ಗಣೇಶೋತ್ಸವ ಸಂಭ್ರಮ : ನಿರಂತರ ಮಳೆಗೆ ಮುದುಡಿದ ಹೂವಿನ ವ್ಯಾಪಾರ
Team Udayavani, Sep 1, 2019, 6:16 AM IST
ಉಡುಪಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಹೂವು ಖರೀದಿಸುವವರ ಸಂಖ್ಯೆ ಕಡಿಮೆಯಾಗಿದ್ದು, ಹೂವಿನ ವ್ಯಾಪಾರಿಗಳ ಮುಖದಲ್ಲಿ ನಿರಾಶೆಯ ಭಾವ ಮೂಡಿದೆ.
ನಗರಕ್ಕೆ ಪ್ರತಿವರ್ಷ ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ, ಪರ್ಯಾಯ ಪ್ರಯುಕ್ತ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಹೂವಿನ ವ್ಯಾಪಾರಿಗಳು ಆಗಮಿಸುತ್ತಾರೆ. ವ್ಯಾಪಾರದಲ್ಲಿ ಉತ್ತಮ ಲಾಭಗಳಿಸಿ ನಗು ಮುಖದಿಂದ ಹಿಂದಿರುಗಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ವ್ಯಾಪಾರಿಗಳು ಬರಿ ಗೈಯಲ್ಲಿ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೂ ಮಾರಾಟ ಕುಂಠಿತ
ನಗರದಲ್ಲಿ ಇದೇ ಮೊದಲ ಬಾರಿ ಹೂವಿನ ಮಾರಾಟ ಕುಂಠಿತವಾಗಿದೆ. ಮಳೆ ಯಿಂದಾಗಿ ಜನರು ಬೀದಿಗೆ ಬಂದು ಹೂವುಗಳನ್ನು ಖರೀದಿಸಲು
ಹಿಂದೇಟು ಹಾಕುತ್ತಿದ್ದಾರೆ. ತುಂತುರು ಮಳೆಯಿಂದಾಗಿ ಹೂವಿನ ಬಣ್ಣ ಹಾಳಾಗುತ್ತಿದೆ.
ಸಂಕಷ್ಟದಲ್ಲೂ “ಚೌಕಾಶಿ’
ನಗರದ ವಿವಿಧ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಹೂವು ಹರಡಿ
ಕೊಂಡಿರುವ ಮಾರಾಟಗಾರರು ಮಳೆಯಿಂದ ಹೂವು ರಕ್ಷಿಸಿಕೊಳ್ಳಲು ಟೆಂಟ್ ಹಾಕಿಕೊಂಡಿದ್ದಾರೆ.
ಹೂವಿನ ಜತೆಗೆ ಮಾರಾಟಗಾರರೂ ಟೆಂಟ್ ಆಶ್ರಯಿಸಿಕೊಂಡಿರುವುದು ಕಂಡುಬಂತು. ಏತನ್ಮಧ್ಯೆ ಹವಾನಿಯಂತ್ರಿತ ಕಾರುಗಳಲ್ಲಿ ಬಂದು ಹೂವಿನ ವಾಪಾರಸ್ಥರಲ್ಲಿ ಚೌಕಾಶಿ ಮಾಡುವುದೂ ಕಂಡುಬಂತು.
ಲಾಭಕ್ಕಿಂತ ನಷ್ಟವೇ ಅಧಿಕ!
ಕಳೆದ 8ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವ್ಯಾಪಾರ ಕುಂಠಿತವಾಗಿದೆ. ಮಳೆ
ಯಿಂದಾಗಿ ಜನರು ಹೂವಿನ ಖರೀದಿಗೆ ಮುಂದೆ ಬರುತ್ತಿಲ್ಲ. ಸಾವಿರಾರು ರೂ. ವ್ಯಯಿಸಿ ಖರೀದಿ ಮಾಡಿದ ಹೂ ಮಾರಾಟವಾಗದೆ ಹಾಗೇ ಉಳಿದುಕೊಂಡಿದೆ. ಸೋಮವಾರ ಬೆಳಗ್ಗೆ 12 ಗಂಟೆಯ ಒಳಗೆ ಮಾರಾಟವಾಗದೆ ಹೋದರೆ ಹೂವಿನ ನಷ್ಟ ಕೈಯಿಂದ ಭರಿಸಬೇಕಾಗುತ್ತದೆ.
– ಶಿವನ ಗೌಡ, ಚಿಕ್ಕಮಗಳೂರು ವ್ಯಾಪಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ