ಗಂಗೊಳ್ಳಿ : ಕಡಲು ಕೊರೆತ ಪ್ರದೇಶಕ್ಕೆ ಸಿಪಿಎಂ ನಿಯೋಗ
Team Udayavani, Jul 28, 2018, 7:00 AM IST
ಕುಂದಾಪುರ: ಗಂಗೊಳ್ಳಿಯ ಸಮುದ್ರ ಕಿನಾರೆಯ ಸಾಂತನಕೇರಿಯಲ್ಲಿ 8 ಕುಟುಂಬಗಳು ಕಡಲು ಕೊರೆತ ದಿಂದಾಗಿ ತೀವ್ರ ಆತಂಕ ಎದುರಿಸುತ್ತಿದ್ದು ಶುಕ್ರವಾರ ಸಿಪಿಎಂ ಪಕ್ಷದ ನಿಯೋಗವು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿತು.
ಈಗಾಗಲೇ ಕಡಲ ಕೊರೆತದ ರಭಸಕ್ಕೆ ತಂಗಿನ ತೋಟಗಳು, ಆಸ್ತಿ ಪಾಸ್ತಿ ಹಾನಿಗೊಳಗಾಗಿದ್ದು ಕುಟುಂಬಗಳು ನಷ್ಟ ಅನುಭವಿಸಿವೆ. ಕುಟುಂಬಗಳು ಪ್ರತಿದಿನ ರಾತ್ರಿ ನಿದ್ದೆ ಮಾಡದೇ ಆತಂಕದಿಂದ ಬದುಕುವಂತಾಗುತಿದೆ ಎಂದು ಕುಟುಂಬದ ಹಿರಿಯ ಜೀವಗಳು ನಿಯೋಗದ ಜತೆ ತಮ್ಮ ಅಳಲು ತೋಡಿಕೊಂಡರು. ಕಡಲು ಕೊರೆತ ತಡೆಗಟ್ಟಲು ಶಾಶ್ವತ ಪರಿಹಾರಕ್ಕಾಗಿ ಸರಕಾರ ಶೀಘ್ರ ಕ್ರಮ ವಹಿಸಲು ಒತ್ತಾಯಿಸಿ ಸ್ಥಳೀಯರಿಂದ ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿ ಬಳಿ ನಿಯೋಗ ತೆರಳುವುದಕ್ಕೆ ತೀರ್ಮಾನಿಸಲಾಯಿತು.
ನಿಯೋಗದಲ್ಲಿ ಸಿಪಿಎಂ ಬೆ„ಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಮುಖಂಡರಾದ ವೆಂಕಟೇಶ್ ಕೋಣಿ, ಸ್ಥಳೀಯ ಮುಖಂಡರಾದ ಚಿಕ್ಕ ಮೋಗವೀರ, ಅರುಣ್ ಕುಮಾರ್ ಗಂಗೊಳ್ಳಿ, ಸುಶೀಲ, ವಿವೇಕ್, ಅಭಿನಂದನ್ ಇದ್ದರು.ಜಿಲ್ಲಾಡಳಿತ ಶೀಘ್ರ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ನಿಯೋಗ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…