Tragedy: ಕಾಡು ಹಂದಿಗಳಿಗೆ ಇಟ್ಟಿದ್ದ ನಾಡಾ ಬಾಂಬ್ ಗೆ ಬಲಿಯಾದ ಸಾಕು ನಾಯಿ
Team Udayavani, Oct 12, 2023, 7:54 PM IST
ಬ್ರಹ್ಮಾವರ: ಕಚ್ಚಾ ನಾಡಾ ಬಾಂಬ್ ಸಿಡಿದು ಸಾಕು ನಾಯಿ ಮೃತಪಟ್ಟ ಘಟನೆ ಮಂದಾರ್ತಿ ಸಮೀಪದ ಹಾಡಿಯಲ್ಲಿ ನಡೆದಿದೆ.
ಕಾಡು ಹಂದಿಗಳನ್ನು ಕೊಲ್ಲಲು ಬಾಂಬ್ಗಳನ್ನು ಇಟ್ಟು ಅದರ ಮೇಲೆ ಸೊಪ್ಪು ಮುಚ್ಚಿಡಲಾಗಿತ್ತು ಎನ್ನಲಾಗಿದೆ. ಪರಿಸರದಲ್ಲಿ 17 ಬಾಂಬ್ ಪತ್ತೆಯಾಗಿದೆ. ಬುಧವಾರ ಸಂಜೆ ಹಾಡಿಯಲ್ಲಿ ಪಟಾಕಿ ಸಿಡಿಸಿದ ಶಬ್ದ ಕೇಳಿಸಿತ್ತು. ಗುರುವಾರ ಬೆಳಗ್ಗೆ ನೋಡುವಾಗ ನಾಯಿ ವಿಕಾರವಾಗಿ ಮೃತಪಟ್ಟಿರುವುದು ಕಂಡು ಬಂದಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Mishap: ಇಳಿಯುವ ವೇಳೆ ಚಲಿಸಿದ ಬಸ್… ಬಸ್ ನಿಂದ ಬಿದ್ದು ಮಹಿಳೆಗೆ ಗಾಯ