ಸಮಗ್ರ ಕೃಷಿಯಲ್ಲಿ ಯಶ ಕಂಡ ಕೆಂಚನೂರಿನ ಚಂದ್ರಶೇಖರ ಉಡುಪ

ಹಲವು ಪ್ರಶಸ್ತಿಗಳ ಸರದಾರ

Team Udayavani, Jan 7, 2020, 5:59 AM IST

044030061921510112213112KDPP2A

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು.ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕುಂದಾಪುರ: ಗೇರು ಕೃಷಿಯಲ್ಲಿ ಬರೋಬ್ಬರಿ 43 ತಳಿಗಳನ್ನು ದೇಶದ ಬೇರೆ ಬೇರೆ ಕಡೆಗಳಿಂದ ತಂದು ಪೋಷಿಸಿ, ಅದರಿಂದ ಉತ್ತಮ ಇಳುವರಿ ಪಡೆದ, ಹಡಿಲು ಬಿಟ್ಟ ಗದ್ದೆಗಳನ್ನೇ ಹುಡುಕಿ ಭತ್ತದ ಕೃಷಿ ಮಾಡುವ ಕಾಯಕಯೋಗಿ, ಕೃಷಿ ಬೆಳೆಯ ಕುರಿತು ರೈತರಿಗೆ ಪಾಠ ಮಾಡುವ “ಕೃಷಿ ಶಿಕ್ಷಕ’ ಕೆಂಚನೂರಿನ ಚಂದ್ರಶೇಖರ ಉಡುಪ. ಭತ್ತ, ಗೇರು, ತೆಂಗು, ಹಡಿಲು ಬಿಟ್ಟ ಗದ್ದೆಗಳಲ್ಲಿ ತರಹೇವಾರಿ ತರಕಾರಿಗಳನ್ನು ಬೆಳೆದು, ಸಮಗ್ರ ಕೃಷಿಯಲ್ಲಿ ಯಶ ಕಂಡವರು ಕೆಂಚನೂರಿನ ಸಾವಯವ ಕೃಷಿಕ ಎಕ್ರೆಗೆ 28 ಕ್ವಿಂಟಾಲ್‌ಅದರಲ್ಲೂ ಬೇರೆಲ್ಲ ತಳಿಯಿಂದ ಎಕ್ರೆಗೆ 13-14 ಕ್ವಿಂಟಾಲ್‌ ಗೇರು ಇಳುವರಿ ಸಿಕ್ಕರೆ, ವೆಂಗೂರ್ಲಾ ಗೇರು ತಳಿಯಲ್ಲಿ ಎಕ್ರೆಗೆ ಬರೋಬ್ಬರಿ 28 ಕ್ವಿಂಟಾಲ್‌ ವಾರ್ಷಿಕ ಇಳುವರಿಯನ್ನು ಗಳಿಸಿದ್ದು, 1 ಎಕರೆಗೆ 1.5 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಗೇರು ಗಿಡಗಳ ಮಧ್ಯೆ ಇತರೆ ಉಪ ಬೆಳೆಗಳನ್ನು ಮಾಡಿದರೆ ಗೇರು ಗಿಡಕ್ಕೂ ಪ್ರಯೋಜನವಾಗುತ್ತದೆ ಎನ್ನುತ್ತಾರೆ.

43 ತಳಿ ಗೇರು ಪೋಷಣೆ
ಚಂದ್ರಶೇಖರ ಉಡುಪ ಅವರು ವಿಶೇಷವಾಗಿ ಗೇರು ಕೃಷಿಯಲ್ಲಿ 43 ತಳಿಗಳನ್ನು ಬೇರೆ ಬೇರೆ ಕಡೆಯಿಂದ ತಂದು, ಪೋಷಣೆ ಮಾಡಿದ್ದಲ್ಲದೆ ಅದರಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಉಳ್ಳಾಲ-1, 2, 3, ಭಾಸ್ಕರ, ವೆಂಗೂರ್ಲಾ -7, 8, ಕೇರಳದಿಂದ ತರಿಸಿದ ಮಡಕತ್ತರ್‌, ಪ್ರಿಯಾಂಕ, ಕನಕ, ದನ, ಸುಲಭ, ಧಾರಶ್ರೀ, ತಮಿಳುನಾಡು, ಆಂಧ್ರದಿಂದಲೂ ಗೇರು ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ. ಇದಲ್ಲದೆ ದೇಶದ ಬೇರೆ ಬೇರೆ ಕಡೆಗಳಿಗೆ ಕೃಷಿಯ ಕುರಿತಾದ ಅಧ್ಯಯನಕ್ಕಾಗಿ ತೆರಳುತ್ತಾರೆ. ಕೃಷಿಕರಿಗೆ ಮಾಹಿತಿ ನೀಡುವ ಕಾಯಕದಲ್ಲೂ ತೊಡಗಿಸಿಕೊಂಡಿದ್ದಾರೆ.

ನೇರ ಬಿತ್ತನೆ ಪ್ರಯೋಗ
ತಮ್ಮ 1 ಎಕರೆ ಗದ್ದೆ ಹಾಗೂ ಬೇರೆಯವ ರೊಬ್ಬರು ಹಡಿಲು ಬಿಟ್ಟ ಸುಮಾರು 6 ಎಕರೆ ಗದ್ದೆಯಲ್ಲಿ ಭತ್ತದ ವಿವಿಧ ತಳಿಗಳ ನೇರ ಬಿತ್ತನೆ ಕಾರ್ಯವನ್ನು ಮಾಡಿ, ಅದರಲ್ಲೂ ಯಶಸ್ವಿ ಯಾಗಿದ್ದಾರೆ. ಇದು ಕುಂದಾಪುರ ತಾಲೂಕು ಮಾತ್ರವಲ್ಲದೆ ಉಡುಪಿ ಜಿಲ್ಲೆಯಲ್ಲಿಯೇ ಕೃಷಿ ಇಲಾಖೆಯಿಂದ ನಡೆದ ಮೊದಲ ನೇರ ಬಿತ್ತನೆ ಪ್ರಯೋಗ ಎನ್ನುವುದು ವಿಶೇಷ. ಇದರಲ್ಲಿ ಹೆಚ್ಚಿನ ಫಸಲು ಕೂಡ ಬಂದಿತ್ತು. 20-22 ಕ್ವಿಂಟಾಲ್‌ ಭತ್ತದ ಇಳುವರಿಯನ್ನು ಕೂಡ ಗಳಿಸಿದ್ದರು. ಕಳೆ ಕೂಡ ಕಡಿಮೆಯಿರುತ್ತದೆ ಎನ್ನುತ್ತಾರೆ ಚಂದ್ರಶೇಖರ ಉಡುಪ.

ಪ್ರಶಸ್ತಿಗಳು
-  2012ರಲ್ಲಿ ಉತ್ತಮ ಗೇರು ಕೃಷಿಗಾಗಿ ಗೇರು – ಕೊಕ್ಕೊ ಕೃಷಿ ವಿ.ವಿ. ಕೊಚ್ಚಿ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿ.
-  2011 ರಲ್ಲಿ ಕೃಷಿ ವಿ.ವಿ. ಬೆಂಗಳೂರಲ್ಲಿ ಆಯೋಜಿಸಿದ ರಾಷ್ಟಿÅàಯ ಕೃಷಿ ಮೇಳದಲ್ಲಿ ತಾಲೂಕು ಮಟ್ಟದ ಪ್ರಗತಿಶೀಲ ಯುವ ರೈತ ಪ್ರಶಸ್ತಿ.
-   2017 ರಲ್ಲಿ ಕೃಷಿ ಮತ್ತು ತೋಟಗಾರಿಕೆ ವಿ.ವಿ. ಶಿವಮೊಗ್ಗ ವತಿಯಿಂದ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ.
– 2018 ರಲ್ಲಿ ಆತ್ಮ ಯೋಜನೆಯಡಿ ತೋಟಗಾರಿಕಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ.
–  2002 ರಲ್ಲಿ ತಾಲೂಕು ಮಟ್ಟದ ಫಲಪುಷ್ಪ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ.

ಹಡಿಲು ಗದ್ದೆಯಲ್ಲಿ ತರಕಾರಿ ಬೆಳೆ
ಇವರು ಬೇರೆಯವರು ಹಡಿಲು ಬಿಟ್ಟ ಸುಮಾರು 3 ಎಕರೆ ಗದ್ದೆಯಲ್ಲಿ ಹಾಗಲಕಾಯಿ, ಹೀರೆಕಾಯಿ, ಬೆಂಡೆ, ಅಲಸಂಡೆ, ಬೂದು ಕುಂಬಳಕಾಯಿ ಸೇರಿದಂತೆ ತರಹೇವಾರಿ ತರಕಾರಿ ಗಿಡಗಳನ್ನು ಬೆಳೆಸಿದ್ದಾರೆ.

ಕೃಷಿಯಲ್ಲೇ ಖುಷಿ
ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡರೆ ಯಶಸ್ಸು ಸಾಧಿಸಬಹುದು. ಈಗಿನ ಕಾಲಕ್ಕೆ ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿಕೊಂಡು ಕೃಷಿ ಮಾಡಿದರೆ ಉತ್ತಮ. ಕೇವಲ ಬೆಳೆಸುವುದು ಮಾತ್ರವಲ್ಲದೆ, ಅದನ್ನು ಮಾರುಕಟ್ಟೆ ಮಾಡುವ ಕಲೆಯನ್ನು ಕಲಿತರೆ ರೈತರೇ ಬಹುಪಾಲು ಲಾಭ ಪಡೆಯಬಹುದು. ಕೃಷಿ ಇರಲಿ ಅಥವಾ ಯಾವುದೇ ಕ್ಷೇತ್ರವಿರಲಿ ಗೆದ್ದವರಿಗಿಂತ ಸೋತವರ ಅಭಿಪ್ರಾಯ, ಸಲಹೆ ಪಡೆಯಬೇಕು. ಯಾಕೆಂದರೆ ಅವರು ಯಾಕೆ ಸೋತರು ಎಂದು ಅರಿತರೆ ನಾವು ಮತ್ತೆ ಅಂತಹ ತಪ್ಪು ಮಾಡುವುದಿಲ್ಲ. ನಾನು ಇದನ್ನು ಸ್ವತಃ ನನ್ನಲ್ಲೂ ಅಳವಡಿಸಿ ಕೊಂಡಿದ್ದೇನೆ.
– ಚಂದ್ರಶೇಖರ ಉಡುಪ, ಕೆಂಚನೂರು    

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರು: 4 ತಿಂಗಳಲ್ಲಿ ಮೂರ್ತಿ ಸ್ಥಾಪನೆ ಪೂರ್ಣಗೊಳಿಸಲು ಆದೇಶ

ಬೆಂಗಳೂರು: 4 ತಿಂಗಳಲ್ಲಿ ಮೂರ್ತಿ ಸ್ಥಾಪನೆ ಪೂರ್ಣಗೊಳಿಸಲು ಆದೇಶ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.