ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ ಬಂಗೇರ ಕೋವಿಡ್ ಗೆ ಬಲಿ
Team Udayavani, Jun 10, 2021, 10:03 PM IST
ಉಡುಪಿ: ಭಾರತ ಹಾಗೂ ಮಹಾರಾಷ್ತ್ರ ಫುಟ್ಬಾಲ್ ತಂಡದ ಮಾಜಿ ನಾಯಕ, ಗೋಲ್ಕೀಪರ್ ಹಾಗೂ ಕೋಚ್ ಶೇಖರ ಬಂಗೇರ ಅವರು ಜೂ. 8ರಂದು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. 74 ವರ್ಷ ಪ್ರಾಯದ ಬಂಗೇರ, ಜೂ.1ರಂದು ಸೋಂಕಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಉಡುಪಿ ಸಮೀಪದ ಬಡಾನಿಡಿಯೂರು ಮೂಲದ ಶೇಖರ ಬಂಗೇರ ಅವರ ಫುಟ್ಬಾಲ್ ಬದುಕೆಲ್ಲಾ ಅರಳಿ, ಬೆಳಗಿದ್ದು ಮುಂಬಯಿಯ ಓರ್ಕೆ ಮಿಲ್ಸ್ ಫುಟ್ಬಾಲ್ ತಂಡದಲ್ಲಿ. ಫುಟ್ಬಾಲ್ನಲ್ಲಿ ಗೋಲ್ಕೀಪರ್ ಆಗಿ ಮಿಂಚಿದ ಅವರು 80ರ ದಶಕದ ಪ್ರಾರಂಭದಲ್ಲಿ ಭಾರತ ಎಐಎಫ್ಎಫ್ ಫುಟ್ಬಾಲ್ ತಂಡದ ನಾಯಕರೂ ಆಗಿದ್ದರು.
ಮುಂಬಯಿಯ ಓರ್ಕೆ ಮಿಲ್ಸ್ ಫುಟಬಾಲ್ ತಂಡದ ಗೋಲ್ಕೀಪರ್, ನಾಯಕರಾಗಿದ್ದ ಅವರು ತಂಡ ಪ್ರತಿಷ್ಠಿತ ಫೆಡರೇಷನ್ ಕಪ್ ಫುಟ್ಬಾಲ್ ಪ್ರಶಸ್ತಿ ಗೆಲ್ಲಲು ಪ್ರಮುಖ ಕಾರಣರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ