ಗ್ರಾಮೀಣ ಭಾಗಗಳಲ್ಲಿ  ದೀಪಾವಳಿ, ಗೋ ಪೂಜೆ


Team Udayavani, Nov 6, 2018, 10:13 AM IST

0511side2-deepavali.jpg

ಸಿದ್ದಾಪುರ: ದೀಪಾವಳಿ ಎಂದರೆ ಕತ್ತಲನ್ನು ಓಡಿಸಿ ಬೆಳಕಿನಡೆಗೆ ಕೊಂಡೊಯ್ಯುವ ಹಬ್ಬವಾದರೇ ರೈತರಿಗೆ ಹೊಸ ಫಸಲನ್ನು ಮನೆಗೆ ತಂದು ಸಂಭ್ರಮಿಸಿ ಖುಷಿ ಪಡುವ ಹಬ್ಬ. ಹೊಸ ಫಸಲು ಅಭಿವೃದ್ಧಿಯ ಸಂಕೇತ. ದೀಪಾವಳಿ ರೈತರಿಗೆ ವರುಷದ ಪ್ರಥಮ ಹಬ್ಬವಾಗಿದೆ. ಗದ್ದೆಯಲ್ಲಿ ಭತ್ತದ ತೆನೆ ತುಂಬಿ ಕೊಯ್ಲಿಗೆ ಸಿದ್ಧವಾಗಿರುವ ತೆನೆ ಕೊಯ್ದು  ಮನೆಯ ಅಂಗಳದಲ್ಲಿ ಭತ್ತದ ತಿರಿಯನ್ನು ಕಟ್ಟಿ, ತಿರಿಗೆ ಹಾಗೂ ಭತ್ತದ ಗದ್ಧೆಗೆ ಪೂಜೆ ಮಾಡಿ ಬಲೀಂದ್ರನನ್ನು ಕರೆಯುವ ಮೂಲಕ ದೀಪಾಳಿಯನ್ನು ಆಚರಿಸುತ್ತಾರೆ.

ಹಬ್ಬದ ಸಡಗರ
ಇಂದಿನ ಆಧುನಿಕ ಯುಗದ ಭರಾಟೆಯಲ್ಲಿ ದೀಪಾವಳಿ ಹಿಂದಿನ ಸಂಭ್ರಮ ಕಳೆದುಕೊಂಡಿರುವುದೇನೋ ನಿಜ. ಆದರೂ ಕೃಷಿ ಕುಟುಂಬ ಸಾಂಪ್ರದಾಯವೆಂಬಂತೆ ಬಲೀಂದ್ರ ಪೂಜೆ, ಧನಲಕ್ಷ್ಮಿ ಪೂಜೆ, ಗೋ ಪೂಜೆ ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಮನೆ ಮನೆಗಳಲ್ಲಿ ದೀಪಾಲಂಕಾರ, ಸಿಹಿತಿಂಡಿ ತಯಾರಿ, ವಿಶೇಷ ಪೂಜೆ, ಹೊಸ ಬಟ್ಟೆ ಧರಿಸಿ ಸಂಭ್ರಮಿಸುವುದು ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಆಚರಿಸಿಕೊಂಡು ಬಂದಿರುವ ಪದ್ಧತಿ ರೂಡಿಯಲ್ಲಿದೆ. ದೂರ ದೂರದ ಪ್ರದೇಶಗಳಲ್ಲಿ ಹಂಚಿ ಹೋಗಿರುವ ಕೃಷಿ ಕುಟುಂಬ ಸದಸ್ಯರು ದೀಪಾವಳಿಯಂದು ಊರಿಗೆ ಬಂದು ಹಬ್ಬ ಆಚರಿಸಿ, ಸಂಭ್ರಮಿಸುತ್ತಾರೆ.

ಬಲೀಂದ್ರ ಪೂಜೆ
ಮೂಲ ಸಂಸ್ಕೃತಿಯಿಂದ ಆಚರಣೆ ಮಾಡಿಕೊಂಡು ಬಂದಿರುವ ಕೃಷಿಕರು ರಾತ್ರಿ ಸಮಯದಲ್ಲಿ ಭತ್ತದ ಗದ್ದೆಯಲ್ಲಿ ನಾರು ಕೋಲಿಗೆ ಬಟ್ಟೆ ಸುತ್ತಿ ನೆಣೆಕೋಲು ಮಾಡಿಕೊಂಡು ದೀಪ ಹಚ್ಚುತ್ತಾರೆ. ಜತೆಯಲ್ಲಿ ವಿವಿಧ ಜಾತಿಯ ಹೂ ಹಾಗೂ (ಹೊಸ ಚಿಗುರು) ಎಳೆಯ ಎಲೆಗಳನ್ನು ಸಂಗ್ರಹಿಸಿ ಅದನ್ನು ಕೊಚ್ಚಿ, ಪೂಜೆಗೆ ಸಿದ್ಧಪಡಿಸಿಕೊಳ್ಳುತ್ತಾರೆ. ಪ್ರತಿ ನೆಣೆಕೋಲು ಮುಂದೆ ಬಾಳೆ ಎಲೆ ಇಟ್ಟು, ತಾವು ತಯಾರಿಸಿದ ವಿವಿಧ ಬಗ್ಗೆಗಳ ತಿಂಡಿ(ಹಿಟ್ಟು) ಬಡಿಸಿ ಸಂಗ್ರಹಿಸಿದ ಹೂ ಹಾಗೂ ಎಲೆಗಳನ್ನು ಹಾಕಿ ಬಲೀಂದ್ರ ದೇವರನ್ನು ಹೊಗಳಿ ಕರೆಯುತ್ತಾರೆ. ಪೂಜೆಗಾಗಿ ತೆಂಗಿನ ಮರದ ಗರಿಗಳಿಂದ ಸೂಡಿ ಮಾಡಿಕೊಂಡು (ದಾರಿ ದೀಪಕ್ಕಾಗಿ), ಆ ಬೆಂಕಿಯಿಂದ ಪ್ರತಿ ನೆಣೆ ಕೋಲಿಗೆ ದೀಪ ಹಚ್ಚುತ್ತಾರೆ. ಹೊಸ ಬೆಳೆಯಲ್ಲಿ ತಯಾರಿಸಿದ ವಿವಿಧ ಖಾದ್ಯದ ಹಿಟ್ಟನ್ನು ಗದ್ದೆಗೆ ಬಡಿಸಿ ಗ್ರಾಮ್ಯ ಭಾಷೆಯಲ್ಲಿ ಹೊಗಳಿಕೆಯಿಂದ ಬಲೀಂದ್ರ ದೇವರನ್ನು ಸ್ಮರಿಸಿ ಪ್ರಾರ್ಥಿಸುವ ದೀಪಾವಳಿ ಆಚರಣೆಯ ಅನಾದಿಕಾಲದಿಂದಲೂ ರೂಢಿಯಲ್ಲಿದೆ. ಇದು ರೈತಾಪಿ ವರ್ಗಗಳ ಬಲೀಂದ್ರ ಪೂಜೆಯೊಂದಿಗೆ ದೀಪಾವಳಿ ಹಬ್ಬದ ಸಂಭ್ರಮ.

ತೈಲಾಂಭ್ಯಜನದೊಂದಿಗೆ ತಮ್ಮ ತನು ಮನಗಳು ಶುದ್ಧವಾಗಿ ರೈತರು ತಾವು ಬೆಳೆದ ಭತ್ತದ ರಾಶಿಗೆ ಹೂವನ್ನು ಹಾಕಿ ಪೂಜಿಸುವ ಮೂಲಕ ಕಾಯಕವೇ ಕೈಲಾಸವೆಂದು ಕೊಂಡು ದುಡಿಯುವ ರೈತ, ಹೊಲದಲ್ಲಿ ಬೆಳೆ ತುಂಬಲಿ ಎಂದು ಬಲೀಂದ್ರ ದೇವರ ಹೊಗಳಿಕೆಯಲ್ಲಿ ಪ್ರಾರ್ಥಿಸುತ್ತಾರೆ.

ಗೋ ಪೂಜೆ 
 ಸಮಾಜವನ್ನು ಬಲಿಷ್ಠಗೊಳಿಸುವ ಸಾವಯವ ಗೊಬ್ಬರಗಳನ್ನು ಕೃಷಿಗಾಗಿ ನೀಡುವ ಗೋ ಮಾತೆಯನ್ನು ಕೃಷಿಕರು ದೀಪಾಳಿಯ ಮರುದಿನ ಗೋ ಪೂಜೆ ಮಾಡುತ್ತಾರೆ. ದೀಪಾವಳಿ ಸಂಭ್ರಮಕ್ಕೆ ತಯಾರಿಸಿದ ತಿಂಡಿ ತಿನಿಸುಗಳನ್ನು ತಾವು ಸೇವಿಸುವ ಮುನ್ನ ಪ್ರಥಮವಾಗಿ ಗೋವಿಗೆ ತಿನ್ನಿಸುವ ಮೂಲಕ ಮುಂದಿನ ವರ್ಷದ ಕೃಷಿ ಕಾಯಕಕ್ಕೆ ಕಾಲಿಡುತ್ತಾರೆ.

 ಸತೀಶ ಆಚಾರ್‌ ಉಳ್ಳೂರು

ಟಾಪ್ ನ್ಯೂಸ್

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.