹತ್ತು ಹಲವು ಯೋಜನೆಗಳಿಗೆ ಸಾವಿರಾರು ಕೋಟಿ ರೂ. ವ್ಯಯಿಸುವ ಸರಕಾರ ಬಡವರಿಗೆ ಪಿಂಚಣಿ ಹಣ ನೀಡಲು ಏಕೆ ವಿಳಂಬ ಮಾಡುತ್ತಿದೆ ಎಂಬ ಪ್ರಶ್ನೆ ಸಂತ್ರಸ್ತರದ್ದು.
ತಿಂಗಳ ಪಿಂಚಣಿ ಬಾಕಿ!
ಅಕ್ಕಿ, ಬೇಳೆ, ಔಷಧ ಇತ್ಯಾದಿಗೆ ಹಣ ಹೊಂದಿಸಲು ಸಾಧ್ಯವಾಗದೆ ಪಿಂಚಣಿ ಹಣ ನಂಬಿ ಕುಳಿತವರ ಪಾಡು ಕೇಳುವಂತಿಲ್ಲ. ವಿಶೇಷ ಚೇತನ, ವೃದ್ಧಾಪ್ಯ, ವಿಧವಾ ವೇತನ ಎರಡರಿಂದ ಮೂರು ತಿಂಗಳಷ್ಟು ಪಾವತಿಗೆ ಬಾಕಿ ಇವೆ.
ಹೊಸ ತಂತ್ರಾಂಶ ಕಿರಿಕ್!
ಖಜಾನೆ 1ಮತ್ತು 2 ಎಂಬ ಹೊಸ ತಂತ್ರಾಂಶ ಅಭಿವೃದ್ಧಿ ಪಡಿಸಿದ ಬಳಿಕ ಅದಕ್ಕೆ ಕೆಲವರ ಹೆಸರು ಸೇರ್ಪಡೆಯಾಗದೆ ಕೈಬಿಡಲಾಗಿದೆ ಎಂಬ ದೂರಿದೆ. ಇದರಿಂದಲೂ ಸಮಸ್ಯೆ ಹೆಚ್ಚಾಗಿದೆ.”ವಿಳಾಸದಲ್ಲಿ ಇಲ್ಲ’, “ಮೃತಪಟ್ಟಿ¨ªಾರೆ’ ಎಂಬುದರ ಜತೆಗೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆ ದುರುಪಯೋಗ ವರದಿ ಹಿನ್ನೆಲೆಯಲ್ಲಿ ಸಾವಿರಾರು ಜನರ ಪಿಂಚಣಿ ರದ್ದು ಪಡಿಸಲಾಗಿದೆ. ಹೀಗೆ ಕೈಬಿಟ್ಟವರಲ್ಲಿ ಅರ್ಹರೂ ಇದ್ದು, ಅವರು ದಾಖಲೆಗಳನ್ನು ಹಿಡಿದುಕೊಂಡು ಕಚೇರಿ ಅಲೆಯುವಂತಾಗಿದೆ. ತಮ್ಮದಲ್ಲದ ತಪ್ಪಿಗೆ ಹೊಸದಾಗಿ ಅರ್ಜಿ, ದಾಖಲೆ ಒದಗಿಸಲು ಸಾವಿ ರಾರು ರೂ. ವ್ಯಯಿಸುವಂತಾಗಿದೆ ಎಂಬುದು ಫಲಾನುಭವಿಗಳ ಬೇಸರದ ನುಡಿ.
ಬಾಕಿ ಹಣ ಬರುವುದೇ?
ಪ್ರಸ್ತುತ ಅವಳಿ ಜಿಲ್ಲೆಯಲ್ಲಿ ಸಾವಿರಾರು ಫಲಾನುಭವಿಗಳ ಪಿಂಚಣಿ 6 ತಿಂಗಳಿನಿಂದ ನಿಲುಗಡೆಯಾಗಿದೆ. ಈಗ ಅವರಿಗೆ ಮತ್ತೆ ಅರ್ಜಿ ಸಲ್ಲಿಲು ಸೂಚಿಸಲಾಗಿದೆ. ಹಾಗಾಗಿಈ ಹಿಂದೆ ಪಿಂಚಣಿ ರದ್ದಾಗಿ ಬಾಕಿಯಾದ ಪಿಂಚಣಿ ಹಣ ಬರುವ ಸಾಧ್ಯತೆ ಕಡಿಮೆ ಇದೆ ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ತಾಂತ್ರಿಕ ಕಾರಣಗಳಿಂದ ಪಿಂಚಣಿ ಸರಿಯಾದ ಸಮಯಕ್ಕೆ ಫಲಾನುಭವಿಗಳ ಕೈ ಸೇರುತ್ತಿಲ್ಲ. ಹಂತ ಹಂತವಾಗಿ ಸಮಸ್ಯೆ ಪರಿಹರಿಸ ಲಾಗುತ್ತಿದೆ.
-ಪ್ರದೀಪ ಕುರ್ಡೆಕರ್, ತಹಶೀಲ್ದಾರ್ ಉಡುಪಿ.
– ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ