ಖಜಾನೆ-2: ಇ-ಪಾವತಿ ವ್ಯವಸ್ಥೆ ಉಡುಪಿಯಲ್ಲಿ ಯಶಸ್ವಿ; ರಾಜ್ಯಕ್ಕೆ ವಿಸ್ತರಣೆ


Team Udayavani, May 28, 2019, 6:10 AM IST

e-payment

ಉಡುಪಿ: ಜಿ.ಪಂ, ತಾ.ಪಂ. ಬಿಲ್‌ ಪಾವತಿ ಪಾರದರ್ಶಕವಾಗಿರಬೇಕೆಂಬ ಉದ್ದೇಶದಿಂದ ಉಡುಪಿ ಜಿಲ್ಲಾಮಟ್ಟದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದ ಖಜಾನೆ-2 (ಕೆ2) ಆನ್‌ಲೈನ್‌ ಪಾವತಿ ವ್ಯವಸ್ಥೆ ಯಶಸ್ವಿಯಾಗಿದ್ದು, ಈಗ ರಾಜ್ಯಕ್ಕೆ ವಿಸ್ತರಣೆಗೊಂಡಿದೆ.

ಆಧಾರ್‌ ಅನಂತರ ಕೆ2ನಲ್ಲಿಯೂ ಉಡುಪಿ ಜಿಲ್ಲೆ ಸರಕಾರದ ಮಹತ್ವದ ಯೋಜನೆಯನ್ನು ಪ್ರಾಯೋಗಿಕವಾಗಿ ಸಮರ್ಪಕವಾಗಿ ಜಾರಿಗೊಳಿಸು ವಲ್ಲಿ ಸಫ‌ಲವಾದಂತಾಗಿದೆ. ಈ ಹಿಂದೆ ಆಧಾರ್‌ ಯೋಜನೆ ಜಾರಿಗೂ ಉಡುಪಿ ಪ್ರಾಯೋಗಿಕ ಜಿಲ್ಲೆಯಾಗಿತ್ತು. ಕೆ2 ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಉಡುಪಿ ಜತೆಗೆ ಗದಗವನ್ನೂ ಆಯ್ಕೆ ಮಾಡಲಾಗಿದ್ದು, ಇವೆರಡೂ ಯಶ ಸಾಧಿಸಿವೆ.

ಉಡುಪಿಯಲ್ಲಿ ಕಳೆದ ಅಕ್ಟೋಬರ್‌- ನವೆಂಬರ್‌ ನಲ್ಲಿ ಈ ಹೊಸ ವ್ಯವಸ್ಥೆ ಜಾರಿಯಾಗಿತ್ತು. ಜಿ.ಪಂ./ ತಾ.ಪಂ. ಆಡಳಿತ ವ್ಯಾಪ್ತಿ ಯಲ್ಲಿ ಬರುವ ಶಿಕ್ಷಣ, ಸಮಾಜ ಕಲ್ಯಾಣ, ಮೀನುಗಾರಿಕೆ, ಹಿಂದುಳಿದ ವರ್ಗಗಳ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ವಸತಿ ನಿಲಯಗಳು ಮೊದಲಾದವುಗಳ ನಿರ್ವಹಣೆ ವೆಚ್ಚ, ಕಾಮಗಾರಿಗಳ ಮೊತ್ತಗಳು, ಫ‌ಲಾನುಭವಿಗಳಿಗೆ ದೊರೆಯುವ ಸಹಾಯಧನ ಮತ್ತು ಇತರ ಹಣಕಾಸು ಸೌಲಭ್ಯಗಳ ಬಿಲ್‌ಗ‌ಳು ಕೆ2ನಲ್ಲೇ ಪಾವತಿಯಾಗುತ್ತಿವೆ.

ಈ ತಿಂಗಳು 4 ಇಲಾಖೆಗಳ ವೇತನ
ಈಗಾಗಲೇ ಎಪ್ರಿಲ್‌ನಿಂದ ಖಜಾನೆ ಇಲಾಖೆಯ ವೇತನ ಕೆ2ನಲ್ಲಿ ಪಾವತಿಯಾಗುತ್ತಿದೆ. ಈ ತಿಂಗಳು ಅಬಕಾರಿ, ನೋಂದಣಿ ವಿಭಾಗ, ವಾಣಿಜ್ಯ ತೆರಿಗೆ, ಸಾರಿಗೆ ಹೀಗೆ ನಾಲ್ಕು ಇಲಾಖೆಗಳ ವೇತನ ಇದರಲ್ಲೇ ಪಾವತಿಯಾಗಲಿದೆ. ಮುಂದಿನ ಹಂತ ಗಳಲ್ಲಿ ಎಲ್ಲ ಇಲಾಖೆಗಳ ವೇತನ ಕೂಡ ಹೀಗೇ ಪಾವತಿಯಾಗಲಿದೆ. ಉಡುಪಿಯ ಅನಂತರ ಬೀದರ್‌, ಧಾರವಾಡ, ಚಿತ್ರದುರ್ಗಾ ಬಳ್ಳಾರಿ, ಚಿಕ್ಕಬಳ್ಳಾಪುರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ಆ ಬಳಿಕ ಎ.1ರಿಂದ ಉಳಿದೆಲ್ಲ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ.

ಗ್ರಾ.ಪಂ.ಗಳಿಗೂ ಕೆ2?
ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ ಮತ್ತು ಕಾಪು ಪುರಸಭೆ ಹಾಗೂ ಸಾಲಿಗ್ರಾಮ ಪ.ಪಂ.ಗಳಿಗೆ ಸಂಬಂಧಿಸಿದ ವೇತನ ಮತ್ತು ವೇತನೇತರ ಪಾವತಿಗಳು ಮೇ ತಿಂಗಳಿನಿಂದ ಖಜಾನೆ 2ನಲ್ಲಿಯೇ ಆನ್‌ಲೈನ್‌ ಮೂಲಕ ನಡೆಯುತ್ತಿವೆ. ಮುಂದಿನ ಹಂತದಲ್ಲಿ ಗ್ರಾ.ಪಂ.ಗಳಲ್ಲಿಯೂ ಇದೇ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆಗಳಿವೆ.

ನೇರ ಜಮೆ, ಚೆಕ್‌ ಪದ್ಧತಿ ರದ್ದು
ಕೆ2 ಅಂತಾರಾಷ್ಟ್ರೀಯ ಹಣಕಾಸು ನಿರ್ವಹಣಾ ವ್ಯವಸ್ಥೆ (ಐಎಫ್ಎಂಎಸ್‌) ಅಡಿಯಲ್ಲಿ ಅನುಷ್ಠಾನ ಗೊಂಡಿದೆ. ಅಂತರ್ಜಾಲದ ಮೂಲಕವೇ ನಡೆಯುವ ಇದರಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಸರಕಾರದ ವಿವಿಧ ಯೋಜನೆಗಳ ಫ‌ಲಾನುಭವಿಗಳು ಮತ್ತು ವಿವಿಧ ಇಲಾಖೆಗಳಿಗೆ ಸರಕು ಸಾಮಗ್ರಿಗಳ ಸರಬರಾಜು ಮತ್ತು ಸೇವೆ ನೀಡುವವರ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ. ಜಿಲ್ಲಾ ಖಜಾನೆಯಿಂದ ಚೆಕ್‌ ನೀಡುವ ಪದ್ಧತಿ ರದ್ದಾಗುತ್ತದೆ. ರಾಜ್ಯಮಟ್ಟದಲ್ಲಿ ಇಲಾಖೆಗಳ ಪಾವತಿ ಕೆ2ಗೆ ಎರಡು ವರ್ಷಗಳ ಹಿಂದೆಯೇ ಜೋಡಣೆಯಾಗಿತ್ತು. ಈಗ ಜಿ.ಪಂ., ತಾ.ಪಂ.ಗಳು ಕೂಡ ಇದರಡಿ ಬಂದು ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಮಹತ್ವದ ಹೆಜ್ಜೆ ಇರಿಸಿದಂತಾಗುತ್ತಿದೆ.

ಕೆ2 ಇ-ಪಾವತಿ ಪ್ರಯೋಜನ
– ಸರಬರಾಜುದಾರರು/ ಗುತ್ತಿಗೆದಾರರ ಖಾತೆಗೆ ನೇರ ಪಾವತಿ.
– ಫ‌ಲಾನುಭವಿ/ಸರಬರಾಜುದಾರರಿಗೆ ತ್ವರಿತ ಪಾವತಿ
– ಮಧ್ಯವರ್ತಿಗಳಿಗೆ ಅವಕಾಶವಿಲ್ಲ
– ಪಾರದರ್ಶಕತೆ ತಂದು ಭ್ರಷ್ಟಾಚಾರಕ್ಕೆ ಕಡಿವಾಣ ಸಾಧ್ಯ
– ಸಿಬಂದಿಯ ಬಿಲ್‌ ಪ್ರಕ್ರಿಯೆಯ ಹೆಚ್ಚುವರಿ ಹೊರೆ ಇಳಿಕೆ
– ಫ‌ಲಾನುಭವಿಗಳ ಖಾತೆಗೆ ನೇರ ಜಮೆ

ಜಿ.ಪಂ. ಮತ್ತು ತಾ.ಪಂ. ಮಟ್ಟದಲ್ಲಿಯೂ ಕೆ2 ವ್ಯವಸ್ಥೆ ಇಡೀ ರಾಜ್ಯದಲ್ಲಿ ಎಪ್ರಿಲ್‌ನಿಂದ ಜಾರಿಗೊಂಡಿದೆ. ಉಡುಪಿಯಲ್ಲಿ ಕೆ2 ವ್ಯವಸ್ಥೆ ನವೆಂಬರ್‌ನಲ್ಲಿ ಜಾರಿಯಾಗಿ ಕಳೆದ ಆರ್ಥಿಕ ವರ್ಷದಲ್ಲಿ ಅದರ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ತಿಂಗಳು 4 ಇಲಾಖೆಗಳ ವೇತನ ಕೂಡ ಕೆ2 ವ್ಯಾಪ್ತಿಗೆ ಬರಲಿದೆ.
– ಸಾವಿತ್ರಿ, ಜಿಲ್ಲಾ ಖಜಾನಾಧಿಕಾರಿ

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.