Brahmavar ನೀಲಾವರ ಕ್ರಾಸ್: ವ್ಯಕ್ತಿ ನಾಪತ್ತೆ; ದೂರು ದಾಖಲು
Team Udayavani, Aug 23, 2023, 7:50 PM IST
ಬ್ರಹ್ಮಾವರ: ಕುಂಜಾಲು ಅಂಚೆ ನೀಲಾವರ ಕ್ರಾಸ್ ನಿವಾಸಿ ಕೆ. ಗಣಪತಿ ನಾಯಕ್ (64) ಅವರು ಮಂಗಳವಾರ ರಾತ್ರಿಯಿಂದ ಕಾಣೆಯಾಗಿದ್ದಾರೆ.
ಮಂಗಳವಾರ ಹೊಟ್ಟೆನೋವಿನ ಬಗ್ಗೆ ಕ್ಲಿನಿಕ್ಗೆ ಹೋಗಿ ಪರೀಕ್ಷಿಸಿಕೊಂಡು ಬಂದಿದ್ದರು. ಊಟ ಮಾಡಿದರೆ ವಾಂತಿಯಾಗುತ್ತದೆ ಎಂದು ಸೀಯಾಳ ಕುಡಿದು ರಾತ್ರಿ 9.45ಕ್ಕೆ ಮಲಗಿದವರು ಬೆಳಗ್ಗೆ ನೋಡಿದಾಗ ಕಾಣೆಯಾಗಿದ್ದರು. ರಾತ್ರಿ 11.30ಕ್ಕೆ ಮನೆಯಿಂದ ನೀಲಾವರ ಕ್ರಾಸ್ಗೆ ಹೋಗುವ ರಸ್ತೆಯಲ್ಲಿ ಅವರು ನಡೆದುಕೊಂಡು ಹೋಗುವುದನ್ನು ಸಮೀಪದ ನಿವಾಸಿ ನೋಡಿದ್ದಾರೆ.
ಬೊಕ್ಕ ತಲೆ, ಬಿಳಿ ತಲೆಕೂದಲು ಇದ್ದು, ಗಡ್ಡ ಬಿಟ್ಟಿದ್ದಾರೆ. ಗುಲಾಬಿ ಬಣ್ಣದ ಅಂಗಿ ಮತ್ತು ಕೇಸರಿ ಬಣ್ಣದ ಲುಂಗಿ ಧರಿಸಿದ್ದಾರೆ. ಇವರ ಕುರಿತು ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ (08250-2561044) ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.