ಚಂಡೀಗಢದಲ್ಲಿ ಡಾ| ಹೆಗ್ಡೆಗೆ “ಸ್ಪೀಕ್’ ಗೌರವ
Team Udayavani, Mar 13, 2017, 1:09 PM IST
ಉಡುಪಿ: ಹೃದಯಕ್ಕೆ ಸಂಬಂಧಿಸಿ ಜಾಯಿಂಟ್ ರಿಪ್ಲೇಸೆ¾ಂಟ್ ಡಿವೈಸಸ್ ಮತ್ತು ಸಾಮಾನ್ಯ ಔಷಧಗಳ ದರ ಕಡಿಮೆ ಮಾಡಲು ಪ್ರಧಾನಮಂತ್ರಿ ಅವರಿಗೆ ಮನವಿ ಮಾಡಲಾಗಿದೆ. ಔಷಧಗಳ ಮೇಲೆ ಶೇ. 20ರಷ್ಟು ಲಾಭಕ್ಕೆ ಮಿತಿಗೊಳಿಸಲೂ ಮನವಿ ಮಾಡಲಾಗಿದೆ.
ಚಂಡೀಗಢದಲ್ಲಿ ನಡೆದ ಸೊಸೈಟಿ ಫಾರ್ ಪ್ರೊಮೋಶನ್ ಆಫ್ ಎತಿಕಲ್ ಆ್ಯಂಡ್ ಅಫೋರ್ಡೆಬಲ್ ಹೆಲ್ತ್ಕೇರ್ (ಸ್ಪೀಕ್) ಸಂಘಟನೆ ವಾರ್ಷಿಕ ಸಮಾರಂಭದಲ್ಲಿ ಈ ವಿಷಯ ಪ್ರಸ್ತಾವವಾಗಿದೆ.
ಈ ಸಮಾವೇಶದಲ್ಲಿ ಹೆಸರಾಂತ ವೈದ್ಯ ಡಾ| ಬಿ.ಎಂ. ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು. ಇಡೀ ಸಮಾಜವೇ ಭ್ರಷ್ಟವಾದ ಕಾರಣ ಅದರ ಒಂದು ಭಾಗವಾದ ವೈದ್ಯರೂ ಭ್ರಷ್ಟರಾಗಿದ್ದಾರೆ ಎಂದು ಡಾ| ಹೆಗ್ಡೆ ಹೇಳಿದರು.
ಉತ್ತಮ ವೈದ್ಯ ಹೇಗೆ ಪ್ರಿಸ್ಕ್ರೈಬ್ ಮಾಡಬೇಕೆಂದು ತಿಳಿದಿರಬೇಕು. ಅದಕ್ಕೂ ಮೇಲ್ದರ್ಜೆ ವೈದ್ಯ ಯಾವಾಗ ಪ್ರಿಸ್ಕ್ರೈಬ್ ಮಾಡಬೇಕೆಂದು ತಿಳಿದಿರಬೇಕು. ಯಾವಾಗ ಪ್ರಿಸ್ಕ್ರೈಬ್ ಮಾಡಬಾರದೆಂದು ತಿಳಿದಿರುತ್ತಾನೋ ಆತ ಶ್ರೇಷ್ಠ ವೈದ್ಯ ಎಂದು ಡಾ| ಹೆಗ್ಡೆ ಹೇಳಿದರು.
ಹೃದ್ರೋಗಕ್ಕೆ ಸಂಬಂಧಿಸಿದ ಸ್ಟಂಟ್ ವೆಚ್ಚ ಕಡಿತ, ಕೇವಲ ಅಂಕ ಗಳಿಕೆಯಲ್ಲದೆ, ಪ್ರೀತಿ, ಆರೋಗ್ಯಕರ ಜೀವನ ಶೈಲಿ, ಬೋಧನಾ ಪಠ್ಯಕ್ರಮ ಆಧರಿಸಿ ಎಂಬಿಬಿಎಸ್ ಪದವಿಗೆ ಪ್ರವೇಶ, ಪ್ರಾಥಮಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲು ಪ್ರಧಾನಿಗೆ ಸ್ಪೀಕ್ ಮನವಿ ಮಾಡಿದೆ ಎಂದು ಅಧ್ಯಕ್ಷ ಡಾ| ರಾಮ್ಕುಮಾರ್ ಹೇಳಿದರು. ದೇಶದ ನಾನಾ ಭಾಗಗಳಿಂದ ಹೆಸರಾಂತ ವೈದ್ಯರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್