ಕುಸಿಯುವ ಭೀತಿಯಲ್ಲಿ ಜಿಲ್ಲಾ ಮುಖ್ಯ ರಸ್ತೆ, ಕಿರುಸೇತುವೆಗಳು
Team Udayavani, May 25, 2018, 6:00 AM IST
ಕೋಟ: ಬ್ರಹ್ಮಾವರ-ಜನ್ನಾಡಿ ಹಾಗೂ ಕೋಟ-ಗೋಳಿಯಂಗಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸಮುದ್ರದ ತಡೆಗೋಡೆಗೆ ಬಂಡೆಗಳನ್ನು ಸಾಗಿಸುವ ಲಾರಿಗಳು ನಿಗದಿತ ಪ್ರಮಾಣಕ್ಕಿಂತ ನಾಲ್ಕೈದು ಪಟ್ಟು ಅಧಿಕ ಭಾರವನ್ನು ಹೊತ್ತು ವರ್ಷವಿಡೀ ಸಂಚಾರಿಸುತ್ತಿದೆ. ಇದರ ಪರಿಣಾಮ ಇಲ್ಲಿನ ರಸ್ತೆ, ಕಿರು ಸೇತುವೆಗಳು ಅಪಾಯದಲ್ಲಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಇವು ಗಳಿಂದಾಗಿ ಹಾನಿ ಪ್ರಮಾಣ ಹೆಚ್ಚುತ್ತಿದ್ದು ಕಳೆದ ವರ್ಷ ಎರಡು ಕಿರು ಸೇತುವೆ, ರಸ್ತೆ ಕುಸಿತಗೊಂಡಿದೆ. ಈ ಬಾರಿ ಕೂಡ ಸಮಸ್ಯೆ ಮುಂದುವರಿಯುವ ಲಕ್ಷಣವಿದೆ.
ನಿಗದಿತ ಪ್ರಮಾಣಕ್ಕಿಂತ
ನಾಲ್ಕೈದು ಪಟ್ಟು ಅಧಿಕ
ಈ ರಸ್ತೆಯಲ್ಲಿ ಸರಕು ಸಹಿತ 20 ಮೆಟ್ರಿಕ್ ಟನ್ಗಿಂತ ಅಧಿಕ ಭಾರದ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ ವೆಂದು ಲೋಕೋಪಯೋಗಿ ಇಲಾಖೆ ನಿರ್ಬಂಧಿಸಿದೆ. ಜತೆಗೆ ಬ್ರಹ್ಮಾವರ, ಶಿರಿಯಾರ ಮುಂತಾದ ಕಡೆಗಳಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಆದರೆ ಇಲಾಖೆಯ ಆದೇಶವನ್ನು ಧಿಕ್ಕರಿಸಿ 40ರಿಂದ 80 ಟನ್ ಭಾರದ ಲಾರಿಗಳು ಇಲ್ಲಿ ಓಡಾಟ ನಡೆಸುತ್ತವೆ.
ರಸ್ತೆ, ಕಿರುಸೇತುವೆ ಕುಸಿತ
ಅಧಿಕ ಭಾರದ ವಾಹನ ಓಡಾಟದಿಂದ ಕಳೆದ ವರ್ಷ ಜೂ.8ರಂದು ಕೋಟ ಮೂರುಕೈ ಸಮೀಪ ಬೆಟ್ಲಕ್ಕಿ ಹಡೋಲಿನಲ್ಲಿ ಕಿರು ಸೇತುವೆಯೊಂದು ಕುಸಿದು ಎರಡು ದಿನ ಸಂಪರ್ಕ ವ್ಯತ್ಯಯವಾಗಿತ್ತು ಹಾಗೂ ಜು.21ರಂದು ಉಪ್ಲಾಡಿಯಲ್ಲಿ ರಸ್ತೆ ಕುಸಿದು ಕಂದಕ ಸೃಷ್ಟಿಯಾಗಿ ಸಂಚಾರ ಸ್ಥಗಿತಗೊಂಡಿತ್ತು. ಪುನಃ ಅ.7ರಂದು ಬೆಟ್ಲಕ್ಕಿಯಲ್ಲಿ ಮತ್ತೂಂದು ಕಿರು ಸೇತುವೆ ಕುಸಿದು ಸಮಸ್ಯೆಯಾಗಿತ್ತು.
ಈ ಬಾರಿ ಮಳೆಗಾಲದಲ್ಲಿ ಹಲವು ಕಿರು ಸೇತುವೆ ಕುಸಿಯುವ ಮುನ್ಸೂಚನೆ ಕಂಡುಬಂದಿದೆ ಹಾಗೂ ಬನ್ನಾಡಿ, ಉಪ್ಲಾಡಿ, ಹಡೋಲು ಮುಂತಾದ ಕಡೆ ರಸ್ತೆ ಕುಸಿಯುತ್ತಿರುವುದು ಕಂಡು ಬಂದಿದೆ. ಇಲ್ಲಿ ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಬಸ್ಸಿನಲ್ಲಿ ಪ್ರತಿ ನಿತ್ಯ ಸಂಚಾರಿಸುತ್ತಾರೆ. ಹೀಗಾಗಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ಖಂಡಿತ.
ಗ್ರಾಮಸಭೆಯ ನಿರ್ಣಯಕ್ಕೂ ಬೆಲೆಯಿಲ್ಲ
ಈ ಕುರಿತು ಕ್ರಮಕೈಗೊಳ್ಳುವಂತೆ ವಡ್ಡರ್ಸೆ ಗ್ರಾಮಸಭೆಯಲ್ಲಿ ನಿರ್ಣಯವೊಂದನ್ನುಕೈಗೊಂಡು ಜಿಲ್ಲಾಡಳಿತಕ್ಕೆ ಕಳುಹಿಸಿಸಲಾಗಿತ್ತು ಹಾಗೂ ಸಾರ್ವಜನಿಕರು ಕೂಡ ಆರ್.ಟಿ.ಒ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಪರಿಹಾರ ಶೂನ್ಯವಾಗಿದೆ.
ಮನವಿ ಪುರಸ್ಕರಿಸಿಲ್ಲ
ಕ್ರಮಕೈಗೊಳ್ಳುವಂತೆ ಡಿಸಿಗೆ ಹಾಗೂ ಪೋನ್-ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ ಮನವಿ ಮಾಡಿದ್ದೆ. ಪಿಡಬ್ಲೂಡಿ.ಇಲಾಖೆಗೂ ತಿಳಿಸಿದ್ದೆ. ಆದರೆ ಸಾರ್ವಜನಿಕರನ್ನು ಅಣಕಿಸುವ ರೀತಿಯಲ್ಲಿ ಅಕ್ರಮ ಮುಂದುವರಿದಿರುವುದು ತುಂಬಾ ಬೇಸರ ತಂದಿದೆ.
– ಸತೀಶ್ ಶೆಟ್ಟಿ ಯಡ್ತಾಡಿ, ಸ್ಥಳೀಯರು
ತಪಾಸಣೆ ಸಾಧ್ಯವಾಗುತ್ತಿಲ್ಲ
ಈ ಕುರಿತು ದೂರುಗಳು ಬಂದಿದೆ. ಆದರೆ ಇಲಾಖೆಯಲ್ಲಿನ ಸಿಬಂದಿಗಳ ಕೊರತೆಯಿಂದ ಪ್ರತಿ ನಿತ್ಯ ತಪಾಸಣೆ ನಡೆಸಲು ಸಾಧ್ಯವಾಗುತ್ತಿಲ್ಲ ಹಾಗೂ ತಪಾಸಣೆ ನಡೆಸಿದರೆ ವಾಹನಗಳ ಓಡಾಟ ಸ್ಥಗಿತಗೊಳ್ಳುತ್ತದೆ. ಈ ಕುರಿತು ಸಮರ್ಪಕವಾಗಿ ಕ್ರಮಕೈಗೊಳ್ಳಲು ಪ್ರಯತ್ನಿಸಲಾಗುವುದು.
– ವರ್ಣೇಕರ್,
ಉಪ ಸಾರಿಗೆ ಆಯುಕ್ತರು, ಆರ್.ಟಿ.ಒ. ಉಡುಪಿ
– ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು
ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ
LS Polls: ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳಿಂದ ಮತಗಟ್ಟೆಯಲ್ಲಿ ಮೊದಲ ಮತದಾನ
Tollywood: ಜೂ.ಎನ್ಟಿಆರ್ ʼದೇವರʼ ಚಿತ್ರತಂಡದ ಮೇಲೆ ಜೇನುನೊಣ ದಾಳಿ; ಕೆಲವರಿಗೆ ಗಾಯ
Lok Sabha Election: ರಾಜ್ಯದಲ್ಲಿ 2ನೇ ಹಂತದ ಮತದಾನ ಆರಂಭ… ಕೆಲವೆಡೆ ಮತಯಂತ್ರದಲ್ಲಿ ದೋಷ