ಗುಂಡಿಬೈಲು: ನಿಟ್ಟೂರು ಕೊಳೆ ನೀರು
ಶುದ್ಧೀಕರಣ ಘಟಕಕ್ಕೆ ಹೋಗುವ ಪೈಪ್ ದುರಸ್ತಿ
Team Udayavani, Jul 19, 2019, 5:17 AM IST
ಉಡುಪಿ: ನಿಟ್ಟೂರು ಕೊಳೆನೀರು ಶುದ್ಧೀಕರಣಕ್ಕೆ ಗುಂಡಿಬೈಲು ಹಾಗೂ ಕಲ್ಸಂಕ ಮಾರ್ಗವಾಗಿ ಹಾದು ಹೋಗುವ ಡ್ರೈನೇಜ್ ಪೈಪ್ ಲೈನ್ ಒಡೆದು ಹೋಗಿದ್ದು, ಇದೀಗ ನಗರಸಭೆಯಿಂದ ಪೈಪ್ ಲೈನ್ ದುರಸ್ತಿ ಕೆಲಸ ಪ್ರಾರಂಭವಾಗಿದೆ.
ಕಳೆದ ಒಂದು ವಾರದಿಂದ ಡ್ರೈನೇಜ್ ಪೈಪ್ ಒಡೆದು ಹೋಗಿದ್ದು, ಕೊಳಚೆ ನೀರು ರಸ್ತೆ ತುಂಬಾ ಹರಿಯುತ್ತಿತ್ತು. ಈ ಬಗ್ಗೆ ಅಸುಪಾಸಿನ ಅಂಗಡಿಯವರು ನಗರ ಸಭೆಗೆ ದೂರು ನೀಡಿದ್ದರು. ಒಂದು ವಾರದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ದುರಸ್ತಿ ಕಾಮಗಾರಿ ಪ್ರಾರಂಭಿಸಿದ್ದಾರೆ.
ಉಡುಪಿ ನಗರದಿಂದ ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕ್ಕೆ ಹೋಗುವ ಪೈಪ್ ಒಡೆದು ಹೋಗಿದೆ. 2005ರಲ್ಲಿ ಈ ಪೈಪ್ಲೈನ್ಗಳನ್ನು ಆಳವಡಿಸಲಾಗಿತ್ತು. ಈ ಪೈಪ್ ಆಳವಡಿಸಿ ಸುಮಾರು 15 ವರ್ಷಗಳು ಕಳೆದಿವೆ. ಆ ಪೈಪ್ಗ್ಳು ಒಡೆದುಹೋಗಿವೆೆ. ದುರಸ್ತಿ ಕಾಮಗಾರಿ ಪ್ರಾರಂಭವಾಗಿದ್ದು, ಶೀಘ್ರದಲ್ಲಿ ಸರಿಪಡಿಸಲಾಗುತ್ತದೆ ಎಂದು ನಗರಸಭೆ ಅಧಿಕಾರಿ ತಿಳಿಸಿದ್ದಾರೆ.
ದುರಸ್ತಿ ಆರಂಭ
ಕಳೆದ ಒಂದು ವಾರದಿಂದ ಡ್ರೈನೇಜ್ ನೀರು ರಸ್ತೆಯ ಮೇಲೆ ಹರಿಯುತ್ತಿತ್ತು. ಈ ಬಗ್ಗೆ ನಗರಸಭೆಗೆ ಸಾಕಷ್ಟು ದೂರುಗಳನ್ನು ನೀಡಿದ್ದು, ಇದೀಗ ಜು.16ರಂದು ನಗರಸಭೆ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾಮಗಾರಿ ಪ್ರಾರಂಭಿಸಿದ್ದಾರೆ.
-ವಿವೇಕ್ ಕಾಮತ್, ಸ್ಥಳೀಯರು