Fraud: ಯುವತಿಗೆ ವಂಚನೆ, ಬೆದರಿಕೆ; ಆರೋಪ
Team Udayavani, Feb 22, 2024, 9:54 PM IST
ಬ್ರಹ್ಮಾವರ: ಪ್ರೀತಿಯ ನೆಪದಲ್ಲಿ ಹೆಗ್ಗುಂಜೆ ಪಡುಬಾರಾಳಿಯ ಮಾಧವ ವಂಚಿಸಿರುವುದಾಗಿ ಬ್ರಹ್ಮಾವರದ ಯುವತಿ ದೂರು ನೀಡಿದ್ದಾರೆ.
ಆರೋಪಿ ಮಾಧವ ಮದುವೆಯಾಗುವುದಾಗಿ ನಂಬಿಸಿ ನನಗೆ ಸಾಲ ಇದೆ, ವಾಹನ ಖರೀದಿಸಲು ಇದೆ ಎಂದು ರೂ. 2,06,903 ಹಣವನ್ನು ಗೂಗಲ್ ಪೇ ಮೂಲಕ ಪಡೆದಿದ್ದನು. ಸುಮಾರು 80,000 ರೂ. ನಗದು, ಚಿನ್ನದ ಸರ ಮತ್ತು ಸಿಮ್ ಕಾರ್ಡ್ ಕೂಡ ಪಡೆದುಕೊಂಡಿದ್ದನು. ಇದುವರೆಗೆ ವಾಪಸ್ ನೀಡದೆ ವಂಚಿಸಿದ್ದಾನೆ. 2023ರ ಮೇ ತಿಂಗಳಲ್ಲಿ ಆರೋಪಿಯು ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದರೂ ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದೂ ಹೇಳುತ್ತಿದ್ದು, ಮೆಸೇಜ್ ಮಾಡಿ ಬೆದರಿಕೆ ಹಾಕುತ್ತಿದ್ದ. ನಂಬರ್ ಬ್ಲಾಕ್ ಮಾಡಿದ ಅನಂತರವೂ ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕಿಸಿ ನನ್ನ ವಿರುದ್ಧ ದೂರು ನೀಡಿದರೆ ಫೋಟೊವನ್ನು ಕಟೌಟ್ ಮಾಡಿ ಊರು ತುಂಬಾ ಹಾಕುತ್ತೇನೆ, ಮನೆಗೆ ಬಂದು ಗಲಾಟೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದು, ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಯುವತಿ ಆರೋಪಿಸಿದ್ದಾರೆ.
ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ