Brahmavar: ವಾಹನ ಢಿಕ್ಕಿ: ಬೈಕ್ ಸವಾರ ಸಾವು
Team Udayavani, Jul 18, 2023, 10:58 PM IST
ಬ್ರಹ್ಮಾವರ: ಇಲ್ಲಿನ ಹೇರೂರು ರುಡ್ಸೆಟ್ ಕ್ರಾಸ್ ಬಳಿ ಸೋಮವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಬೆನಗಲ್ನ ಸುಧಾಕರ ನಾಯ್ಕ (35) ಮೃತಪಟ್ಟಿದ್ದಾರೆ.
ಅವರು ಉಡುಪಿ ಕಡೆಯಿಂದ ಬೈಕ್ನಲ್ಲಿ ಬರುತ್ತಿದ್ದಾಗ ಅಪರಿಚಿತ ವಾಹನ ಢಿಕ್ಕಿ ಹೊಡೆದಿದ್ದು, ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ.
ಸುಧಾಕರ ನಾಯ್ಕ ಅವರ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ