ಬಿಜೆಪಿಗೆ ಆಶೀರ್ವಾದ ಮಾಡಿದರೆ…
Team Udayavani, Feb 22, 2018, 9:53 AM IST
ಉಡುಪಿ: ಬಿಜೆಪಿ ಸರಕಾರಕ್ಕೆ ಆಶೀರ್ವಾದ ಮಾಡಿದರೆ ವಿವಿಧ ಮಠಾ ಧೀಶರು ಈಗಿನ ಸರಕಾರದಿಂದ ಎದುರಿಸುತ್ತಿರುವ ಆತಂಕಗಳು ದೂರವಾಗುತ್ತವೆ ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭರವಸೆ ನೀಡಿದ್ದಾರೆ.
ಮಂಗಳವಾರ ರಾತ್ರಿ ವಿವಿಧ ಸಂತ ರೊಂದಿಗೆ ಸಂವಾದ ನಡೆಸಿದ ಅವರು ನರೇಂದ್ರ ಮೋದಿಯವರು ಪ್ರಧಾನಿ ಯಾದ ಬಳಿಕ ಹಿಂದುತ್ವ, ಹಿಂದೂ ಸಂಸ್ಕೃತಿ ಬಗೆಗೆ ಗೌರವ ಸಿಗುತ್ತಿದೆ. ಇದನ್ನು ಉಳಿಸಿಕೊಳ್ಳ ಬೇಕಾ ಗಿದೆ. ರಾಜ್ಯ ವಿಧಾನಸಭೆಗೂ ನಡೆ ಯುವ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಕೊಟ್ಟು ಸರಕಾರ ಸ್ಥಾಪನೆಯಾದರೆ ಮಠಾಧೀಶರು ನೆಮ್ಮದಿಯಿಂದ ತಮ್ಮ ತಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶ ಮಾಡಿಕೊಡುತ್ತೇವೆ ಎಂದರು.
ವಿವಿಧ ಸ್ವಾಮೀಜಿಯವರಿಗೆ ಮೂರು ನಿಮಿಷಗಳ ಕಾಲ ಮಾತನಾಡಲು ಅವಕಾಶ ಕೊಡಲಾಗಿತ್ತು. ಸಮಾನ ನಾಗರಿಕ ಸಂಹಿತೆ, ಗೋರಕ್ಷಣೆ, ಮಠ ಮಂದಿರಗಳು, ಹಿಂದೂಗಳಿಗೆ ರಕ್ಷಣೆ ಕೊಡುವ ಕೆಲಸ ಆಗಬೇಕು ಎಂದು ಸ್ವಾಮೀಜಿಯವರು ಆಗ್ರಹಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿ ಯೂರಪ್ಪನವರು ಮಾತನಾಡಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದೂಗಳಿಗೆ, ಮಠ ಮಂದಿರಗಳಿಗೆ ಎದುರಾದ ಆತಂಕವನ್ನು ದೂರ ಮಾಡಲಿದ್ದೇವೆ ಎಂದರು.