ಎಂಪಿಎಂ ಕಾಲೇಜಿಗೆ ಬಸ್ ಸೌಲಭ್ಯ
Team Udayavani, Sep 26, 2019, 5:29 AM IST
ಕಾರ್ಕಳ: ಸೀಮಿತ ಬಸ್ ಓಡಾಟದಿಂದ ತೊಂದರೆ ಅನುಭವಿಸುತ್ತಿದ್ದ ಮಂಜುನಾಥ ಪೈ ಸ್ಮಾರಕ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಖಾಸಗಿ ಬಸ್ ಮಾಲಕರೋರ್ವರು ಹೆಚ್ಚುವರಿ ಬಸ್ ಒದಗಿಸಿ ನೆರವಾಗಿದ್ದಾರೆ.
ರೇಷ್ಮಾ ಮೋಟಾರ್ ಮಾಲಕ ಟಿ.ಎ. ರಹೀಮ್ ಅವರು ವಿದ್ಯಾರ್ಥಿಗಳಿಂದ ಕಡಿಮೆ ಮೊತ್ತದ ಪ್ರಯಾಣ ದರ ಪಡೆದು ಈ ಸೇವೆ ಒದಗಿಸಿದ್ದಾರೆ.
ಬಸ್ ಪ್ರತಿದಿನ ಬೆಳಗ್ಗೆ 8:15ರ ವೇಳೆ ಕಾರ್ಕಳ ಬಸ್ ಸ್ಟಾಂಡ್ನಿಂದ ಹೊರಟು ವಿದ್ಯಾರ್ಥಿಗಳನ್ನು ಕಾಲೇಜಿಗೆ ತಲುಪಿಸಿ, ಹಿಂದಿರುಗುತ್ತಿದೆ. ಕಾರ್ಕಳ ಪೇಟೆಯಿಂದ 5 ಕೀ.ಮೀ. ದೂರದಲ್ಲಿರುವ ಎಂಪಿಎಂ ಕಾಲೇಜಿಗೆ ಬದಲಿ ಸಾರಿಗೆ ವ್ಯವಸ್ಥೆ ಇರಲಿಲ್ಲ. ಇದೀಗ ಬಸ್ ಸೌಲಭ್ಯ ವಿದ್ಯಾರ್ಥಿಗಳಲ್ಲಿ ಸಂತಸ ವನ್ನುಂಟು ಮಾಡಿದೆ.
ಇತ್ತೀಚೆಗೆ ಪತ್ರಿಕೆಯು ಸೀಮಿತ ಬಸ್ನಿಂದ ವಿದ್ಯಾರ್ಥಿಗಳಿಗಾಗುವ ತೊಂದರೆ ಕುರಿತು ವರದಿ ಪ್ರಕಟಿಸಿ ಗಮನಸೆಳೆದಿತ್ತು.
ವಿದ್ಯಾರ್ಥಿಗಳ ಹಿತದೃಷ್ಟಿ
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೇವಲ ನಾಲ್ಕೈದು ರೂ. ಪ್ರಯಾಣ ದರ ಪಡೆದು ವಿದ್ಯಾರ್ಥಿಗಳನ್ನು ಕಾಲೇಜಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. 30 ವಿದ್ಯಾರ್ಥಿಗಳಿದ್ದಲ್ಲಿ ಕೇವಲ 150 ರೂ. ದೊರೆಯುವುದು. ಉದಯವಾಣಿ ವರದಿ ಹಾಗೂ ನಮ್ಮ ಪೆಟ್ರೋಲ್ ಬಂಕ್ನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪದವಿ ವಿದ್ಯಾರ್ಥಿಯೋರ್ವನ ಕೋರಿಕೆ ಮೇರೆಗೆ ಬಸ್ ಸೌಲಭ್ಯ ನೀಡಲಾಗಿದೆ.
-ಟಿ.ಎ. ರಹೀಮ್, ಮಾಲಕರು, ರೇಷ್ಮಾ ಮೋಟಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ