ಬೇಸಗೆ ಬೇಗೆಯ ತೀರಿಸಲು ನವಯುಗ ಕಂಪೆನಿಗೆ ದುಂಬಾಲು


Team Udayavani, Apr 12, 2018, 6:25 AM IST

1104ra1e—2.jpg

ಪಡುಬಿದ್ರಿ: ಕಡು ಬೇಸಗೆ ಎದುರು ನಡ್ಸಾಲು ಗ್ರಾಮದಲ್ಲಿ ಈಗಾಗಲೇ ತಾರಕಕ್ಕೆ ಮುಟ್ಟಿರುವ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ತಮಗೆ ತಾತ್ಕಾಲಿಕವಾಗಿಯಾದರೂ ಪೈಪ್‌ ಲೈನ್‌ ರಿಪೇರಿ ಮಾಡಿಕೊಡುವಂತೆ ಬುಧವಾರ(ಎ. 11)ದಂದು ಪಡುಬಿದ್ರಿ ಗ್ರಾ. ಪಂ. ಪಿಡಿಒ ಪಂಚಾಕ್ಷರೀ ಸ್ವಾಮಿ ಕೆರಿಮಠ ನವಯುಗ ಅಧಿಕಾರಿ ಶಂಕರ್‌ ರಾವ್‌ ಅವರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ. 

ಈ ಕುರಿತು ಸ್ಪಂದಿಸಿದ ನವಯುಗ ಅಧಿಕಾರಿ ತಮ್ಮಲ್ಲಿ 10 ದಿನಗಳ ಕಾಲಾವಧಿಯನ್ನು ಬಯಸಿದರು. ಆದರೆ ಅದು ಸಾಧ್ಯವಿಲ್ಲವೆಂದಾಗ ಮುಂದಿನ ನಾಲ್ಕು ದಿನಗಳಲ್ಲಿ ತಮ್ಮ ಎಂಜಿನಿಯರ್‌ ಬರಲಿದ್ದಾರೆ. ಅವರ ಸಹಾಯ ಪಡೆದು ತುರ್ತು ರಿಪೇರಿ ಕಾಮಗಾರಿ ಮುಗಿಸಿ ನೀರು ಸರಬರಾಜಿಗೆ ಅನುವು ಮಾಡಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿರುವುದಾಗಿ ಪಿಡಿಒ “ಉದಯವಾಣಿ’ಗೆ ತಿಳಿಸಿದರು. 

42ಲಕ್ಷ ರೂ. ಗಳ ಅಂದಾಜು ಪಟ್ಟಿ ರವಾನೆ
ಅಬ್ಬೇಡಿಯ ಬೋರ್‌ವೆಲ್‌ ಒಂದರಿಂದ ಪಡುಬಿದ್ರಿ ಪೇಟೆ, ಆಸುಪಾಸಿನ ಮನೆಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನ ಪೈಪ್‌ಲೈನ್‌ ತೊಂದರೆಗೊಳಗಾಗಿ ಈ ಬಾರಿ ತತ್ತಾÌರವುಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಈ ನೀರಿನ ಪೈಪ್‌ಲೈನ್‌ಗಳೆಲ್ಲ ಒಡೆದು ಹೋಗಿವೆ. ಹಾಗಾಗಿ ಎರ್ಮಾಳು ಕಲ್ಸಂಕದಿಂದ ಪಡುಬಿದ್ರಿ ಬೀಡುವರೆಗಿನ ಪೈಪ್‌ಲೈನ್‌ ಮತ್ತು ತೆರೆದ ಬಾವಿಗಳಿಗೆ ಒಟ್ಟು 42ಲಕ್ಷ ರೂ. ಗಳ ಕಾಮಗಾರಿಗಳ ಅಂದಾಜುಪಟ್ಟಿಯನ್ನು ಪಂಚಾಯತ್‌ರಾಜ್‌ ಎಂಜಿನಿಯರ್‌ ಮೂಲಕ ತಯಾರಿಸಿ ಈಗಾಗಲೇ ನವಯುಗ ಕಂಪೆನಿಗೆ ನೀಡಲಾಗಿದೆ. ಅದನ್ನು ನವಯುಗ ಕಂಪೆನಿ ಅಧಿಕಾರಿಗಳು ಬೆಂಗಳೂರಿನಲ್ಲಿನ ತಮ್ಮ ಮೇಲಧಿಕಾರಿಗಳಿಗೆ ರವಾನಿಸಿದ್ದು ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ನವಯುಗ ಕಂಪೆನಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದರೊಂದಿಗೆ ಈ ಕಡು ಬೇಸಗೆಯಲ್ಲೂ ನೀರಿಲ್ಲದ ಕಾಲದಲ್ಲಿ ವೃಥಾ ಕಾಲಹರಣವನ್ನು ಗೈಯ್ಯಲಾಗುತ್ತಿದೆ. 

ಮುಹೂರ್ತ “ಫಿಕ್ಸ್‌’
ಆದರೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಬಯಸಿದ್ದಂತೆ ಮುಂದಿನ ನಾಲ್ಕು ದಿನಗಳೊಳಗಾಗಿ ಅಬ್ಬೇಡಿ – ಪಡುಬಿದ್ರಿ ಪೇಟೆಯ ಪೈಪ್‌ ಲೈನ್‌ ದುರಸ್ತಿ ಕಾಮಗಾರಿಗೀಗ ಮುಹೂರ್ತ “ಫಿಕ್ಸ್‌’ ಮಾಡಲಾಗಿದೆ. ಈ ತುರ್ತು ಕಾಮಗಾರಿ ಪೂರ್ಣಗೊಂಡಲ್ಲಿ ಪಡುಬಿದ್ರಿ ಜನತೆಗೆ ಕುಡಿಯಲು ನೀರು ಲಭ್ಯವಾಗಲಿದೆ. 

ತಾನು ಇದನ್ನು  ಎದುರು ನೋಡುತ್ತಿರುವುದಾಗಿಯೂ ಮುಂದೆ ಇದಕ್ಕೂ ನವಯುಗ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಉಡುಪಿ ಜಿಲ್ಲಾಧಿಕಾರಿಗಳಿಗೆ ತಾನು ವರದಿ ಮಾಡುವುದಾಗಿಯೂ ಪಿಡಿಒ ಪಂಚಾಕ್ಷರೀ ಸ್ವಾಮಿ ಕೆರಿಮಠ ಹೇಳಿದ್ದಾರೆ. 

ನಷ್ಟ ಭರಿಸಬೇಕೆಂಬ ನಿಯಮಾವಳಿ
ಹೆದ್ದಾರಿ ಕಾಮಗಾರಿಯ ವೇಳೆ ಯಾವುದೇ ಪಂಚಾಯತ್‌ ನಷ್ಟಗಳನ್ನು ಗುತ್ತಿಗೆದಾರ ಕಂಪೆನಿ ಭರಿಸಿಕೊಡಬೇಕೆಂಬ ನಿಯಮಾವಳಿಯನ್ನು ಗುತ್ತಿಗೆಯ ಆದೇಶ ಪತ್ರದಲ್ಲಿ ನಮೂದಿಸಲಾಗಿರುತ್ತದೆ. ಆದ್ದರಿಂದ ಪಿಡಿಒ ಮಾತುಕತೆಯ ವೇಳೆ ಮೇ ತಿಂಗಳಾಂತ್ಯದಲ್ಲಿ ಪಡುಬಿದ್ರಿಯ ಹೆದ್ದಾರಿ ಕಾಮಗಾರಿ ಮುಗಿದು ಸರ್ವೀಸ್‌ ರಸ್ತೆ ಕಾಮಗಾರಿಯು ಜೂನ್‌, ಜುಲೈ ತಿಂಗಳಲ್ಲಿ ಮುಗಿಯಲಿದ್ದು , ಆ ವೇಳೆಯಲ್ಲೇ ಪಡುಬಿದ್ರಿ ಪಂಚಾಯತ್‌ ನೀರಿನ ಪೈಪ್‌ಲೈನ್‌ ಮತ್ತು ತೆರದ ಬಾವಿಗಳನ್ನು ತಾವು ಪೂರೈಸಲಿರುವುದಾಗಿ ನವಯುಗ ಅಧಿಕಾರಿ ಶಂಕರ ರಾವ್‌ ತಿಳಿಸಿದ್ದಾರೆ. 

– ಆರಾಮ

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.