ಬ್ರಹ್ಮಾವರ: ಪಹಣಿ ಪತ್ರ ಗೊಂದಲ
Team Udayavani, Mar 8, 2019, 1:00 AM IST
ಬ್ರಹ್ಮಾವರ: ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ಆರ್.ಟಿ.ಸಿ. ಪಡೆಯಲು ಬ್ರಹ್ಮಾವರ ತಾಲೂಕು ಕಚೇರಿಯಲ್ಲಿ ಜನರು ಮುಗಿ ಬೀಳುತ್ತಿದ್ದಾರೆ.
ಯೋಜನೆಗೆ ಆರ್ಟಿಸಿ ಅಗತ್ಯ ಇಲ್ಲ ಎಂದು ತಹಶೀಲ್ದಾರ್ ಹೇಳಿಕೆ ನೀಡಿದ್ದರೂ ಜನರು ಗೊಂದಲದಿಂದ ಸರತಿ ಸಾಲಿನಲ್ಲಿ ನಿಂತು ಆರ್ಟಿಸಿ ಪಡೆಯುತ್ತಿದ್ದಾರೆ.
ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೇಂದ್ರ ಸರಕಾರದ ನೆರವಿನ ನಿಧಿ ಪಡೆಯಲು ಆಧಾರ್ ಜತೆ ಆರ್ಟಿಸಿ ಲಗತ್ತಿಸಬೇಕು ಎಂಬ ಕಾರಣಕ್ಕೆ ಜನರು ಬೆಳಗ್ಗಿನಿಂದಲೇ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ವಿತರಣೆಗೆ ಒಂದೇ ಕಂಪ್ಯೂಟರ್ ಇರುವುದರಿಂದ ನೂಕುನುಗ್ಗಲಿನ ವಾತಾವರಣ ನಿರ್ಮಾಣವಾಗಿದೆ.
ಯೋಜನೆಗೆ ಆರ್ಟಿಸಿ ಅಗತ್ಯವಿಲ್ಲ ಎಂದು ತಿಳಿಸಿದರೂ ಜನರು ಕೇಳದೆ ಸಾಲಿನಲ್ಲಿ ನಿಂತು ಪಡೆಯುತ್ತಿದ್ದಾರೆ ಎಂದು ತಹಶೀಲ್ದಾರ್ ಕಿರಣ್ ಬೋರಯ್ಯ ತಿಳಿಸಿದ್ದಾರೆ.