ಬುದ್ಧನನ್ನೂ “ಮೇಡ್‌ ಇನ್‌ ಚೀನ’ ಮಾಡಹೊರಟ ಚೀನ: ಸಂತೋಷ್‌ ಜೀ


Team Udayavani, Dec 12, 2017, 8:15 AM IST

12-7.jpg

ಕೋಟ: ಚೀನ ತನ್ನ ಉತ್ಪನ್ನಗಳ ಮೂಲಕ ಪ್ರಪಂಚವನ್ನು ಆವರಿಸುತ್ತಿದೆ. ಇದರ ಮುಂದುವರಿಕೆಯಾಗಿ ಬುದ್ಧ ಚೀನದಲ್ಲಿ ಜನಿಸಿದವನು, ಬೌದ್ಧ ಧರ್ಮದ ಉಗಮ ಚೀನದಲ್ಲಿ, ಬುದ್ಧಗಯಾ ಚೀನದಲ್ಲಿದೆ ಎಂದು ಸುಳ್ಳುವಾದ ಹೂಡುವ ಮೂಲಕ ಬುದ್ಧನನ್ನೂ “ಮೇಡ್‌ ಇನ್‌ ಚೀನ’ ಮಾಡ ಹೊರಟಿದೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಜೀ ಹೇಳಿದರು. ಅವರು ಕೋಟ ಕಾರಂತ ಕಲಾಭವನದಲ್ಲಿ ಭಗತ್‌ ಸಿಂಗ್‌ ಯುವ ವೇದಿಕೆ ಕೋಟ ಆಶ್ರಯದಲ್ಲಿ ಸೋಮವಾರ ನಡೆದ “ಚೀನ ವಸ್ತುವಿನ ಬಳಕೆ ದೇಶದ ಆರ್ಥಿಕತೆಗೆ ಸಾವಿನ ಕುಣಿಕೆ’ ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿದರು.

ಮನೆಯೊಳಗೆ ಹಾವಿದ್ದರೆ ನಿದ್ದೆ ಕಷ್ಟ !
ಭಾರತ ಸದಾ ತನಗೆ ಪಾಕ್‌ ಸವಾಲು ಎಂದು ಪರಿಗಣಿಸುತ್ತದೆ. ಆದರೆ ನಮಗೆ ನಿಜವಾದ ಎದುರಾಳಿ ಚೀನ. ಏಕೆಂದರೆ ಆ ದೇಶವು ಆಕ್ರಮಣಕಾರಿ ನೀತಿ ಹೊಂದಿದೆ ಮತ್ತು ಭಾರತಕ್ಕಿಂತ ಶಕ್ತಿಶಾಲಿಯಾಗಿದೆ. ಸೊಳ್ಳೆ ಮನೆಯೊಳಗಿದ್ದರೆ ಹೆಚ್ಚು ಆತಂಕವಿಲ್ಲದೆ ನಿದ್ದೆ
ಮಾಡಬಹುದು. ಆದರೆ ಅಪಾಯಕಾರಿ ಹಾವು ಮನೆಯೊಳಗಿದ್ದರೆ ನೆಮ್ಮದಿಯಿಂದ ನಿದ್ರಿಸುವುದು ಅಸಾಧ್ಯ. ಚೀನ ಹಾವಿನಂತೆ ಅಪಾಯಕಾರಿ ರಾಷ್ಟ್ರ ಎಂದು ಅವರು ಹೇಳಿದರು.

ಶೇ. 47ರಷ್ಟು ಕಾಶ್ಮೀರ ಭಾರತದ ಜತೆಗಿಲ್ಲ
ಭಾರತದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸರಕಾರಗಳ ತಪ್ಪು ನೀತಿಯಿಂದ ಈಗಾಗಲೇ ಶೇ. 47ರಷ್ಟು ಕಾಶ್ಮೀರದ ಭಾಗವನ್ನು ಚೀನ ಮತ್ತು ಪಾಕ್‌ ಕಬಳಿಸಿವೆ. ನಾವು ಇನ್ನೂ ಎಚ್ಚರವಾಗದಿದ್ದರೆ ಕಾಶ್ಮೀರದ ಇನ್ನಷ್ಟು ಭೂ ಭಾಗಗಳು ನಮ್ಮಿಂದ ದೂರವಾಗಲಿವೆ ಎಂದವರು ಆತಂಕ ವ್ಯಕ್ತಪಡಿಸಿದರು.

ಇತಿಹಾಸದಲ್ಲಿ ಒಮ್ಮೆಯೂ ಭಾರತವನ್ನು ವಿರೋಧಿಸದ ದೇಶ ಟಿಬೆಟ್‌. ಅಲ್ಲಿನ ಧರ್ಮಗುರುವಿಗೆ ಭಾರತದಲ್ಲಿ ಆಶ್ರಯಕೊಟ್ಟದ್ದು ನಮ್ಮ ಮಾನವೀಯತೆಯ ಪ್ರತೀಕ. ಟಿಬೆಟ್‌ನಿಂದ ವಲಸೆ ಬಂದು, 39 ಶಿಬಿರಗಳಲ್ಲಿ ವಾಸಿಸುತ್ತಿರುವ 80,000 ಮಂದಿ ಇಂದಿಗೂ ಯಾವುದೇ ತಕರಾರು ಇಲ್ಲದೆ ಇದ್ದಾರೆ. ನಮ್ಮ ಸೇನೆಯಲ್ಲಿ ಸೇವೆಯಲ್ಲಿರುವ ಭಾರತೀಯೇತರರು ಎಂದರೆ ಟಿಬೆಟ್‌ನ ಗೂರ್ಖಾ ಜನಾಂಗದವರು ಮಾತ್ರ. ಹೀಗಾಗಿ ನಮಗೆ ಟಿಬೆಟ್‌ ಅತ್ಯಂತ ನಂಬಿಕಸ್ಥ ರಾಷ್ಟ್ರ ಎಂದರು.

ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ್‌ ಸಿ. ಕುಂದರ್‌ ಉದ್ಘಾಟಿಸಿದರು. ಭಗತ್‌ ಸಿಂಗ್‌ ಯುವ ವೇದಿಕೆ ಅಧ್ಯಕ್ಷ ಪ್ರಸಾದ್‌ ಮಣೂರು ಅಧ್ಯಕ್ಷತೆ ವಹಿಸಿದ್ದರು. ಕೋಟ ಶ್ರೀನಿವಾಸ ಪೂಜಾರಿ, ಪ್ರಮೋದ್‌ ಹಂದೆ, ರಾಘವೇಂದ್ರ ಕಾಂಚನ್‌, ಸುಬ್ರಾಯ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಶಮಂತ್‌ ಕೆ. ಎಸ್‌. ನಿರೂಪಿಸಿದರು.

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.