ಮಲ್ಪೆಯಲ್ಲಿ ನಾಡದೋಣಿ ಅವಘಡ : ಇಬ್ಬರು ಮೀನುಗಾರರು ಸಮುದ್ರಪಾಲು


Team Udayavani, Jul 26, 2018, 4:00 AM IST

boat-malpe-25-7.jpg

ಮಲ್ಪೆ: ಸಾಂಪ್ರದಾಯಿಕ ಮೀನುಗಾರಿಕೆಯ ನಾಡದೋಣಿ ಮುಳುಗಿ ಇಬ್ಬರು ಮೀನುಗಾರರು ಸಮುದ್ರಪಾಲಾದ ಘಟನೆ ಮಲ್ಪೆ ಪಡುಕರೆ ಶನೀಶ್ವರ ಪೂಜಾ ಮಂದಿರ ಸಮೀಪದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಉದ್ಯಾವರ ಪಿತ್ರೋಡಿಯ ಶೇಖರ ಸಾಲ್ಯಾನ್‌ ಆವರ ಪುತ್ರ ನಿತೇಶ್‌ ಸಾಲ್ಯಾನ್‌ (28) ಮತ್ತು ಸುರೇಶ್‌ ಕೋಟ್ಯಾನ್‌ ಅವರು ಪುತ್ರ ನಿಶಾಂತ್‌ ತಿಂಗಳಾಯ (19) ಸಮುದ್ರ ಪಾಲಾದವರು. ಗಂಭೀರ ಸ್ಥಿತಿಯಲ್ಲಿದ್ದ ತೊಟ್ಟಂ ಸಮೀಪದ ರಾಜೇಶ್‌ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿತೇಶ್‌ ಅವರ ಮೃತದೇಹ ಘಟನೆ ಸಂಭವಿಸಿದ ಅಲ್ಪ ಸಮಯದ ಬಳಿಕ ಸುಮಾರು 200 ಮೀ. ದೂರದಲ್ಲಿ ಪತ್ತೆಯಾಗಿದೆ. ನಿಶಾಂತ್‌ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

ಬುಧವಾರ ಬೆಳಗ್ಗೆ 7 ಗಂಟೆ ವೇಳೆಗೆ ಮಧುಕರ ಅವರ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ತೀರದಿಂದ 500 ಮೀ. ದೂರದಲ್ಲಿರುವಾಗ ದೊಡ್ಡ ಅಲೆಗಳು ಬಡಿದು ದೋಣಿ ಮಗುಚಿತು. ತತ್‌ ಕ್ಷಣ ಜತೆಯಲ್ಲಿದ್ದವರು ಕೆಲವರನ್ನು ರಕ್ಷಿಸಿದ್ದರು. ಈ ಇಬ್ಬರು ಅಲೆಗಳಲ್ಲಿ ಕೊಚ್ಚಿಹೋದರು.

ಆಳೆತ್ತರದ ಅಲೆಗಳು
ಮಳೆಗಾಲದ ಆರಂಭದಿಂದಲೂ ನಿರಂತರವಾಗಿ ಬೀಸುತ್ತಿರುವ ಗಾಳಿ- ಮಳೆಯಿಂದ ಸಮುದ್ರ ಪ್ರಕ್ಷುಬ್ಧವಾಗಿಯೇ ಇದೆ. ಮೂರು ದಿನಗಳ ಹಿಂದೆಯೂ ಸಮುದ್ರದಲೆಗೆ ಸಿಲುಕಿ ನಾಡದೋಣಿ ಮಗುಚಿ ಸಣ್ಣಪುಟ್ಟ ಅವಘಡಗಳು ಸಂಭವಿಸಿದ್ದವು.

ಗರಿಷ್ಠ ಪರಿಹಾರ ಭರವಸೆ
ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ನೀಡಿದ ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರು ಕೇಂದ್ರ ಮತ್ತು ರಾಜ್ಯ ಪ್ರಕೃತಿ ವಿಕೋಪ ಅನುದಾನದಡಿ ಗರಿಷ್ಠ ಮೊತ್ತದ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಡಿವೈಎಸ್ಪಿ ಕುಮಾರಸ್ವಾಮಿ, ಮಲ್ಪೆ ಠಾಣಾಧಿಕಾರಿ ಮಧು ಬಿ.ಇ. ಭೇಟಿ ನೀಡಿದ್ದಾರೆ.

ಅಕ್ಕಪಕ್ಕದ ಮನೆಯವರು
ನಿತೇಶ್‌ ಸಾಲ್ಯಾನ್‌ ಮತ್ತು ನಿಶಾಂತ್‌ ತಿಂಗಳಾಯ ಅವರ ಮನೆ ಪಿತ್ರೋಡಿ ಯಶಸ್ವಿ ಫಿಶ್‌ ಮೀಲ್‌ ಬಳಿ ಅಕ್ಕಪಕ್ಕದಲ್ಲಿವೆ. ಆತ್ಮಿಯ ಗಳೆಯರಾಗಿದ್ದ ಅವರು ಪಿತ್ರೋಡಿಯ ವೆಂಕಟರಮಣ ಕ್ರಿಕೆಟ್‌ ತಂಡದಲ್ಲಿದ್ದು ಉತ್ತಮ ಕ್ರಿಕೆಟ್‌ ಆಟಗಾರರೂ ಆಗಿದ್ದರು.

5 ತಿಂಗಳ ಹಿಂದೆ ಮದುವೆಯಾಗಿದ್ದ ನಿತೇಶ್‌

ವಿದೇಶದಲ್ಲಿ ಉದ್ಯೋಗದಲ್ಲಿದ್ದ ನಿತೇಶ್‌ ಅವರು ಮೂರು ವರ್ಷದ ಹಿಂದೆ ತನ್ನ  ತಮ್ಮ ಬೈಕ್‌ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಊರಿಗೆ ಬಂದು ನೆಲೆಸಿದ್ದರು. 5 ತಿಂಗಳ ಹಿಂದೆ ಅವರಿಗೆ ಮದುವೆಯಾಗಿತ್ತು. ಮನೆಯಲ್ಲಿ ತಂದೆ-ತಾಯಿ, ಪತ್ನಿ ಇದ್ದು ತಂಗಿಗೆ ಮದುವೆಯಾಗಿದೆ. ಜೀವನೋಪಾಯಕ್ಕೆ ಮಲ್ಪೆ ಮೀನುಗಾರಿಕೆ ಬಂದರಿನ ಕನ್ನಿಪಾರ್ಟಿ ಒಂದರಲ್ಲಿ ಕೆಲಸವನ್ನು ಮಾಡುತ್ತಿದ್ದರು. ಕುಟುಂಬದ ಎಲ್ಲ  ಜವಾಬ್ದಾರಿ ಅವರ ಮೇಲಿತ್ತು.

ಕುಟುಂಬದ ಆಧಾರವಾಗಿದ್ದ ನಿಶಾಂತ್‌

ನಿಶಾಂತ್‌ ಮಲ್ಪೆಯ ಮೀನು ವ್ಯಾಪಾರ ಸಂಸ್ಥೆಯಲ್ಲಿ ದುಡಿಯುತ್ತಿದ್ದರು. ಅವರದು ಬಡ ಕುಟುಂಬ. ತಂದೆ ಮನೆಯಲ್ಲೇ ಇದ್ದು, ತಾಯಿ ಫಿಶ್‌ ಮೀಲ್‌ ಒಂದರಲ್ಲಿ ಮೀನು ಕಟ್ಟಿಂಗ್‌ ಕೆಲಸಕ್ಕೆ ಹೋಗುತ್ತಿದ್ದಾರೆ. ಮಳೆಗಾಲದಲ್ಲಿ ಜೀವನ ನಿರ್ವಹಣೆಗಾಗಿ ಬೇರೆ ಆದಾಯದ ಮೂಲ ಇಲ್ಲದ್ದರಿಂದ ಕೈರಂಪಣಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದರು. ನಿಶಾಂತ್‌ ಅವರ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿತ್ತು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.