ಕಾಪು: ಮಲ್ಲಾರು – ಪಕೀರಣಕಟ್ಟೆ ಗುಜರಿ ಅಂಗಡಿಯಲ್ಲಿ ಸ್ಪೋಟ, ಇಬ್ಬರ ಸಜೀವ ದಹನ
Team Udayavani, Mar 21, 2022, 11:40 AM IST
ಕಾಪು : ಗುಜರಿ ಅಂಗಡಿಗೆ ಬೆಂಕಿ ಬಿದ್ದು ಇಬ್ಬರು ಸಜೀವ ದಹನವಾಗಿರುವ ಘಟನೆ ಕಾಪು ತಾಲೂಕಿನ ಮಲ್ಲಾರು ದಾಬ ನಿವಾಸ ಬಳಿ ನಡೆದಿದೆ.
ಗುಜರಿ ಅಂಗಡಿಯೊಳಗೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು, ಗುಜರಿ ಅಂಗಡಿ ಮಾಲೀಕ
ರಜಾಬ್ ಮಜೂರು ಹಾಗೂ ಮ್ಯಾನೇಜರ್ ರಜಾಬ್ ಪಕೀರಣಕಟ್ಟೆ ಇವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿದ್ದಾರೆ.
ಸ್ಥಳೀಯರ ಪ್ರಕಾರ ಗುಜರಿ ಅಂಗಡಿಯೊಳಗೆ ಐದು ಮಂದಿ ಇದ್ದರೆಂದು ಹೇಳಲಾಗುತ್ತಿದೆ.
ಉಡುಪಿ ಅಗ್ನಿಶಾಮಕ ದಳ, ಅದಾನಿ – ಯುಪಿಸಿಎಲ್ ಅಗ್ನಿಶಾಮಕವಾಹನ, ಐ.ಎಸ್.ಪಿ.ಆರ್.ಎಲ್ ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ.
ಬೆಂಕಿಯ ಕೆನ್ನಾಲಗೆ ಎಲ್ಲೆಡೆ ಹಬ್ಬುತ್ತಿದ್ದು ಸುತ್ತಮುತ್ತಲಿನ ಮನೆ, ವಸತಿ ಸಮುಚ್ಚಯ, ಮಸೀದಿಗೂ ಹಾನಿಯುಂಟಾಗುವ ಭೀತಿ ಎದುರಾಗಿದೆ.
ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.