ಹಂಗಳೂರು: ಅಪರಿಚಿತ ಶವದ ಗುರುತು ಪತ್ತೆ
Team Udayavani, Feb 10, 2018, 7:00 AM IST
ಕುಂದಾಪುರ: ಹಂಗಳೂರು ಗ್ರಾಮದ ನೇರಂಬಳ್ಳಿಯ ಹುಚ್ಕೆರಿಯ ಗದ್ದೆಯೊಂದರಲ್ಲಿ ಗುರುವಾರ ಅರೆ ಬೆಂದ ಸ್ಥಿತಿಯಲ್ಲಿ ಸಿಕ್ಕ ಅಪರಿಚಿತ ಮೃತದೇಹದ ಗುರುತು ಪತ್ತೆಯಾಗಿದ್ದು, ಮೃತಪಟ್ಟವರನ್ನು ವಡೇರ ಹೋಬಳಿಯ ಬಣಾಲೆಬೆಟ್ಟು ನಿವಾಸಿ ಶೇಖರ ಪೂಜಾರಿ (40) ಎಂದು ಗುರುತಿಸಲಾಗಿದೆ.
ವಿಪರೀತ ಕುಡಿತದ ಚಟ ಹೊಂದಿದ್ದ ಶೇಖರ ಪೂಜಾರಿ ಬುಧವಾರ ಬೆಳಗ್ಗೆ ಮನೆಯಿಂದ ಹೊರಟು ಬಂದಿದ್ದು, ಅನಂತರ ಮನೆಗೆ ವಾಪಸಾಗಿಲ್ಲ. ಈ ಹಿಂದೆಯೂ ಅವರು ಮನೆಯಿಂದ ಹೊರಗೆ ಹೋದರೆ 2-3 ದಿನಗಳವರೆಗೆ ಸುದ್ದಿಯಿರುತ್ತಿರಲಿಲ್ಲ. ಆದ್ದರಿಂದಲೇ ಮನೆಯವರು ತಲೆಕೆಡಿಸಿರ ಲಿಲ್ಲ. ಗುರುವಾರ ಅರೆಬೆಂದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾದ ಸುದ್ದಿ ತಿಳಿದು ಅನುಮಾನಗೊಂಡ ಮನೆಯ ವರು ಕುಂದಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ.
ಪತ್ತೆಗೆ ನೆರವಾದ ಹಲ್ಲು
ಶವ ಪತ್ತೆಯಾದ ಅರೆಕಲ್ಲು ತೋಡಿನಿಂದ ಸ್ವಲ್ಪ ದೂರದಲ್ಲಿ ಅವರ ಸೈಕಲ್ ಪತ್ತೆಯಾಗಿತ್ತು. ಈ ಹಿಂದೆ ಅಪಘಾತದಲ್ಲಿ ಅವರ ಒಂದು ಹಲ್ಲು ಉದುರಿ ಹೋಗಿದ್ದು, ಈ ಆಧಾರದ ಮೇಲೆ ಗುರುತು ಪತ್ತೆಹಚ್ಚಲಾಗಿದೆ.
ಗಾರೆ ಕೆಲಸ ಮಾಡುತ್ತಿದ್ದ ಶೇಖರ್ ಕೆಲವು ವರ್ಷಗಳ ಹಿಂದೆ ಮನೆ ಸಮೀಪದ ಯುವತಿ ಗಂಗೆಯನ್ನು ಪ್ರೀತಿಸಿ ಮದುವೆಯಾಗಿದ್ದರು.
ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸ ಲಾಗಿದೆ. ಸಾವಿನ ಬಗ್ಗೆ ಮನೆಯವರು ಶಂಕೆ ವ್ಯಕ್ತಪಡಿಸಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ತನಿಖೆ ಮುಂದುವರಿಯಲಿದೆ ಎಂದು ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್. “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ