Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು
Team Udayavani, May 7, 2024, 12:47 AM IST
ಕುಂದಾಪುರ: ವಡೇರಹೋಬಳಿ ಗ್ರಾಮದ ಶ್ರೀ ಯಕ್ಷೇಶ್ವರಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ, ಕಾಣಿಕೆ ಹುಂಡಿಯಲ್ಲಿದ್ದ 15 ಸಾವಿರ ರೂ. ನಗದು ಸಹಿತ ಒಟ್ಟಾರೆ 30 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಮೇ 2ರ ಬೆಳಗ್ಗೆ 10ರಿಂದ ಮೇ 2ರ ಅಪರಾಹ್ನ 3 ಗಂಟೆಯ ಅವಧಿಯಲ್ಲಿ ಸಂಭವಿಸಿದೆ.
ಬೆಳಗ್ಗೆ 10ಕ್ಕೆ ದೇವಸ್ಥಾನದ ಅರ್ಚಕರು ಪೂಜೆ ಮುಗಿಸಿ, ಚಿಲಕ ಹಾಕಿ ತೆರಳಿರುತ್ತಾರೆ. ಅದೇ ದಿನ ಅಪರಾಹ್ನ 3 ಗಂಟೆ ಸುಮಾರಿಗೆ ದೇವಸ್ಥಾನದ ಕಾರ್ಯದರ್ಶಿ ಸಂತೋಷ್ ಬಂದು ನೋಡಿದಾಗ ಕಾಣಿಕೆ ಹುಂಡಿ ಕಳವಾಗಿರುವುದು ತಿಳಿದುಬಂದಿದೆ.
ಕೂಡಲೇ ಅವರು ದೇವಸ್ಥಾನದ ಇತರರಿಗೆ ತಿಳಿಸಿದ್ದು, ಆ ಬಳಿಕ ನೋಡಿದಾಗ 2 ಕೆ.ಜಿ. ತೂಕದ ಅಂದಾಜು 5 ಸಾ.ರೂ. ಮೌಲ್ಯದ ತಾಮ್ರದ ಕೊಡಪಾನ, 6 ಕೆ.ಜಿ. ತೂಕದ ಅಂದಾಜು 10 ಸಾ. ರೂ. ಮೌಲ್ಯದ ಹಿತ್ತಾಳೆ ದೀಪ, 15 ಸಾ.ರೂ. ನಗದು ಸಹಿತ 30 ಸಾವಿರ ರೂ. ಮೌಲ್ಯದ ಸೊತ್ತುಗಳು ಕಳವಾಗಿರುವುದು ತಿಳಿದುಬಂತು.
ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಮಂಜುನಾಥ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppunda: ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ್ಯು
Kundapura ಎಸ್ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್
ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ
Udupi ಗ್ಯಾಂಗ್ವಾರ್ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ
Byndoor 50 ಕಡೆ ಬಸ್, ಲಾರಿ ಚಾಸಿಸ್ ಬಳಸಿ ಕಾಲುಸಂಕ! ಆರಂಭಿಕ ಹಂತದಲ್ಲಿ 3 ಕಡೆ ನಿರ್ಮಾಣ
MUST WATCH
ಹೊಸ ಸೇರ್ಪಡೆ
Uppunda: ಆಕಸ್ಮಿಕವಾಗಿ ನದಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ್ಯು
ಅಪರಾಧ ಪ್ರಕರಣ ಬೇಧಿಸುವಲ್ಲಿ ಫಾರೆನ್ಸಿಕ್ ಸೈನ್ಸ್ ಪಾತ್ರ ಪ್ರಮುಖ: ಡಾ.ವಿನೋದ್ ನಾಯಕ
Shivamogga: ಸಮಾಜ ಕಲ್ಯಾಣ ಇಲಾಖೆ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಆರಗ
Road Mishap: ಅಮೆರಿಕದಲ್ಲಿ ರಸ್ತೆ ಅಪಘಾತ; ತೆಲಂಗಾಣ ಮೂಲದ ಯುವತಿ ಸ್ಥಳದಲ್ಲೇ ಸಾವು
Panaji: ಯಾವುದೇ ಆಂಗ್ಲ ಪ್ರಾಥಮಿಕ ಶಾಲೆಗೆ ಅವಕಾಶ ನೀಡಬಾರದು… ಕೊಂಕಣಿ ಭಾಷಾ ಮಂಡಳಿ ಆಗ್ರಹ