ದುಗ್ಗೊಟ್ಟು ಡಂಪಿಂಗ್‌ ಯಾರ್ಡ್‌, ತ್ಯಾಜ್ಯ ಭೂ ಭರ್ತಿ!

ಸ್ಥಳೀಯಾಡಳಿತ ಹೇಳುವುದೊಂದು, ಇಲ್ಲಿ ಆಗುತ್ತಿರುವುದು ಇನ್ನೊಂದು

Team Udayavani, Dec 22, 2022, 5:45 AM IST

ದುಗ್ಗೊಟ್ಟು ಡಂಪಿಂಗ್‌ ಯಾರ್ಡ್‌, ತ್ಯಾಜ್ಯ ಭೂ ಭರ್ತಿ!

ಕಾರ್ಕಳ: ಕಸ ನಿರ್ವಹಣೆ ಜವಾಬ್ದಾರಿಯನ್ನು ಆಡಳಿತ ಸಂಸ್ಥೆ ಸಮರ್ಥವಾಗಿ ನಿಭಾಯಿಸಿದ್ದೆ ಆದಲ್ಲಿ ಅರ್ಧ ಸಮಸ್ಯೆಗಳು ಬಗೆಹರಿ ಯುತ್ತವೆ. ನಿರ್ವಹಣೆಯಲ್ಲಿ ಆಗುವ ವೈಫ‌ಲ್ಯವು ಸಮಸ್ಯೆಗಳ ಸರಮಾಲೆಗಳನ್ನೇ ಸೃಷ್ಟಿಸುತ್ತದೆ. ಮುಡಾರು ಗ್ರಾ.ಪಂ. ವ್ಯಾಪ್ತಿಯ ದುಗ್ಗೊಟ್ಟು ಡಂಪಿಂಗ್‌ ಯಾರ್ಡ್‌ ನಲ್ಲಿ ಇದೇ ಆಗಿದ್ದು, ಪರಿಸರದ ನಾಗರಿಕರಿಗೆ ರೋಗ ಹರಡುವ ಕೇಂದ್ರವಾಗಿ ಯಾರ್ಡ್‌ ಮಾರ್ಪಟ್ಟಿದೆ.

ದುಗ್ಗೊಟ್ಟುವಿನಲ್ಲಿ ಮುಡಾರು ಗ್ರಾ.ಪಂ.ನ ತ್ಯಾಜ್ಯ ಸಂಗ್ರಹ ಡಂಪಿಂಗ್‌ ಯಾರ್ಡ್‌ ಇದೆ. ಆವರಣವೂ ಇದೆ. ಆವರಣದೊಳಗೆ ಸೂಚಿತ ಪ್ರದೇಶದಲ್ಲಿ ಕಸ ಹಾಕದೆ ಹೊರ ಭಾಗದಲ್ಲಿ ತ್ಯಾಜ್ಯ ತಂದು ಎಸೆಯಲಾಗುತ್ತಿದೆ. ಕಸ, ತ್ಯಾಜ್ಯ ಎಲ್ಲೆಂದರಲ್ಲಿ ಸುರಿಯುತ್ತಿರುವುದರಿಂದ ಆಗುತ್ತಿರುವ ಸಮಸ್ಯೆಗಳು ಸುತ್ತಮುತ್ತಲಿನ ನಾಗರಿಕರ ನೆಮ್ಮದಿ ಕೆಡಿಸಿದೆ. ಸಾರ್ವಜನಿಕರೋ ಕೋಳಿ ಮಾರಾಟ ಗಾರರೋ ಇನ್ಯಾರೋ ಕೋಳಿ ಮಾಂಸ ಇನ್ನಿತರ ತ್ಯಾಜ್ಯಗಳನ್ನು ಇಲ್ಲಿ ತಂದು ಎಸೆದು ಹೋಗುತ್ತಿದ್ದಾರೆ.

ಪಂ. ಡಂಪಿಂಗ್‌ ಯಾರ್ಡ್‌ ಇದು
ಕಸ ವಿಲೆವಾರಿ ವೈಜ್ಞಾನಿಕವಾಗಿ ವಿಲೇವಾರಿ ನಡೆಯುತ್ತಿದೆ. ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಸಗ್ರಿಗೇಟ್‌ ಮಾಡಲು ಸಾಧ್ಯವಾಗದನ್ನು ಮಡ್ಡು, ಮಣ್ಣು ಮಿಶ್ರಿತ ಅಂಶಗಳುಳ್ಳ ಇಂತಹವುಗಳನ್ನು ಪ್ರತ್ಯೇಕವಾಗಿ ಇಂತಿಷ್ಟು ಎಂದು ಇಲ್ಲಿನ ಡಂಪಿಂಗ್‌ ಸೈಟ್‌ನಲ್ಲಿ ಸಂಗ್ರಹಿಸಿಡಲು ಅವಕಾಶವಿದೆ. ಸಾರ್ವಜನಿಕರು ಕಸ, ತ್ಯಾಜ್ಯ ತಂದು ಇಲ್ಲಿ ಎಸೆಯುತ್ತಿರುವ ಬಗ್ಗೆಯೂ ನಮಗೆ ದೂರು ಬಂದಿದೆ. ಬೀಗ ಇದ್ದರೂ ಒಡೆಯುತ್ತಾರೆ. ಜನವಸತಿ ಇಲ್ಲದ ಸ್ಥಳ ಇದಾಗಿದ್ದು. ಸಿಸಿ ಕೆಮರಾ ಅಳವಡಿಸುವುದು ಕೂಡ ಕಷ್ಟ. ಈ ಬಗ್ಗೆ ಮುಂದಿನ ಸಭೆಯಲ್ಲಿ ರಕ್ಷಣಾತ್ಮಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಂ. ಪಿಡಿಒ ರಮೇಶ್‌ ಹೇಳುತ್ತಾರೆ.

ಭೂಮಿಯೊಡಲು ಸೇರುತ್ತಿದೆ ಕಸ
ದುಗ್ಗೊಟ್ಟು ಪರಿಸರದಲ್ಲಿ ಕಸ ನಿರ್ವಹಣೆ ಪರಿಸ್ಥಿತಿ ಹೇಗಿದೆ ಎಂದು ಖುದ್ದಾಗಿ ಒಮ್ಮೆ ಹೋಗಿ ನೋಡಿದರೆ ವಸ್ತು ಸ್ಥಿತಿಯೇ ಬೇರೆಯದೇ ಅಲ್ಲಿದೆ. ಆಳೆತ್ತರದ ಹೊಂಡಗಳನ್ನು ಅಗೆದು ಕಸ, ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ಭೂಭರ್ತಿ ಮಾಡಲಾಗುತ್ತಿದೆ. ಗೋಣಿ ಚೀಲಗಳಲ್ಲಿ ಪ್ಲಾಸ್ಟಿಕ್‌ ಇನ್ನಿತರ ಕರಗದ ತ್ಯಾಜ್ಯಗಳು ಕಂಡುಬರುತ್ತಿವೆ. ನೆಲದ ಮೇಲೂ ಸುರಿಯಲಾಗಿದೆ. ಒಣ ಕಸಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಆದರಿಲ್ಲಿ ಮಣ್ಣೊಳಗೆ ತುರುಕಿಸಿ, ಹುದುಗಿಸಿ ಭೂಭರ್ತಿ ಮಾಡಿ, ಭೂಮಿ ತಾಯ ಒಡಲಿಗೆೆ ವಿಷವನ್ನಿಕ್ಕುವ ಕೃತ್ಯ ನಡೆಯುತ್ತಿದೆ.

ಚಿರತೆ ಚಿಂತೆ, ರೋಗ ಭೀತಿ
ಯಾರ್ಡ್‌ನ ಅನತಿ ದೂರಗಳ ಪರಿಸರದಲ್ಲಿ 150ಕ್ಕೂ ಅಧಿಕ ಮನೆಗಳಿವೆ. ಪರಿಸರದಲ್ಲಿ ಅಂಗನವಾಡಿ, ಕಾಲೇಜು, ಹಾಸ್ಟೆಲ್‌ಗ‌ಳಿವೆ. ಕೊಳೆತ ತ್ಯಾಜ್ಯ, ಕಸಗಳನ್ನು ಇಲ್ಲಿ ತಂದು ಸುರಿಯುವುದರಿಂದ ಪರಿಸರ ಮಾಲಿನ್ಯ, ರೋಗ ಹರಡಲು ಕಾರಣವಾಗುತ್ತಿದೆ. ಗಬ್ಬು ವಾಸನೆ ಕಿ.ಮೀ. ದೂರಕ್ಕೆ ಹರಡುತ್ತಿದೆ. ಮಳೆ ಬಂದಾಗ ತ್ಯಾಜ್ಯಗಳು ನೀರಿನೊಂದಿಗೆ ಸೇರಿ ಪರಿಸರದ ಕೆಲವು ನಾಗರಿಕರ ಬಾವಿಗಳನ್ನು ಸೇರುತ್ತಿದೆ. ಕಾಡಿನಂಚಿನಲ್ಲಿ ಈ ಪ್ರದೇಶವಿದ್ದು ತ್ಯಾಜ್ಯಗಳನ್ನು ತಿನ್ನಲು ಚಿರತೆಗಳು ಇಲ್ಲಿಗೆ ಬರುತ್ತಿದ್ದು, ಇದೇ ಪರಿಸರದಲ್ಲಿ ಓಡಾಡುವ ಶಾಲಾ ಮಕ್ಕಳು, ಮಹಿಳೆಯರು, ನಾಗರಿಕರು ದಾಳಿ ಭೀತಿ ಎದುರಿಸುತ್ತಿದ್ದಾರೆ.

ಡಿಸಿ, ಮಾಲಿನ್ಯ ನಿಯಂತ್ರಣ ಬೋರ್ಡ್‌ ಗಮನಕ್ಕೂ ತಂದರೂ ಪ್ರಯೋಜವನಿಲ್ಲ
ಇಲ್ಲಿನ ಕಸ, ತ್ಯಾಜ್ಯ ಸಂಗ್ರಹಕ್ಕೆ ಮುಕ್ತಿ ನೀಡುವಂತೆ ವರ್ಷದ ಹಿಂದೆಯೇ ಸ್ಥಳೀಯಾಡಳಿತ, ತಾ.ಪಂ, ಜಿ.ಪಂ, ಜಿಲ್ಲಾಧಿಕಾರಿ, ಮಾಲಿನ್ಯ ನಿಯಂತ್ರಣ ಬೋರ್ಡ್‌ ತನಕವೂ ಮನವಿ ನೀಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ಅಲ್ಲಿಯವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಂಘ ಸಂಸ್ಥೆಗಳ ಪ್ರಯತ್ನವೂ ವ್ಯರ್ಥ
ಸ್ವತ್ಛ ಬಜಗೋಳಿ ತಂಡ ನಿರಂತರವಾಗಿ ಈ ಭಾಗದಲ್ಲಿ ಕಸ ಹೆಕ್ಕುವ ಅಭಿಯಾನವನ್ನು 61 ವಾರಗಳ ಕಾಲ ನಡೆಸಿದೆ. ಕಾರ್ಕಳ ಸ್ವತ್ಛ ಬ್ರಿಗೇಡ್‌, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಸಹಕಾರದಲ್ಲಿ ನಡೆಸುತ್ತಾ ಬರುತ್ತಿದೆ. ಹೆಕ್ಕಿ ನೀಡಿದ ಕಸವನ್ನು° 3 ತಿಂಗಳಾದರೂ ಪಂ. ವಿಲೇವಾರಿ ಮಾಡುತ್ತಿಲ್ಲ ಎಂದು ಸ್ವತ್ಛ ಬಜಗೋಳಿ ತಂಡದ ಸದಸ್ಯರು ಬೇಸರ ವ್ಯಕ್ತಪಡಿಸುತ್ತಾರೆ.

ಭೂಭರ್ತಿಗೆ ಅವಕಾಶವಿಲ್ಲ
ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ನಡೆಸಬೇಕು, ಭೂಗರ್ಭಕ್ಕೆ ಸೇರಿಸುವುದಕ್ಕೆ ಅವಕಾಶ ವಿಲ್ಲ. ಎಂಆರ್‌ಎಫ್ ಘಟಕಕ್ಕೆ ಕೊಂಡೊಯ್ಯ ಲಾಗದ ತ್ಯಾಜ್ಯವನ್ನು ಸಂಗ್ರಹಿಸಿಡಲು ಅವಕಾಶವಿದೆ. ಆದರೆ ಹಾಗೆ ಮಣ್ಣಿನಲ್ಲಿ ಹೂಳಲು ಅವಕಾಶವಿಲ್ಲ. ಈ ಬಗ್ಗೆ ಮಾಹಿತಿ ಪಡೆಯುವೆ.
– ಗುರುದತ್ತ್, ಇಒ ತಾ.ಪಂ. ಕಾರ್ಕಳ

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.