ಚಾರ್ಮಾಡಿ ಘಾಟಿಯಲ್ಲಿ ಆ ಗಂಟೆಗಳು : ಹತ್ತೇ ನಿಮಿಷ ತಡವಾಗಿದ್ದರೆ…


Team Udayavani, Jun 13, 2018, 4:30 AM IST

charmadi-3.jpeg

ಉಡುಪಿ: ‘ಒಂದು ವೇಳೆ ಹತ್ತು ನಿಮಿಷ ಮೊದಲು ಬಂದಿದ್ದರೆ ರಾತ್ರಿಯಿಡೀ ಜೀವಭಯದಿಂದ ನರಳ ಬೇಕಿರಲಿಲ್ಲ. ಆದರೆ ಆದೇ ಹತ್ತು ನಿಮಿಷ ತಡವಾಗಿದ್ದರೂ ನಮ್ಮ ಬಸ್‌ ನ ಮೇಲೆಯೂ ಮರ ಬಿದ್ದು ಬಿಡುತ್ತಿತ್ತು’ ಎನ್ನುತ್ತಾರೆ ಬೈಂದೂರಿನ ವಿನಾಯಕ್‌. ಸೋಮವಾರ ರಾತ್ರಿ ಉಡುಪಿಗೆ ಚಾರ್ಮಾಡಿ ಮೂಲಕ ಬಸ್‌ ಚಲಾಯಿಸಿದ KSRTC ಬಸ್‌ ಚಾಲಕ ವಿನಾಯಕ್‌ರ ಅನುಭವ ಇದು.

‘ನಾವು ರಾತ್ರಿ 8ಕ್ಕೆ ಬೆಂಗಳೂರಿನಿಂದ ಹೊರಟೆವು. ಮಳೆ ಸುರಿಯುತ್ತಿದ್ದ ಸಮಾಚಾರ ಕೇಳಿ ಚಾರ್ಮಾಡಿ ಬ್ಲಾಕ್‌ ಆಗಬಹುದೇ ಎಂಬ ಆತಂಕ ಕಾಡತೊಡಗಿತು. ವಿಚಾರಿಸಿದಾಗ ಯಾವುದೇ ಅಡೆತಡೆ ಇಲ್ಲ ಎಂಬ ಮಾಹಿತಿ ಸಿಕ್ಕಿತು. ಹಾಸನದಲ್ಲಿ ಕೇಳಿದಾಗ ಸ್ವಲ್ಪ ಬ್ಲಾಕ್‌ ಇದೆ. ನಾವು ಬಂದೆವು. ನೀವೂ ಹೋಗಬಹುದು ಎಂದು ಎದುರಿನ ಬಸ್‌ ಚಾಲಕ ತಿಳಿಸಿದರು. ಸಮಾಧಾನವಾಯಿತು. ಅಣ್ಣಪ್ಪ ಗುಡಿಯಿಂದ ಮುಂದೆ ಬರುತ್ತಿದ್ದಂತೆ ಕೆಲವು ವಾಹನಗಳು ನಿಧಾನವಾಗಿ ಸಂಚರಿಸುವುದು ಕಂಡಿತು. ಇನ್ನೇನು ಕೊನೆಯ ತಿರುವಿಗೆ ಸ್ವಲ್ಪ ದೂರ ಇದೆ ಎನ್ನುವಾಗ ಸಂಚಾರವೇ ಸ್ಥಗಿತಗೊಂಡಿತ್ತು. ನಮ್ಮದೇ ಡಿಪೋದಿಂದ 10 ನಿಮಿಷ ಮೊದಲು ಹೊರಟಿದ್ದ ಬಸ್‌ ಮಣ್ಣು ಕುಸಿತ ಸ್ಥಳದಿಂದ ಮುಂದಕ್ಕೆ ದಾಟಿತ್ತು. ಕೆಲವೇ ಹೊತ್ತಿನಲ್ಲಿ ನಮ್ಮ ಹಿಂದೆ ನೂರಾರು ವಾಹನಗಳ ಸಾಲಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ವಿನಾಯಕ್‌.


ಹತ್ತು ತಾಸು ವಿಳಂಬ

ಚಾರ್ಮಾಡಿಯಲ್ಲಿ ರಸ್ತೆ ತಡೆಯುಂಟಾದ ಹಿನ್ನೆಲೆಯಲ್ಲಿ ಉಡುಪಿ ಮತ್ತು ಕುಂದಾಪುರಕ್ಕೆ ಜೂ. 12ರ ಬೆಳಗ್ಗೆ ಬರಬೇಕಾಗಿದ್ದ ಬಸ್‌ ಗಳು ಸುಮಾರು 10 ತಾಸು ವಿಳಂಬವಾಗಿ ಉಡುಪಿ ತಲುಪಿದವು. ‘ಕೊಟ್ಟಿಗೆಹಾರ ತಲುಪುವಾಗಲೇ ಚಾರ್ಮಾಡಿಯಲ್ಲಿ ಮಣ್ಣು ಕುಸಿತ, ರಸ್ತೆ ಬ್ಲಾಕ್‌ ಆಗಿರುವ ಮಾಹಿತಿ ಕೆಲವು ಚಾಲಕರಿಗೆ ಸಿಕ್ಕಿತ್ತು. ಹಾಗಾಗಿ ಅವರು ಕೊಟ್ಟಿಗೆಹಾರ- ಕಳಸ- ಬಜಗೋಳಿ ಮಾರ್ಗವಾಗಿ ಉಡುಪಿಗೆ ಆಗಮಿಸಿದರು. ನಿನ್ನೆ ಸಂಜೆ 8 ಗಂಟೆಗೆ ಉಡುಪಿಯಿಂದ ಬೆಂಗಳೂರಿಗೆ ಹೊರಟಿದ್ದ ಒಂದು ಬಸ್‌ನ ಪ್ರಯಾಣವನ್ನು ರದ್ದುಗೊಳಿಸಿದೆವು. ಚಿಕ್ಕಮಗಳೂರು ಕಡೆಗೆ ತೆರಳುವವರಿಗೆ ಅನುಕೂಲವಾಗಲು ಮತ್ತು 1.30 ತಾಸಿನ ಪ್ರಯಾಣ ಕಡಿಮೆ ಮಾಡುವುದಕ್ಕಾಗಿ ಮಡಿಕೇರಿಯ ಬದಲು ಚಾರ್ಮಾಡಿಯನ್ನು ಬಳಸುತ್ತೇವೆ. ಶಿರಾಡಿ ರಸ್ತೆ ತೆರವಾದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ’ ಎಂದು ಉಡುಪಿ ಖಾಸಗ್‌ ಬಸ್‌ ಗಳ ಏಜೆಂಟರೊಬ್ಬರು ತಿಳಿಸಿದರು.

ಜೂ. 12ರಂದು ಧರ್ಮಸ್ಥಳ- ಚಾರ್ಮಾಡಿ ಮಾರ್ಗವಾಗಿ ಬೆಂಗಳೂರಿಗೆ ಹೋಗಬೇಕಾಗಿದ್ದ ಒಂದು KSRTC ಗ್ರಾಮಾಂತರ ಸಾರಿಗೆ ಹಾಗೂ ಒಂದು ರಾಜಹಂಸ ಬಸ್‌ ನ ಪ್ರಯಾಣವನ್ನು ರದ್ದುಪಡಿಸಲಾಯಿತು. ಉಳಿದ ಬಸ್‌ ಗಳು ಮಡಿಕೇರಿ ಮೂಲಕ ಬೆಂಗಳೂರಿಗೆ ಸಂಚರಿಸಿವೆ.

ಕಣ್ಣೆದುರೇ ಮರ ಉರುಳಿಬಿತ್ತು
ಮಳೆ ಒಂದು ನಿಮಿಷವೂ ಬಿಡುವು ನೀಡಿರಲಿಲ್ಲ. 2.30ಕ್ಕೆ ನಾವು ಚಾರ್ಮಾಡಿಯ ಅಣ್ಣಪ್ಪ ಗುಡಿಗಿಂತ ಮುಂದೆ ಬಂದಿದ್ದೆವು. ಅಲ್ಲಿನ ಸ್ಥಿತಿ ಎನಿಸುವಾಗ ಈಗಲೂ ಆತಂಕವಾಗುತ್ತದೆ. ನಾನು ಬಸ್‌ ನಿಲ್ಲಿಸಿ ಚಕ್ರಗಳ ಗಾಳಿ ಚೆಕ್‌ ಮಾಡಲು ಕೆಳಗಿಳಿದೆ. ಅಷ್ಟರಲ್ಲೇ ನಮ್ಮ ಹಿಂದಿದ್ದ ಓಮ್ನಿ ಕಾರು ಮೇಲೆ ಮರವೊಂದು ಉರುಳಿಬಿತ್ತು. ಆತಂಕದಿಂದ ಬಸ್‌ ನೊಳಗೆ ಓಡಿ ಬಂದೆ ಎಂದರು ವಿನಾಯಕ್‌.

ಬಸ್ಸಿನೊಳಗಿದ್ದ ಯಾರೂ ನಿದ್ರಿಸಲಿಲ್ಲ
ನಮ್ಮ ಬಸ್‌ ನಲ್ಲಿ 19 ಮಂದಿ ಇದ್ದರು. ಒಬ್ಬಳೇ ಮಹಿಳೆ. ಅವರೂ ಗಾಬರಿಗೊಂಡಿದ್ದರು. ನಾನು, ಕಂಡಕ್ಟರ್‌ ದಯಾನಂದ್‌ ಸೇರಿದಂತೆ ಎಲ್ಲರೂ ಕಣ್ರೆಪ್ಪೆ ಮುಚ್ಚದೆ ಬೆಳಕು ಹರಿಯುವುದನ್ನೇ ಕಾಯುತ್ತಿದ್ದೆವು. ಬೆಳಗ್ಗೆ 10ರ ಸುಮಾರಿಗೆ ಅಲ್ಲಿಯೇ ಸಿಕ್ಕ ಮಾವಿನ ಹಣ್ಣುಗಳನ್ನು ತಿಂದೆವು. ಇತರ ವಾಹನಗಳಲ್ಲಿದ್ದ ಮಹಿಳೆ, ಮಕ್ಕಳಿಗೆ ಬಿಸ್ಕತ್‌ ನೀಡಲಾಯಿತು. ಮಧ್ಯಾಹ್ನ ಊಟ ಕೊಟ್ಟರು. ಕೊನೆಗೂ ಸಮಸ್ಯೆ ಕಳೆದು ವಾಹನ ಸಂಚಾರ ಆರಂಭವಾದಾಗ ಸುಮಾರು 2.45. ಅಲ್ಲಿಂದ ಹೊರಟು ಉಡುಪಿಗೆ ಬಂದೆವು. ಮರಗಳು ಬೀಳುವುದು, ಮಣ್ಣಿನೊಳಗಿಂದ ನೀರು ಒಸರುತ್ತಿದ್ದುದು ಎಲ್ಲವೂ ಆ ಕತ್ತಲೆಯಲ್ಲಷ್ಟೇ ಅಲ್ಲ, ಈಗ ನೆನಪಿಸಿಕೊಂಡರೂ ಭಯವಾಗುತ್ತದೆ. ಸುರಕ್ಷಿತವಾಗಿ ಉಡುಪಿಗೆ ತಲುಪಿದಾಗ ಆದ ಖುಷಿ ಅಷ್ಟಿಷ್ಟಲ್ಲ ಎನ್ನಲು ಮರೆಯಲಿಲ್ಲ ವಿನಾಯಕ್‌.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.