ಟಾಯ್ಲೆಟ್ ಪಿಟ್ ನಿರ್ಮಾಣ: ಸ್ಥಳೀಯರಲ್ಲಿ ಆತಂಕ!
Team Udayavani, Oct 15, 2019, 5:24 AM IST
ಉಡುಪಿ: ಉಡುಪಿ ಸಿಟಿ ಬಸ್ಸು ತಂಗುದಾಣದ ಸಮೀಪ ನಿರ್ಮಾಣವಾಗುತ್ತಿರುವ ನರ್ಮ್ ಬಸ್ಸು ತಂಗುದಾಣದಲ್ಲಿ ಈಗ ಟಾಯ್ಲೆಟ್ ಪಿಟ್ ನಿರ್ಮಾಣವಾಗುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ತ್ಯಾಜ್ಯ ನೀರು ಸಮೀಪದಲ್ಲಿರುವ ಮನೆ, ಅಂಗಡಿಗಳಿಗೆ ಹರಡಬಹುದು ಎಂಬುವುದು ಇಲ್ಲಿನವರ ಅಭಿಪ್ರಾಯ.
ಅಕ್ಟೋಬರ್ 2017ರಲ್ಲಿ ಈ ಕಟ್ಟಡ ಕಾಮಗಾರಿ ಆರಂಭವಾಗಿದ್ದು, ಇದೀಗ ಅಂತಿಮ ಹಂತದಲ್ಲಿದೆ. ಕೇವಲ ಬಸ್ಸು ತಂಗುದಾಣ ಮಾತ್ರವಲ್ಲದೆ ವಾಣಿಜ್ಯ ಬಳಕೆಗೆ ಉಪಯೋಗವಾಗುವಂತೆ ಮಾಡುವ ಮೂಲಕ ಆದಾಯ ಗಳಿಸುವ ಉದ್ದೇಶವನ್ನೂ ಕೆಎಸ್ಸಾರ್ಟಿಸಿ ಹೊಂದಿದೆ.
ಯಾವುದೇ ಹಾನಿಯಿಲ್ಲ
ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುವಂತೆ ನಗರಸಭೆಯ ಅನುಮತಿ ಪಡೆದು ನಗರಸಭೆಯ ಮಾರ್ಗಸೂಚಿಯಂತೆಯೇ ಈ ಟಾಯ್ಲೆಟ್ ಪಿಟ್ಗಳನ್ನು ರಚಿಸಲಾಗಿದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ವೈಜ್ಞಾನಿಕವಾಗಿ ನಿರ್ಮಾಣ
ಕೆಎಸ್ಸಾರ್ಟಿಸಿ ನರ್ಮ್ ಬಸ್ ತಂಗುದಾಣದಲ್ಲಿ ನಗರಸಭೆಯ ಅನುಮತಿ ಪಡೆದೇ ಶೌಚಗುಂಡಿ ನಿರ್ಮಾಣ ಮಾಡಲಾಗುತ್ತಿದೆ. ನಗರಸಭೆಯ ಅನುಸೂಚಿಯಂತೆ ವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿದೆ. ಇದರಿಂದಾಗಿ ಪರಿಸರಕ್ಕೆ ಯಾವುದೇ ಹಾನಿಯುಂಟಾಗುವುದಿಲ್ಲ. -ರಾಘವೇಂದ್ರ,ಪರಿಸರ ಅಭಿಯಂತರರು. ಉಡುಪಿ ನಗರಸಭೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ