ಬೆಳ್ಳಾಲ ಸರಕಾರಿ ಆಸ್ಪತ್ರೆ : ವಾರದೊಳಗೆ ನೂತನ ಸುಸಜ್ಜಿತ ಕಟ್ಟಡ ಲೋಕಾರ್ಪಣೆ
Team Udayavani, Jul 4, 2019, 5:39 AM IST
ಕೆರಾಡಿ: ಬೆಳ್ಳಾಲದಲ್ಲಿರುವ ಸರಕಾರಿ ಆಯುರ್ವೇದ ಆಸ್ಪತ್ರೆಗೆ ಹೊಸದಾಗಿ ಸುಸಜ್ಜಿತ ಕಟ್ಟಡ ಸಿದ್ಧವಾಗಿದ್ದು, ಒಂದು ವಾರದೊಳಗೆ ಈ ನೂತನ ಕಟ್ಟಡದ ಲೋಕಾರ್ಪಣೆ ನಡೆಯುವ ಸಾಧ್ಯತೆಯಿದೆ. ಸಾಲು – ಸಾಲು ಚುನಾವಣಾ ನೀತಿ ಸಂಹಿತೆಯಿಂದಾಗಿ ಕಟ್ಟಡದ ಉದ್ಘಾಟನೆ ವಿಳಂಬವಾಗಿತ್ತು.
ಕೆರಾಡಿ ಗ್ರಾ.ಪಂ. ವ್ಯಾಪ್ತಿಯ ಬೆಳ್ಳಾಲ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಸರಕಾರಿ ಆಯುರ್ವೇದ ಆಸ್ಪತ್ರೆ ಕಾರ್ಯಾಚರಿಸುತ್ತಿದೆ. ಆದರೆ ಹಲವು ವರ್ಷಗಳಿಂದ ಹಳೆಯ ಕಟ್ಟಡದಲ್ಲಿಯೇ ಇದ್ದುದ್ದರಿಂದ ಜಿಲ್ಲಾ ಪಂಚಾಯತ್ನಿಂದ 15 ಲಕ್ಷ ರೂ. ಅನುದಾನ ನೂತನ ಕಟ್ಟಡಕ್ಕೆ ಮಂಜೂರಾಗಿದ್ದು, ಅದೀಗ ಕಾಮಗಾರಿ ಪೂರ್ಣಗೊಂಡಿದೆ.
ನೀತಿ ಸಂಹಿತೆ ಅಡ್ಡಿ
ಜಿ.ಪಂ.ನಿಂದ ಮಂಜೂರಾದ 15 ಲಕ್ಷ ರೂ. ವೆಚ್ಚದಲ್ಲಿ ಕಳೆದ ವರ್ಷ ಕಾಮಗಾರಿ ಆರಂಭಗೊಂಡಿದ್ದು, ಡಿಸೆಂಬರ್ – ಜನವರಿಯಲ್ಲಿ ಕಾಮಗಾರಿ ಮುಗಿದಿದೆ. ಆದರೆ ಆ ಬಳಿಕ ಉದ್ಘಾಟನೆಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅಡ್ಡಿಯಾಗಿದೆ. ಈಗ ಎಲ್ಲ ಅಡೆ – ತಡೆಗಳು ನಿವಾರಣೆಯಾಗಿದ್ದು, ಒಂದು ವಾರದೊಳಗೆ ಸರಕಾರಿ ಆಯುರ್ವೇದ ಆಸ್ಪತ್ರೆಯ ನೂತನ ಸುಸಜ್ಜಿತವಾದ ಕಟ್ಟಡ ಊರಿನ ಜನರ ಸೇವೆಗೆ ತೆರೆದುಕೊಳ್ಳಲಿದೆ.
ಏನೆಲ್ಲ ಇರಲಿದೆ?
ಈಗಾಗಲೇ ಹಳೆಯ ಕಟ್ಟಡದಲ್ಲಿ ಓಪಿಡಿ ಸೇವೆಯಿದ್ದು, ಅದು ಇಲ್ಲಿಯು ಮುಂದುವರಿಯಲಿದೆ. ಹೆಚ್ಚುವರಿಯಾಗಿ 2 ಕೋಣೆಗಳಿರಲಿದೆ. ಬರುವಂತಹ ರೋಗಿಗಳಿಗೆ ಕುಳಿತು ವಿಶ್ರಾಂತಿ ಪಡೆಯಲು ವ್ಯವಸ್ಥೆಯಿದೆ. ಔಷಧಿ ಇಡಲು ರ್ಯಾಕರ್ ವ್ಯವಸ್ಥೆಯಿದೆ. ಈಗ ಅಗತ್ಯವಾಗಿ ಬೇಕಾದ ಎಲ್ಲ ರೀತಿಯ ಔಷಧಿಗಳನ್ನು ದಾಸ್ತಾನು ಇರಿಸಲಾಗಿದೆ. ಔಷಧಿ ಕೊರತೆಯೇನಿಲ್ಲ. ಬೆಳ್ಳಾಲ, ಕೆರಾಡಿ ಭಾಗದಿಂದ ದಿನಕ್ಕೆ 35 – 40 ಮಂದಿ ಈ ಆಸ್ಪತ್ರೆಗೆ ಚಿಕಿತ್ಸೆ, ತಪಾಸಣೆಗಾಗಿ ಬರುತ್ತಾರೆ. ಮಳೆಗಾಲದಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಿದೆ ಎನ್ನುತ್ತಾರೆ ಇಲ್ಲಿನ ವೈದ್ಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ